ಸಿಮ್ ಹ್ಯಾಕ್ ಮಾಡಿ 30 ನಿಮಿಷದಲ್ಲಿ 45 ಲಕ್ಷ ಎಗರಿಸಿದ್ರು..ಬೆಂಗಳೂರು ದಂಪತಿ ಮೋಸಹೋಗಿದ್ದೇಗೆ?

Published : Jan 09, 2020, 04:57 PM ISTUpdated : Jan 09, 2020, 05:20 PM IST
ಸಿಮ್ ಹ್ಯಾಕ್ ಮಾಡಿ 30 ನಿಮಿಷದಲ್ಲಿ 45 ಲಕ್ಷ ಎಗರಿಸಿದ್ರು..ಬೆಂಗಳೂರು ದಂಪತಿ ಮೋಸಹೋಗಿದ್ದೇಗೆ?

ಸಾರಾಂಶ

ಸಿಮ್ ಹ್ಯಾಕ್ ಮಾಡಿ 45.7 ಲಕ್ಷ ರೂ. ಎಗರಿಸಿದ್ರು/ ಖಾತೆಯಿಂದ ಹಣ ಹೋಗಿದ್ದು ಗೊತ್ತೆ ಆಗ್ಲಿಲ್ಲ? ವಿಜಯನಗರದ ದಂಪತಿಗೆ ಮಹಾಮೋಸ

ಬೆಂಗಳೂರು[ಜ. 08]  ಸಿಮ್ ಹ್ಯಾಕ್ ಮಾಡಿ ಅಕೌಂಟ್ ನಿಂದ 45.7 ಲಕ್ಷ ಡ್ರಾ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಹಜವಾಗಿಯೇ ಆಲ್ ಲೈನ್ ವ್ಯವಹಾರ ಮಾಡುವವವರಿಗೆ ಇದು ಒಂದು ಆತಂಕದ ಘಂಟೆ ಬಾರಿಸಿದೆ.

ಬೆಂಗಳೂರಿನ ವಿಜಯನಗರದ  ಜಗದೀಶ್ ಹಾಗ ಅವರ ಪತ್ನಿ ಮಂಗಳಾ ವಂಚನೆಗೆ ಒಳಗಾಗಿದ್ದಾರೆ.  ಕಳೆದ ಶನಿವಾರ ಜಗದೀಶ್ ಸಿಮ್ ವರ್ಕ್ ಆಗುತ್ತಿರಲಿಲ್ಲ. ಏರ್ ಟೆಲ್  ಸಂಸ್ಥೆಗೆ ಕರೆ ಮಾಡಿದಾಗ ಸರಿ ಹೋಗಿದೆ. ಈ ವೇಳೆ ಕರೆಂಟ್ ಅಕೌಂಟ್ ನಿಂದ 45.7 ಲಕ್ಷ ಹಣ ಹಂತ ಹಂತವಾಗಿ ಮೂರು ಬಾರಿ ಕಟ್ ಆಗಿದೆ.

ಕೂಡಲೇ ದಂಪತಿ ಕಂಪ್ಲೇಟ್ ನೀಡಿದ್ದಾರೆ. ಶನಿವಾರ ಜಗದೀಶ್ ಸಿಮ್ ವರ್ಕ್ ಆಗದ ಕಾರಣ ಜಗದೀಶ್ ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದಾರೆ. ಗ್ರಾಹಕ ಸೇವಾ ಸಿಬ್ಬಂದಿ ಹೊಸ ಸಿಮ್ ತೆಗೆದುಕೊಳ್ಳಲು ತಿಳಿಸಿದ್ದಾರೆ.

ಅನಾಮಧೇಯ ಪತ್ರದಿಂದ ಬಯಲಾಯ್ತು ಸುಂದರಿಯರ ಗ್ಯಾಂಬ್ಲಿಂಗ್ ರಹಸ್ಯ

ಆದರೆ ಹೊಸ ಕಂಪನಿಗೆ ಸಂಬಂಧಪಟ್ಟ ದಾಖಲೆ ಇದ್ದ ಕಾರಣ ಅದೇ ನಂಬರ್ ಗೆ ಸಿಮ್ ಕೇಳಿದ್ದಾರೆ ತೆಗೆದುಕೊಂಡು 6 ಗಂಟೆಯಾದರೂ ಆ್ಯಕ್ಟಿವೇಟ್ ಆಗಿರಲಿಲ್ಲ. ಇದಾದ ಬಳಿಕ ಆ್ಯಕ್ಟಿವೇಟ್ ಆಗಿದೆ. ಕೂಡಲೇ ಬ್ಯಾಂಕ್ ನಂಬರ್ ಸಿಂಕ್ ಮಾಡಲು ಹೋದಾಗ ಪಾಸ್ ವರ್ಡ್ ಐಡಿ ಚೇಂಜ್ ಆಗಿದೆ. ಪಾಸ್ ವರ್ಡ್ ಕೇವಲ ಮಂಗಳ ಹಾಗೂ ಜಗದೀಶ್ ಗೆ ಮಾತ್ರ ತಿಳಿದಿತ್ತು.

ಆದರೆ ಸಿಸ್ಟಮ್ ಮೂಲಕ ಈ ಮೇಲ್ ಹ್ಯಾಕ್ ಮಾಡಿ ಸಿಮ್ ಹ್ಯಾಕ್ ಮಾಡಿರುವ ಆರೋಪಿಗಳು ಈ ಮೇಲ್ ಮೂಲಕ ಕೆಲ ದಾಖಲೆಗಳನ್ನ ತೆಗೆದುಕೊಂಡು ಸಿಮ್ ಹ್ಯಾಕ್ ಮಾಡಿದ್ದಾರೆ. ಸದ್ಯ ಸೈಬರ್ ಫ್ರಾಡ್ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಅಪರಾಧ ಸುದ್ದಿಗಳಿಗೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?