Bengaluru: ಪತ್ನಿ ಶೀಲ ಶಂಕಿಸಿ ಕೊಲೆ ಪ್ರಕರಣ: ಪರಾರಿಯಾಗುತ್ತಿದ್ದ ಆರೋಪಿ ಬಂಧನ

Published : Jan 29, 2023, 08:12 PM IST
Bengaluru: ಪತ್ನಿ ಶೀಲ ಶಂಕಿಸಿ ಕೊಲೆ ಪ್ರಕರಣ: ಪರಾರಿಯಾಗುತ್ತಿದ್ದ ಆರೋಪಿ ಬಂಧನ

ಸಾರಾಂಶ

ಅದು ಪತ್ನಿಯನ್ನೇ ಪತಿ ಕೊಲೆ ಮಾಡಿದ್ದ ಕೇಸ್. ಅರ್ಧಾಂಗಿಯನ್ನ ಕೊಂದ ಆಸಾಮಿ ಬಾಂಗ್ಲಾ ಗಡಿ ದಾಟಲು ಮುಂದಾಗಿದ್ದ. ಮಾಡಿದ್ದ ಪಾಪ ಎಲ್ಲಿ ಬಿಡತ್ತೆ ಹೇಳಿ. ಕೊನೆಗೂ ಪೊಲೀಸರು ಆರೋಪಿ ಕೈಗೆ ಕೋಳ ತೊಡಿಸಿದ್ದಾರೆ.

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಜ.29): ಅದು ಪತ್ನಿಯನ್ನೇ ಪತಿ ಕೊಲೆ ಮಾಡಿದ್ದ ಕೇಸ್. ಅರ್ಧಾಂಗಿಯನ್ನ ಕೊಂದ ಆಸಾಮಿ ಬಾಂಗ್ಲಾ ಗಡಿ ದಾಟಲು ಮುಂದಾಗಿದ್ದ. ಮಾಡಿದ್ದ ಪಾಪ ಎಲ್ಲಿ ಬಿಡತ್ತೆ ಹೇಳಿ. ಕೊನೆಗೂ ಪೊಲೀಸರು ಆರೋಪಿ ಕೈಗೆ ಕೋಳ ತೊಡಿಸಿದ್ದಾರೆ. ಕರೆತಂದು ವಿಚಾರಣೆ ನಡೆಸಿದಾಗ ಬೆಚ್ಚಿಬೀಳೊ ಸಂಗತಿ ಗೊತ್ತಾಗಿದೆ. ದೆಹಲಿ ಮೂಲಕ ಪಶ್ಚಿಮ ಬಂಗಾಳದ ಸಿಲಿಗುರಿ ತಲುಪಿ  ಬಾಂಗ್ಲಾ ಪ್ರವೇಶಿಸಲು ಮುಂದಾಗಿದ್ದ.ಅಷ್ಟರಲ್ಲಾಗಲೇ ಇಸ್ಲಾಂಪುರ ಬಳಿ ಖಾಕಿ ಬಲೆಗೆ ಬಿದ್ದಿದ್ದಾನೆ.ಹೀಗೆ ಹೊರಟವನು ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ಕೊಲೆಯೊಂದನ್ನ ಮಾಡಿ ಪರಾರಿಯಾಗಲು ಯತ್ನಿಸಿದ್ದ.

ಈತ ನಾಸಿರ್ ಹುಸೇನ್ ಜನವರಿ 16ರಂದು ಸುದ್ದಗುಂಟೆಪಾಳ್ಯದಲ್ಲಿ ಪತ್ನಿ ಶೀಲ ಶಂಕಿಸಿ ನಾಝ್ ಎಂಬಾಕೆಯನ್ನ ಕೊಂದು ಪರಾರಿಯಾಗಿದ್ದ.ಹೀಗೆ ಬೆಂಗಳೂರು ಬಿಟ್ಟವನು ಬಾಂಗ್ಲಾದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ. ಆದ್ರೆ ಆರೋಪಿ ಬೆನ್ನುಬಿದ್ದ ಸುದ್ದಗುಂಟೆಪಾಳ್ಯ ಪೊಲೀಸರು ಹೆಡೆಮುರಿ‌ ಕಟ್ಟಿದ್ದಾರೆ. ಪಶ್ಚಿಮ ಬಂಗಾಳದ ಇಸ್ಲಾಂಪುರ ಎಂಬಲ್ಲಿ ಸೆರೆಸಿಕ್ಕಿದ್ದ ಆತನನ್ನ ಕರೆತಂದು ವಿಚಾರಣೆ ನಡೆಸಿದಾಗ ಬೆಚ್ಚಿಬೀಳೊ‌ ವಿಚಾರಗಳೇ ಹೊರಬಿದ್ದಿದೆ.

ಹಂಪಿ ಉತ್ಸವದಲ್ಲಿ ತಾಯಿ ಭುವನೇಶ್ವರಿ ದೇವಿ ಭವ್ಯ ಮೆರವಣಿಗೆ: ತೆಪ್ಪ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೀನುಗಾರರು

ಹುಸೇನ್ ಮೂಲತಃ ಬಾಂಗ್ಲಾದೇಶದವನು. ಪಶ್ಚಿಮ ಬಂಗಾಳದ ಸಿಲಿಗುರಿ ಮೂಲಕ ಕೊಲ್ಕತ್ತಾಗೆ ಪ್ರವೇಶ ಪಡೆದಿದ್ದ ಆರೋಪಿ ಸುಳ್ಳು ದಾಖಲಾತಿ ಸೃಷ್ಟಿಸಿಕೊಂಡು ಕೆಲಸ ಶುರು ಮಾಡಿದ್ದ. ಮುಂಬೈ, ದೆಹಲಿ ಸೇರಿದಂತೆ ಗುರ್ಗಾಂವ್ ನಲ್ಲಿ ತನ್ನದೇ ಮೊಬೈಲ್ ರಿಪೇರಿ ಅಂಗಡಿ ಹೊಂದಿದ್ದ. ನಂತರ 2019ರಂದು ಬೆಂಗಳೂರಿಗೆ ಬಂದು ಪ್ರತಿಷ್ಠಿತ ಕಂಪನಿಯಲ್ಲಿ  ಕೆಲಸಕ್ಕೆ ಸೇರಿಕೊಂಡಿದ್ದ. ಇಲ್ಲಿ 75 ಸಾವಿರ ಸಂಬಳವನ್ನು ಪಡಿಯುತ್ತಿದ್ದ. ಈ ವೇಳೆ ತಾನು ವಾಸವಿದ್ದ ಮನೆ ಪಕ್ಕದಲ್ಲೇ ಇದ್ದ ನಾಝ್ ಪರಿಚಯವಾಗಿ ಪ್ರೇಮಾಂಕುರವಾಗಿದೆ. ನಂತರ ತನ್ನ ಮಾಹಿತಿ ಬಚ್ಚಿಟ್ಟು ಆರು ತಿಂಗಳ ಹಿಂದೆ ಆಕೆಯೊಂದಿಗೆ ವಿವಾಹವಾಗಿದ್ದ. ಶೀಲ‌ಶಂಕಿಸಿ ಕೊಲೆ ಮಾಡಿದ್ದಾಗಿ ಗೊತ್ತಾಗಿದೆ. ಪತ್ನಿ ನಾಝ್ ಕೊಲೆ ಮಾಡಿದ್ದ ಆರೋಪಿ ಹುಸೇನ್. ಬೆಂಗಳೂರಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದ. ಅಲ್ಲಿಂದ ಪಶ್ಚಿಮ ಬಂಗಾಳದ ಸಿಲಿಗುರಿಗೆ ಹೊರಟಿದ್ದ. 

ಪಶ್ಚಿಮ ಬಂಗಾಳ ಪೊಲೀಸರ ಸಹಾಯದೊಂದಿಗೆ, ಸಿಲಿಗುರಿ ಸಮೀಪದ ಇಸ್ಲಾಂಪುರ್ ಜಿಲ್ಲೆಯಲ್ಲಿ ಖಾಕಿ ಖೆಡ್ಡಗೆ ಬಿದ್ದಿದ್ದಾನೆ. ಇನ್ನೂ ಈ ಆರೋಪಿ‌ ಪೊಲೀಸರ ದಿಕ್ಕು ತಪ್ಪಿಸಲು ಆಡಿದ್ದ ಆಟ ಅಷ್ಟಿಷ್ಟಲ್ಲ. ತನ್ನದೇ ಹೆಸರಿನಲ್ಲಿ ಎರಡೆರಡು ವಿಮಾನದ ಟಿಕೆಟ್ ಬುಕ್ ಮಾಡಿದ್ದ. ಎರಡೆರಡು ಓಯೋ ರೂಂ‌ ಬುಕ್ ಮಾಡ್ತಿದ್ದ ಆರೋಪಿ ಹುಸೇನ್. ಒಂದು ಕಡೆ ಚೆಕ್ ಇನ್ ಮಾಡಿ ಮತ್ತೊಂದು ಕಡೆ ತೆರಳಿ ವಾಸ್ತವ್ಯ ಹೂಡುತ್ತಿದ್ದ. ಆಗಾಗ ಮೊಬೈಲ್ ಆನ್ ಮಾಡಿ ಆಫ್ ಮಾಡ್ತಿದ್ದ. ನಂತರ ಕ್ಷಣಾರ್ಧದಲ್ಲಿ ಬೇರೆ ಕಡೆಗೆ ಹೊರಟು ಹೋಗ್ತಿದ್ದ. ಪೊಲೀಸರು ರೀಚ್ ಆಗೋದರೊಳಗೆ ಪೊಲೀಸರು ತಲುಪೊ ವೇಳೆಗೆ ಒಂದೂವರೆ ಗಂಟೆ ಮುಂದೆ ಸಾಗ್ತಿದ್ದ. 

ಈ ಊರಿಗೆ ರಸ್ತೆಯೇ ಇಲ್ಲ: ನಂಜರಾಯಪಟ್ಟಣದಲ್ಲಿ ಆನೆ, ಚಿರತೆಗಳ ಆತಂಕ

ಆದರೆ ಪೊಲೀಸರ ಬುದ್ಧಿವಂತೆಕೆ ಮಧ್ಯೆ ಈತನ ಜಾಣತನ ವರ್ಕ್ ಆಗಲೇ ಇಲ್ಲ. ಪಶ್ಚಿಮ ಬಂಗಾಳದ ಏಳು ಜನ ಎಸ್ ಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ ಬಾಬಾ ಆರೋಪಿ ಹೆಡೆಮುರಿ ಕಟ್ಟಿದ್ದಾರೆ. ಇನ್ನೂ ಈ ಹುಸೇನ್ ಢಾಕದಲ್ಲಿ ಹಾರ್ಡ್‌ವೇರ್ ಇಂಜಿನಿಯರ್ ತರಬೇತಿ‌ ಪಡೆದಿದ್ದ. ಆದರೆ ಇಂಜಿನಿಯರಿಂಗ್  ಪದವಿ ಪೂರ್ಣಗೊಳಿಸಿರಲಿಲ್ಲ. ಲ್ಯಾಪ್ಟಾಪ್, ಮೊಬೈಲ್ ರಿಪೇರಿ ಮಾಡೋದ್ರಲ್ಲಿ ಪರಿಣಿತಿ ಹೊಂದಿದ್ದ. ಆ್ಯಪಲ್ ಕಂಪನಿಯ ಸಿಸ್ಟಂ, ಲ್ಯಾಪ್ಟಾಪ್ ರಿಪೇರಿ ಮಾಡೋದರಲ್ಲಿ ಪಂಟರ್ ಆಗಿದ್ದ. ಇದೇ ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ದಿದ್ರೆ ಒಳ್ಳೆ ಭವಿಷ್ಯ ಇರ್ತಿತ್ತು. ಆದರೆ ದುಡುಕಿನ‌ ನಿರ್ಧಾರ ಒಂದು‌ ಜೀವ ತೆಗೆದ್ರೆ.ಈತನ‌ ಬದುಕು ಹಾಳಾಗುವಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ