ಬೆಂಗಳೂರು: ಕುಡಿದು ಬಂದು ಪ್ರತಿನಿತ್ಯ ಗಲಾಟೆ, ಕಿರುಕುಳಕ್ಕೆ ಬೇಸತ್ತು ತಂದೆಯಿಂದಲೇ ಮಗನ ಕೊಲೆ!

By Girish GoudarFirst Published Oct 19, 2024, 3:32 PM IST
Highlights

ಮಗ ರಾಜೇಶ್ ಕುಡಿದು ಬಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದನಂತೆ. ಮಗನ ಕಿರುಕುಳಕ್ಕೆ ಬೇಸತ್ತ ತಂದೆ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೆಂಗಳೂರು(ಅ.19):  ಮಗನ ಕೈ ಕಾಲು ಕಟ್ಟಿ ಹಲ್ಲೆ ನಡೆಸಿ ತಂದೆಯೇ ಕೊಲೆಗೈದ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ಇಂದು(ಶನಿವಾರ) ನಡೆದಿದೆ. ರಾಜೇಶ್ ಎಂಬಾತನೇ ತಂದೆಯಿಂದಲೇ ಕೊಲೆಯಾದ ದುರ್ದೈವಿ ಮಗ. ಲಿಂಗಪ್ಪ ಮಗನ ಕೊಲೆಗೈದ ಆರೋಪಿಯಾಗಿದ್ದಾನೆ. 

ಮಗ ರಾಜೇಶ್ ಕುಡಿದು ಬಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದನಂತೆ. ಮಗನ ಕಿರುಕುಳಕ್ಕೆ ಬೇಸತ್ತ ತಂದೆ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.  

Latest Videos

ಮೈಸೂರು: ನಂಜನಗೂಡಲ್ಲಿ ಕತ್ತು ಕೊಯ್ದು ವ್ಯಕ್ತೆ ಕೊಲೆ, ವಾಮಾಚಾರದ ಶಂಕೆ?

ಮಗನ ಕಿರುಕುಳ ತಾಳಲಾರದೇ ಲಿಂಗಪ್ಪ‌ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!