
ಬೆಂಗಳೂರು, (ಮಾ.07): ಬೆಂಗಳೂರಿನ ವಿಜಯನಗರ ಕ್ಷೇತ್ರದ ಬಿಜೆಪಿ ಮುಖಂಡ ಹಾಗೂ ಮಾಜಿ ಕಾರ್ಪೊರೇಟರ್ ಹೆಚ್. ರವೀಂದ್ರ ಕೋಟಿ- ಕೋಟಿ ರೂ. ಲೋನ್ ಆಸೆಗೆ ಬಿದ್ದು ಮೋಸ ಹೋಗಿದ್ದಾರೆ.
"
ಲೋನ್ ಆಸೆ ತೋರಿಸಿ ರವೀಂದ್ರ ಕೋಟ್ಯಂತರ ರೂ. ವಂಚಿಸಿದ ಖತರ್ನಾಕ್ ತಂಡವನ್ನು ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯ ಗುಪ್ತಾಂಗದಲ್ಲಿತ್ತು 8 ಕೋಟಿ ಮೌಲ್ಯದ ವಸ್ತು!
ತಮಿಳುನಾಡು ಮೂಲದ ಹರಿಗೋಪಾಲಕೃಷ್ಣನ್ ನಾಡರ್ ಮತ್ತು ತಂಡವನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಮಾರು 5 ಕೆಜಿಯಷ್ಟು ಚಿನ್ನದ ಒಡವೆ ಹಾಕ್ಕೊಂಡು ರವೀಂದ್ರ ಅವರನ್ನು ಭೇಟಿಯಾಗಿದ್ದ ಈ ಖತರ್ನಾಕ್ ತಂಡ, 150 ಕೋಟಿ ರೂ. ಲೋನ್ ಕೊಡಿಸೋ ಆಸೆ ತೋರಿಸಿದ್ದಾನೆ.
ಅಲ್ಲದೇ ಈ ವ್ಯವಹಾರಕ್ಕೆ 4.5 ಕೋಟಿ ರೂ. ಲಕ್ಷ ಅಗ್ರಿಮೆಂಟ್ ಚಾರ್ಜ್ ಪಡೆದಿತ್ತು. ಆದ್ರೆ, ಹಣ ಪಡೆದ ನಂತರ ನಾಡರ್ ನಾಪತ್ತೆಯಾಗಿದ್ದಾನೆ.
ಬಳಿಕ ರವೀಂದ್ರ ತಾವು ಮೋಸ ಹೋಗಿದ್ದು ಗೊತ್ತಾಗ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಸಿಸಿಬಿ ಟೀಂ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ವಿಚಾರಣೆ ನಡೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ