ಬೆಂಕಿ ಪೊಟ್ಟಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ತಿರುಗಿ ಬಂದು ಚಾಕು ಇರಿದರು!

Published : Oct 25, 2021, 06:09 PM ISTUpdated : Oct 25, 2021, 06:13 PM IST
ಬೆಂಕಿ ಪೊಟ್ಟಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ತಿರುಗಿ ಬಂದು ಚಾಕು ಇರಿದರು!

ಸಾರಾಂಶ

* ಕ್ಷುಲ್ಲಕ ಕಾರಣ ಕೊಲೆಯಲ್ಲಿ ಅಂತ್ಯ * ಬೆಂಕಿ ಪೊಟ್ಟಣಕ್ಕಾಗಿ ಉಂಟಾದ ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯಿತು * ಬಿಹಾರ ಮೂಲದ ಜ್ಯೂಸ್ ಸೆಂಟರ್ ಮಾಲೀಕನ ಹತ್ಯೆ

ಮೊಹಾಲಿ(ಅ. 25)  ದಶಕದ ನಂತರ ಬೆಂಕಿ ಪೊಟ್ಟಣದ(matchbox) ದರ ಜಾಸ್ತಿಯಾಗಿದೆ ಎನ್ನುವುದು ಸುದ್ದಿಯಾಗಿತ್ತು. ಆದರೆ ಇಲ್ಲಿ ಬೆಂಕಿ ಪೊಟ್ಟಣಕ್ಕಾಗಿ ಕೊಲೆಯೇ(Murder) ನಡೆದು ಹೋಗಿದೆ. 

ಇಬ್ಬರು ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೆ ಬಿಹಾರ ಮೂಲದ ಜ್ಯೂಸ್ ಸೆಂಟರ್ ಮಾಲೀಕನ ಹತ್ಯೆ ಮಾಡಿದ್ದಾರೆ.   ಚಂಡೀಘಡದ ಸೆಕ್ಟರ್  82  ದಲ್ಲಿ ಸಿಲ್ಲಿ ಮ್ಯಾಟರ್  ಗಾಗಿ ಕೊಲೆ(Crime News) ನಡೆದು ಹೋಗಿದೆ. 

ಆರೋಪಿಗಳನ್ನು ಭೂಪಿಂದರ್ ಸಿಂಗ್ ಮತ್ತು ರಿಂಕು ಎಂದು ಗುರುತಿಸಲಾಗಿದೆ. ಬಟಿಂಡಾದ ಧನ್ ಸಿಂಗ್ ಗ್ರಾಮದ ನಿವಾಸಿಯಾ ಭೂಪಿಂದರ್ ಆದರೆ , ರಿಂಕು ಮೊಹಾಲಿಯ ಜಗತ್ಪುರದಲ್ಲಿ ವಾಸ ಮಾಡುತ್ತಿದ್ದ.

ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಕೇಳಿದ್ದೇ ತಪ್ಪಾಯ್ತಾ? ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಹತ್ಯೆಗೀಡಾದ ವ್ಯಕ್ತಿಯನ್ನು ಪ್ರಿನ್ಸ್ ಕುಮಾರ್(28)  ಎಂದು ಗುರುತಿಸಲಾಗಿದೆ.   ಬಿಹಾರ ಮೂಲದ ವ್ಯಕ್ತಿ ಜ್ಯೂಸ್ ಸೆಂಟರ್ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಇವರ ಅಂಗಡಿ ಪಕ್ಕದಲ್ಲಿಯೇ ಕುಮಾರ್ ತಂದೆ ಮುಕ್ತಿಯಾರ್ ಸಿಂಗ್ ಎಂಬುವರು ಸಿಗರೇಟ್ ವ್ಯಾಪಾರ ಮಾಡ್ತಿದ್ದರು. ಮುಕ್ತಿಯಾರ್ ಬಳಿ ಆರೋಪಿಗಳು ಬಂದು ಮ್ಯಾಚ್ ಬಾಕ್ಸ್ ಕೇಳಿದ್ದಾರೆ.  ಆರೋಪಿಗಳು ಈಗಾಗಲೇ ಅಂಗಡಿಯಲ್ಲಿ ಐದು ನೂರು ರೂ. ಗೂ ಅಧಿಕ ಬಾಕಿ ಇಟ್ಟುಕೊಂಡಿದ್ದರು. ಇದೆ ಕಾರಣಕ್ಕೆ  ಬೆಂಕಿ ಪೊಟ್ಟಣ ಕೊಟ್ಟಿಲ್ಲ.  ಇದರಿಂದ ಆಕ್ರೋಶಗೊಂಡ ಆರೋಪಿಗಳು ಸಿಂಗ್  ಮೇಲೆ ಕೂಗಾಟ ಆರಂಭಿಸಿದ್ದಾರೆ. ಈ ವೇಳೆ ಗಲಾಟೆ ಬಿಡಿಸಲು ಮಗ ಕುಮಾರ್ ಅಲ್ಲಿಗೆ ಬಂದಿದ್ದಾರೆ. 

ಒಂದು ಹಂತಕ್ಕೆ ಗಲಾಟೆ ತಣ್ಣಗಾಗಿದ್ದು ಆರೋಪಿಗಳು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.  ಆದರೆ ಕೆಲ ಸಮಯದ ನಂತರ ವಾಪಸ್ ಬಂದು ಕುಮಾರ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಮನಸಿಗೆ ಬಂದಂತೆ ಇರಿದಿದ್ದಾರೆ.  ತಕ್ಷಣವೇ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ), 506 (ಕ್ರಿಮಿನಲ್ ಬೆದರಿಕೆ), ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಮಾಡಿದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿಮೂರು ದಿನಗಳ ಪೊಲೀಸ್ ಕಸ್ಟಡಿಗೆ  ನೀಡಲಾಗಿದೆ. 

ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಕೇಳಿದ್ದಕ್ಕೆ ಲಾರಿ ಕ್ಲೀನರ್‌ವೊಬ್ಬನನ್ನ ಮೂವರ ತಂಡ ಕೊಲೆ ಮಾಡಿದ ಘಟನೆ ನಗರದ ಬೆಳಗಾವಿ ನಾಕಾ ಬಳಿ  ನಡೆದಿತ್ತು. ಕೊಲೆಯಾದವರನ್ನ ಚಿತ್ರದುರ್ಗ ಮೂಲದ ಮಹಮ್ಮದ್ ಶಫೀವುಲ್ಲಾ ಎಂದು ಗುರುತಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್