ಸಚಿವೆ ಜೊಲ್ಲೆ ಒಡೆತನದ ಸೊಸೈಟಿಯಿಂದ ಸಾಲದ ನೋಟಿಸ್‌: ರೈತ ಆತ್ಮಹತ್ಯೆ

Kannadaprabha News   | Asianet News
Published : Feb 09, 2021, 11:38 AM ISTUpdated : Feb 09, 2021, 11:43 AM IST
ಸಚಿವೆ ಜೊಲ್ಲೆ ಒಡೆತನದ ಸೊಸೈಟಿಯಿಂದ ಸಾಲದ ನೋಟಿಸ್‌: ರೈತ ಆತ್ಮಹತ್ಯೆ

ಸಾರಾಂಶ

ಖಾಸಗಿ ಸಹಕಾರಿ ಬ್ಯಾಂಕಿನಿಂದ ಸಾಲ ಮರುಪಾವತಿ ಮಾಡುವಂತೆ ರೈತನಿಗೆ ನೋಟಿಸ್‌| ಧಾರವಾಡ ತಾಲೂಕಿನ ಕಮಲಾಪುರದಲ್ಲಿ ನಡೆದ ಘಟನೆ| ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಬೀರೇಶ್ವರ ಕೋ- ಆಪ್‌ ಸೊಸೈಟಿಯಲ್ಲಿ  ಸಾಲ ಮಾಡಿದ್ದ ರೈತ|

ಧಾರವಾಡ(ಫೆ.09): ಖಾಸಗಿ ಬ್ಯಾಂಕಿನಿಂದ ಸಾಲ ತುಂಬುವಂತೆ ನೋಟಿಸ್‌ ಬಂದ ಹಿನ್ನೆಲೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಮಲಾಪುರದಲ್ಲಿ ನಡೆದಿದೆ.

ಮಹಾರುದ್ರಪ್ಪ ಕೋಟಿ (52) ಆತ್ಮಹತ್ಯೆ ಮಾಡಿಕೊಂಡ ರೈತ. ಖಾಸಗಿ ಸಹಕಾರಿ ಬ್ಯಾಂಕಿನಿಂದ ಸಾಲ ಮರುಪಾವತಿ ಮಾಡುವಂತೆ ಇತ್ತೀಚೆಗೆ ನೋಟಿಸ್‌ ಬಂದಿತ್ತು.

ಬಳ್ಳಾರಿ: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಬೀರೇಶ್ವರ ಕೋ- ಆಪ್‌ ಸೊಸೈಟಿಯಲ್ಲಿ ಅವರು ಸಾಲ ಮಾಡಿದ್ದರು. ಅಲ್ಲಿಂದ ನೋಟಿಸ್‌ ಬಂದಿತ್ತು. ಇಲ್ಲಷ್ಟೇ ಅಲ್ಲದೇ, ವಿವಿಧೆಡ ಸುಮಾರು 5 ಲಕ್ಷ ಸಾಲ ಮಾಡಿದ್ದರು ಎಂದು ಹೇಳಲಾಗಿದೆ. ಊರ ಹೊರಗಿನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು