
ಉಡುಪಿ(ಜ. 01) ಮಂಗಳೂರಿನ ಕೇಬಲ್ ವಾಹಿನಿ ಮುಖ್ಯಸ್ಥರೊಬ್ಬರು ಅಸಹಜ ಸಾವು ಕಂಡಿದ್ದಾರೆ. ಎನ್ಎಂಸಿ ಕೇಬಲ್ ಚಾನೆಲ್ ಮಾಲೀಕ ರೋಹಿತ್ ರಾಜ್ (52) ಅನುಮಾನಾಸ್ಪದ ಸಾವಿಗೀಡಾಗಿದ್ದಾರೆ.
ಉಡುಪಿಯ ಮಣಿಪಾಲದ ಅಪಾರ್ಟ್ ಮೆಂಟಿನಲ್ಲಿ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಉಡುಪಿಯಲ್ಲಿ ನ್ಯೂ ಇಯರ್ ಪಾರ್ಟಿ ಮಾಡಿದ್ದ ರೋಹಿತ್ ಮತ್ತು ಪತ್ನಿ ಪಾರ್ಟಿ ಬಳಿಕ ಅಪಾರ್ಟ್ ಮೆಂಟ್ಗೆ ತೆರಳಿದ್ದರು.
ಸನ್ಯಾಸ ಬಿಟ್ಟರೆ ಪೇಜಾವರ ಸ್ವಾಮೀಜಿ ಪ್ರಧಾನಿ ಆಗುತ್ತಿದ್ದರು
ಇಂದು ಬೆಳಗ್ಗೆ ಮಣಿಪಾಲ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಫೊರೆನ್ಸಿಕ್ ತಜ್ಞರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ರೋಹಿತ್ ರಾಜ್ ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ತಲೆ ಹಾಗೂ ಎದೆ ಭಾಗದಲ್ಲಿ ಗಾಯದ ಗುರುತು ಕಂಡುಬಂದಿದೆ. ಮೊದಲ ಬಾರಿಗೆ ಕೇಬಲ್ ಚಾನೆಲ್ ಮಾಡಿದ್ದ ರೋಹಿತ್ ಮೂಲತಃ ಮಂಗಳೂರಿನ ಪಾಂಡೇಶ್ವರ ನಿವಾಸಿ ರೋಹಿತ್ ರಾಜ್ ಸುವರ್ಣ ಎನ್ಎಂಸಿ ಕೇಬಲ್ ನಡೆಸಿಕೊಂಡು ಬರುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ