ಸಾಲಗಾರರ ಕಾಟಕ್ಕೆ ಹೆದರಿ ಸ್ನಾತಕೋತ್ತರ ಪದವೀಧರ ರೈತ ಆತ್ಮಹತ್ಯೆ

Kannadaprabha News   | Asianet News
Published : Aug 25, 2021, 07:34 AM IST
ಸಾಲಗಾರರ ಕಾಟಕ್ಕೆ ಹೆದರಿ ಸ್ನಾತಕೋತ್ತರ ಪದವೀಧರ ರೈತ ಆತ್ಮಹತ್ಯೆ

ಸಾರಾಂಶ

*  ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಪಟ್ಟಣದಲ್ಲಿ ನಡೆದ ಘಟನೆ *  ಡೆತ್‌ನೋಟ್‌ ಬರೆದಿಟ್ಟು ಸಾವಿಗೆ ಶರಣಾದ ರೈತ *  ಹೆಚ್ಚಾಗಿದ್ದ ಸಾಲಗಾರರ ಕಾಟ 

ಯಾದಗಿರಿ/ಶಹಾಪುರ(ಆ.25): ಶಹಾಪುರದಲ್ಲಿ ಯುವ ರೈತ ನಿಂಗಪ್ಪ(30) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಆತ್ಮಹತ್ಯೆಗೂ ಮುನ್ನ ಸಾಲಕೊಟ್ಟ ಫೈನಾನ್ಸ್‌ ಕಂಪನಿಗಳ ಕಿರುಕುಳ ಕುರಿತು ರೈತ ಮಾಡಿದ್ದ ವಿಡಿಯೋ ವೈರಲ್‌ ಆಗಿದೆ. ಅಲ್ಲದೇ ಖಾಸಗಿ ಫೈನಾನ್ಸ್‌ಗಳು ಬಡ್ಡಿ-ಚಕ್ರಬಡ್ಡಿ ನೆಪದಲ್ಲಿ ಸುಲಿಗೆ, ರೈತರಿಗೆ ಸರ್ಕಾರ ಸೌಲಭ್ಯಗಳ ನೀಡುತ್ತಿಲ್ಲವೆಂಬ ಮುಂತಾದ ಕಾರಣಗಳ ಡೆತ್‌ನೋಟ್‌ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. 

ವರದಕ್ಷಿಣೆಯಲ್ಲ, ವಧು ದಕ್ಷಿಣೆ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

ಎಂ.ಎ. ಬಿಎಡ್‌ ವ್ಯಾಸಾಂಗ ಮಾಡಿದ್ದ ನಿಂಗಪ್ಪ ನೌಕರಿ ಸಿಗದೆ ಇದ್ದಾಗ, ಕೃಷಿಯಲ್ಲೇ ಖುಷಿ ಪಡಬಹುದು ಎಂಬ ನಂಬಿಕೆಯ ಮೇಲೆ ಒಕ್ಕಲುತನ ಆಶ್ರಯಿಸಿದ್ದರು. ಆದರೆ ಸತತ 4 ವರ್ಷದಿಂದ ಸೂಕ್ತವಾದ ಬೆಳೆ, ಬೆಲೆ ಸಿಗದ ಕಾರಣ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಆದರೆ, ಸಾಲಗಾರರ ಕಾಟಕ್ಕೆ ಹೆದರಿ ಸೋಮವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!