Tumakuru: ಕಣ್ಣಿನ ಚಿಕಿತ್ಸೆ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿ ಪರಾರಿ!

Published : May 19, 2022, 03:00 AM IST
Tumakuru: ಕಣ್ಣಿನ ಚಿಕಿತ್ಸೆ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿ ಪರಾರಿ!

ಸಾರಾಂಶ

ವೃದ್ಧ ದಂಪತಿಗೆ ಸಹಾಯ ಮಾಡುವ ನೆಪದಲ್ಲಿ ಚಿನ್ನಾಭರಣ ದೋಚಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ಪಟ್ಣಣದ ದೊಡ್ಡಪೇಟೆ ನಿವಾಸಿಗಳಾದ  ಗಿರಿಜಮ್ಮ, ರೇಣುಕಪ್ಪ ಚಿನ್ನಾಭರಣ ಕಳೆದುಕೊಂಡ ವೃದ್ಧ ದಂಪತಿಗಳು. 

ವರದಿ: ಮಹಂತೇಶ್‌ ಕುಮಾರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ತುಮಕೂರು

ತುಮಕೂರು (ಮೇ.19): ವೃದ್ಧ ದಂಪತಿಗೆ (Elderly Couple) ಸಹಾಯ ಮಾಡುವ ನೆಪದಲ್ಲಿ ಚಿನ್ನಾಭರಣ (Gold Jewelry) ದೋಚಿರುವ ಘಟನೆ ತುಮಕೂರು (Tumakuru) ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ಪಟ್ಣಣದ ದೊಡ್ಡಪೇಟೆ ನಿವಾಸಿಗಳಾದ ಗಿರಿಜಮ್ಮ, ರೇಣುಕಪ್ಪ ಚಿನ್ನಾಭರಣ ಕಳೆದುಕೊಂಡ ವೃದ್ಧ ದಂಪತಿಗಳು. ಮಂಗಳವಾರ ಬೆಳಗ್ಗೆ ಸರಿ ಸುಮಾರು 9 ಗಂಟೆ ವೇಳೆಯಲ್ಲಿ ಗಿರಿಜಮ್ಮ ನಿವಾಸಿದ ಬಳಿ ಬಂದ ಅಪರಿಚಿತ ಖದೀಮನೊಬ್ಬ ವೃದ್ಧ ದಂಪತಿಗಳನ್ನು ನಯವಾದ ಮಾತುಗಳಿಂದ ನಂಬಿಕೆ ಹುಟ್ಟಿಸಿ ಚಿನ್ನಾಭರಣ ದೋಚಿದ್ದಾನೆ. 
 
ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿದವರಿಗೆ 10 ಹತ್ತು ಸಾವಿರ ಹಣ ನೀಡುತ್ತಾರೆ: ವೃದ್ದ ದಂಪತಿಗಳ ಬಳಿ ಬಂದ ಖತನಾರ್ಕ್ ಖದೀಮ, ನಿಮಗೆ ಕಣ್ಣು ಕಾಣಿಸದಿದ್ದರೆ ನಾವು ಉಚಿತವಾಗಿ ಕಣ್ಣಿನ ಆಪರೇಶನ್ ಮಾಡಿಸಿಕೊಡ್ತಿನಿ ಅಂತ ನಂಬಿಸಿದ್ದಾನೆ. ಅಲ್ಲದೇ ನಿಮ್ಮ ಆಧಾರ ಕಾರ್ಡ್ ಹಾಗೂ ರೇಷನ್ ಕಾರ್ಡ್ ಇದ್ರೆ ಉಚಿತವಾಗಿ ಆಪರೇಷನ್ ಮಾಡ್ತಾರೆ. ಜೊತೆಗೆ ಕಣ್ಣು ಆಪರೇಷನ್‌ ಮಾಡಿಸಿದವರಿಗೆ ಅಂಚೆ ಕಚೇರಿಯಲ್ಲಿ 10 ಸಾವಿರ ಹಣವನ್ನು ಕೂಡ ನೀಡದ್ದಾರೆ  ಅಂತ ನಂಬಿಸಿ ಆ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನ ಪಡೆದಿದ್ದಾನೆ‌.  ಬಳಿಕ ಆ ವೃದ್ದ ದಂಪತಿಗಳನ್ನ ತನ್ನದೇ ಬೈಕ್‌ ನಲ್ಲಿ  ಕೊರಟಗೆರೆ ಸರ್ಕಾರಿ ಆಸ್ಪತ್ರೆ ಬಳಿ ಕರೆದೊಯ್ದಿದ್ದಾನೆ.

Tumakuru ಊರ ಜಾತ್ರೆಯಲ್ಲಿ ಎತ್ತುಗಳನ್ನು ಬಲಿಕೊಟ್ಟ ಗ್ರಾಮಸ್ಥರು!

80 ಗ್ರಾಂ ಚಿನ್ನಾಭರಣ ಎಗರಿಸಿದ ಖದೀಮ: ಆಸ್ಪತ್ರೆ ಬಳಿ ಹೋಗುತ್ತಿದ್ದಂತೆ ನಿಮ್ಮ ಬಳಿ ಇರೋ ಚಿನ್ನಾಭರಣವನ್ನ ನನ್ನ ಬಳಿ ಕೊಡಿ, ಆಪರೇಷನ್ ಮಾಡುವಾಗ ಆಸ್ಪತ್ರೆಯವರು ಕದ್ದು ಬಿಡ್ತಾರೆ ಅಂತ ಪುಂಗಿ ಬಿಟ್ಟಿದ್ದಾನೆ. ಆ ಖದೀಮನ ಮಾತು ನಂಬಿದ ವೃದ್ದೆ, ತನ್ನ ಬಳಿ ಇದ್ದ 60 ಗ್ರಾಂ ಮಾಂಗಲ್ಯದ ಸರ, 10 ಗ್ರಾಂ ತೂಕದ ಚೈನ್‌, 10 ಗ್ರಾಂ ತೂಕದ ಚಿನ್ನದುಂಗರವನ್ನು ಖದೀಮನ ಕೈಗೆ ನೀಡಿದ್ದಾರೆ.  ಕೈಗೆ 80 ಗ್ರಾಂ ಚಿನ್ನಾಭರಣ ಸೇರುತ್ತಿದ್ದಂತೆ ಆಸ್ಪತ್ರೆ ಒಳಗೆ ಹೋಗಿ ಬರುವುದಾಗಿ ತಿಳಿಸಿ ಕಣ್ಮರೆಯಾಗಿದ್ದಾನೆ. 

ರೈತನ ತೋಟಕ್ಕೆ ಭೇಟಿ ನೀಡಿದ ಕೇಂದ್ರ ಕೃಷಿ ಸಚಿವ ಗಿರಿರಾಜ್ ಸಿಂಗ್: ಅಂಜೂರ ಹಣ್ಣಿನ ರುಚಿ ಸವಿದ ಸಚಿವ

ಖದೀಮ ಎಷ್ಟು ಹೊತ್ತಾದ್ರೂ ಆಸ್ಪತ್ರೆ ಹೊರಗೆ ಬರದಿದ್ದಾಗ, ಅನುಮಾನಗೊಂಡ ವೃದ್ಧಿ ವೈದ್ಯರ ಬಳಿ ಕಣ್ಣಿನ ಆಪರೇಷನ್‌ ಮಾಡುವ ಬಗ್ಗೆ ವಿಚಾರಿಸಿದಾಗ ಇಲ್ಲಿ ಉಚಿತವಾಗಿ ಯಾವುದೇ ತರದ ಕಣ್ಣಿನ ಆಪರೇಷನ್ ನಡೆಯುತ್ತಿಲ್ಲ ಅನ್ನೊದು ಗೊತ್ತಾಗಿದೆ. ‌ಅಪರಚಿತ ಖದೀಮ ಚಿನ್ನಾಭರಣ ಎಗರಿಸಲು ಮಾಡಿದ ಮಾಸ್ಟರ್ ಪ್ಲಾನ್‌ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಗೆ ‌ಮೋಸ ಹೋದ ವೃದ್ದ ದಂಪತಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೊರಟಗೆರೆ ಪೊಲೀಸರು ಖತರ್ನಾಕ್ ಖದೀಮನಿಗೆ ಹುಡುಕಾಟ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ