ಪುಟ್ಟೇನಹಳ್ಳಿ ಡಬಲ್ ಮರ್ಡರ್ ಕೇಸ್‌: ಗುಂಡು ಹಾರಿಸಿ ಆರೋಪಿ ಬಂಧನ

By Suvarna NewsFirst Published Apr 14, 2021, 3:38 PM IST
Highlights

ಪುಟ್ಟೇನಹಳ್ಳಿ ಪೊಲಿಸರಿಂದ ಅರೆಸ್ಟ್| ಕೊಲೆ ಕೇಸ್ ಅರೋಪಿಗೆ ಗುಂಡು ಹಾರಿಸಿ ಬಂಧನ| ಬಂಧಿಸಲು ಹೋದ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿ| ಮಂಜುನಾಥ್ ಮೇಲೆ ಹತ್ತಕ್ಕೂ ಹೆಚ್ಚು ಕೇಸ್‌ ದಾಖಲು| 

ಬೆಂಗಳೂರು(ಏ.14):  ನಗರದ ಪುಟ್ಟೇನಹಳ್ಳಿಯಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದ ಆರೋಪಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಇಂದು(ಬುಧವಾರ) ಕೋಣನ ಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ್ ಅಲಿಯಾಸ್ ಅಂಬಾರಿ ಬಂಧಿತ ಆರೋಪಿಯಾಗಿದ್ದಾನೆ.

ಮನೆಯಲ್ಲಿದ್ದ ಹಣ ಮೊಬೈಲ್, ಚಿನ್ನ ದೋಚುವ ಸಲುವಾಗಿ ಆರೋಪಿ ಮಂಜುನಾಥ್ ಎರಡು ಕೊಲೆ ಮಾಡಿದ್ದನು. ಮಂಜುನಾಥ್ ಮೇಲೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. 

ಅಧಿಕಾರಿಗಳ ಕಣ್ತಪ್ಪಿಸಲು ಪಾದದಲ್ಲಿ ಚಿನ್ನವಿಟ್ಟ ಖದೀಮನ ಬಂಧನ

ಆರೋಪಿ ಮಂಜುನಾಥ್‌ನನ್ನ ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ಕಿಶೋರ್ ಅವರು ಗುಂಡು ಹಾರಿಸಿ ಬಂಧಿಸಿದ್ದಾರೆ.
 

click me!