
ಭೋಪಾಲ್(ಜೂ.13): ಲೈಂಗಿಕ ದೌರ್ಜನ್ಯವನ್ನು ಪ್ರತಿರೋಧಿಸಿದ ಮಹಿಳೆಯ ಮೇಲೆ ಪುರುಷರ ಗುಂಪೊಂದು ಪೇಪರ್ ಕಟ್ಟರ್ನಿಂದ ದಾಳಿ ಮಾಡಿದ ಬಳಿಕ ಆಕೆ ಶಸ್ತ್ರಚಿಕಿತ್ಸೆ ಒಳಗಾಗಿದ್ದು, ಮುಖಕ್ಕೆ 118 ಹೊಲಿಗೆ ಹಾಕಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಭೋಪಾಲದ ಟಿಟಿ ನಗರದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಶ್ರೀ ಸಾಯಿ ಪ್ಯಾಲೇಸ್ ಹೊಟೇಲಿಗೆ ಹೋಗಿದ್ದಳು. ಪಾರ್ಕಿಂಗ್ನಲ್ಲಿ ಕೆಲ ಪುರುಷರು ಗುಂಪಾಗಿ ನಿಂತಿದ್ದು, ಮಹಿಳೆಯ ಬಗ್ಗೆ ಅಶ್ಲೀಲ ಮಾತುಗಳನ್ನಾಡಿದರು. ಆಕೆ ಸಿಟ್ಟಿಗೆದ್ದು 3 ಪುರುಷರ ಕಪಾಳಕ್ಕೆ ಬಾರಿಸಿ, ಆಕೆ ಪತಿಯೊಂದಿಗೆ ಹೊಟೇಲಿಗೆ ಹೋಗಿದ್ದಳು.
ಇದಕ್ಕೆ ಪ್ರತಿಕಾರವಾಗಿ ಆಕೆ ಹೊಟೇಲಿನಿಂದ ಹೊರಬಂದಿದ್ದೇ ಪುರುಷರ ಗುಂಪು ಪೇಪರ್ ಕಟ್ಟರ್ ಬಳಸಿ ಆಕೆಯ ಮೇಲೆ ದಾಳಿ ಮಾಡಿದ್ದಾರೆ. ಪತಿ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆಯ ಮುಖಕ್ಕೆ 118 ಹೊಲಿಗೆ ಹಾಕಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಹಿಳೆಯನ್ನು ಭೇಟಿ ಮಾಡಿ ಆಕೆಯ ಸಾಹಸವನ್ನು ಪ್ರಶಂಸಿಸಿ, ಆಕೆಗೆ 1 ಲಕ್ಷ ರು. ಪುರಸ್ಕಾರ ಘೋಷಿಸಿದ್ದಾರೆ. ಅಲ್ಲದೇ ಆಕೆಯ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದಾಗಿ ಮಾತುಕೊಟ್ಟಿದ್ದಾರೆ. ಈ ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ