
ಚಿಕ್ಕಮಗಳೂರು (ಮೇ.26): ಲವ್ ಮ್ಯಾರೇಜ್ ಆಗಿ 2 ಮಕ್ಕಳಾದ ಬಳಿಕ ಮತ್ತೊಂದು ಪ್ರೀತಿಯಲ್ಲಿ ಬಿದ್ದ ಮಹಿಳೆ ತನ್ನ ಗಂಡನನ್ನೇ ಕೊಂದಿರುವ ಘಟನೆ ನಡೆದಿದೆ. ಈಗ ಪ್ರೀತಿ ಮಾಡುತ್ತಿರುವ ಯುವಕನ ಜೊತೆ ಸೇರುವ ಸಲುವಾಗಿ, ಗಂಡನನ್ನೇ ಮಹಿಳೆ ಕೊಲೆ ಮಾಡಿದ್ದಾಳೆ.
ಲವರ್ಗೆ ಸುಪಾರಿ ನೀಡಿ ಗಂಡನನ್ನು ಕೊಲ್ಲಿಸಿರುವ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಕರಗುಂದಲ್ಲಿ ನಡೆದಿದೆ. ಮಹಿಳೆಯನ್ನು ಕಮಲಾ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯನ್ನು ಈಕೆಯ ಪತಿ 35 ವರ್ಷದ ಸುದರ್ಶನ್ ಎನ್ನಲಾಗಿದೆ. ಸುದರ್ಶನ್ ಮತ್ತು ಕಮಲ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಕೂಡ ಜನಿಸಿದ್ದರು.
ಇಬ್ಬರು ಮಕ್ಕಳಾದ ಬಳಿಕ ಕಮಲಾಳಿಗೆ ಶಿವರಾಜ್ ಎಂಬುವನ ಜೊತೆ ಮತ್ತೊಂದು ಪ್ರೇಮವಾಗಿದೆ. ಲವರ್ ಜೊತೆ ಸೇರುವ ಸಲುವಾಗಿ ಗಂಡನನ್ನೇ ಕೊಲ್ಲಲು ಕಮಲಾ ಸುಪಾರಿ ನೀಡಿದ್ದಳು.
ಮದ್ಯದಲ್ಲಿ ನಿದ್ದೆ ಮಾತ್ರೆ ಹಾಕಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಹೆಣವನ್ನ ಕರಗುಂದ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಎನ್.ಆರ್.ಪುರ ಪೊಲೀಸರಿಂದ ಕಮಲಾ ಸೇರಿ ಮೂವರ ಬಂಧನವಾಗಿದೆ.
ಗಂಡನನ್ನು ತಾನೇ ಕೊಲೆ ಮಾಡಿದ್ದಲ್ಲದೆ, ಗಂಡನ ಸಾವಿಗೆ ಠಾಣೆಯಲ್ಲಿ ಕಮಲಾ ದೂರು ಕೂಡ ನೀಡಿದ್ದಳು. ಪೊಲೀಸರ ವಿಚಾರಣೆಯಲ್ಲಿ ಅವಳೇ ಹಂತಕಿ ಅನ್ನೋದು ಸಾಬೀತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ