ಬೆಂಗಳೂರಲ್ಲಿ ಮತ್ತೊಂದು ಮ್ಯಾನ್ ಹೋಲ್‌ ದುರಂತ: ಓರ್ವ ಕಾರ್ಮಿಕ ಸಾವು

Published : Jan 25, 2020, 08:15 PM IST
ಬೆಂಗಳೂರಲ್ಲಿ ಮತ್ತೊಂದು ಮ್ಯಾನ್ ಹೋಲ್‌ ದುರಂತ: ಓರ್ವ ಕಾರ್ಮಿಕ ಸಾವು

ಸಾರಾಂಶ

ಬೆಂಗಳೂರಿನಲ್ಲಿ ಮತ್ತೊಂದು ಮ್ಯಾನ್ ಹೋಲ್ ದುರಂತ ನಡೆದಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.

ಬೆಂಗಳೂರು, (ಜ.25): ಮ್ಯಾನ್ ಹೋಲ್‌ಗೆ ಇಳಿದ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುಮಾರು 38 ವರ್ಷದ ಸಿದ್ದಪ್ಪ ಮೃತ ಕಾರ್ಮಿಕ ಎಂದು ತಿಳಿದುಬಂದಿದೆ. ಇಂದು (ಶನಿವಾರ) ಸಿದ್ದಪ್ಪ ಹಾಗೂ ಮುನಿಯಪ್ಪ ಎನ್ನುವರು ಗಣೇಶ್ ಬಾಗ್ ಸಭಾಂಗಣದ ಸಮೀಪ ಚೇಂಬರ್ ಕ್ಲೀನ್ ಮಾಡಲು ಮ್ಯಾನ್ ಹೋಲ್‌ಗೆ ಇಳಿದಿದ್ದಾರೆ.

ಮೃತ್ಯುಕೂಪ ಮ್ಯಾನ್ ಹೋಲ್ ಮುಚ್ಚಿದ ಬೆಂಗಳೂರು ಪೊಲೀಸ್‌ಗೊಂದು ಶಹಬ್ಬಾಸ್

ಆ ವೇಳೆ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು, ಮ್ಯಾನ್ ಹೋಲ್‌ನಲ್ಲೇ ಸಿದ್ದಪ್ಪ ಮೃತಪಟ್ಟಿದ್ದಾನೆ. ಇನ್ನು ಮತ್ತೋರ್ವ ಕಾರ್ಮಿಕನನ್ನು ರಕ್ಷಿಸಲಾಗಿದ್ದು, ಈತನನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಇಂತಹ ಪ್ರಕರಣಗಳು ಸಾಕಷ್ಟು ನಡೆದಿರುವ ಉದಾಹರಣೆಗಳಿವೆ. ಮುಂಜಾಗೃತವಿಲ್ಲದೇ ಯಾವುದೇ ವ್ಯಕ್ತಿಯನ್ನು ಮ್ಯಾನ್ ಹೋಲ್ ಇಳಿಸುವುದು ಅಪರಾಧವೆಂದು ಗೊತ್ತಿದ್ದರೂ. ಮತ್ತದೇ ಯಾವುದೇ ಮುಂಜಾಗೃತ ಕ್ರಮಗಳಿಲ್ಲದೇ ಏಕಾಏಕಿ ಮ್ಯಾನ್ ಹೋಲ್‌ಗೆ ಇಳಿದಿರುವುದು ಈ ದುರಂತಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!