ಶಿವಾಜಿನಗರ ಕೊಲೆ ಕೇಸ್‌ಗೆ ಕಾರಣ ಸಿಕ್ತು, ತನಿಖೆ ವೇಳೆ ಮಹಿಳೆ ಜತೆಗಿನ ಲವ್ವಿ-ಡವ್ವಿ ಬಯಲು

Published : Jul 19, 2022, 05:22 PM IST
ಶಿವಾಜಿನಗರ ಕೊಲೆ ಕೇಸ್‌ಗೆ ಕಾರಣ ಸಿಕ್ತು, ತನಿಖೆ ವೇಳೆ ಮಹಿಳೆ ಜತೆಗಿನ ಲವ್ವಿ-ಡವ್ವಿ ಬಯಲು

ಸಾರಾಂಶ

ಇತ್ತೀಚೆಗೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಸಂತ್ಯಾಂಶ ಗೊತ್ತಾಗಿದೆ. ಈ ಕೊಲೆಗೆ ಕಾರಣ ಮಹಿಳೆ ಜೊತೆಗಿನ ಲವ್ವಿ-ಡವ್ವಿ ಎಂಬುವುದು ಬಯಲಾಗಿದೆ.

ಬೆಂಗಳೂರು, (ಜುಲೈ.19):  ಮೊನ್ನೇ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಜವಾದ್ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಕೊಲೆಗೆ ಮಹಿಳೆ ಜೊತೆಗಿನ ಅಕ್ರಮ ಸಂಬಂಧವೇ ಕಾರಣ ಎನ್ನುವ ಅಂಶ ಬೆಳಕಿಗೆ ಬಂದಿದೆ. 

ಹೌದು..ಶಿವಾಜಿನಗರದಲ್ಲಿ ಜುಲೈ 17ರಂದು ನಡೆದ ಜವಾದ್ ಕೊಲೆ ಪ್ರಕರಣದ ತನಿಖೆ ವೇಳೆ ಮಹಿಳೆ ಜೊತೆಗಿನ ಅನೈತಿಕ ಸಂಬಂಧ ಬಟಾಬಯಲಾಗಿದೆ. ಜವಾದ್‌ನನ್ನು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ . ಸಿಮ್ರಾನ್ ಎನ್ನುವ ಪತಿ ಜೀಷಾನ್ ಎಂಬ ಸತ್ಯ ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.  

Crime News ; ಮಾಜಿ ಪ್ರೇಯಸಿ ಮನೆ ಬಳಿ ಗಲಾಟೆ ಮಾಡಿದ್ದವನ ಕೊಲೆ!

ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಕೊಲೆಯಾದ ಜವಾದ್,  ಜೀಷಾನ್ ಪತ್ನಿ ಸಿಮ್ರಾನ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಈ ಹಿಂದೆ ಇದೇ ವಿಚಾರಕ್ಕೆ ಗಲಾಟೆ ಸಹ ಆಗಿತ್ತು. ಈ ಬಗ್ಗೆ  ಶಿವಾಜಿನಗರ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿತ್ತು.ಮಹಿಳೆಯ ಪತಿ ಜೀಷಾನ್ ಕೂಡ ಹಲವು ಬಾರಿ ಜವಾದ್ ಗೆ ವಾರ್ನಿಂಗ್ ಕೊಟ್ಟಿದ್ದ. ತನ್ನ ಹೆಂಡತಿಯ ತಂಟೆಗೆ ಬರಬೇಡ ಅಂತ ವಾರ್ನಿಂಗ್ ಕೊಟ್ಟಿದ್ದ. ಹೀಗಿದ್ದರೂ ಜವಾದ್ ಜೀಷಾನ್ ಮನೆಗೆ ಎಂಟ್ರಿ ಕೊಟ್ಟಿದ್ದ.

ಆದ್ರೆ, ಜುಲೈ 17ರ ಬೆಳಿಗ್ಗೆ 9:30 ರ ಸುಮಾರಿಗೆ  ಶಾರ್ಪ್ ಆದ ಕತ್ತರಿ ಹಿಡಿದು ಹೋಗಿದ್ದ ಜವಾದ್, ಜೀಷಾನ್ ನನ್ನ ಕೊಲೆ ಮಾಡೋದಾಗಿ ಬೆದರಿಸಿದ್ದ. ಈ ವೇಳೆ ಜವಾದ್ ನ ಕೈಯಲ್ಲಿದ್ದ ಕತ್ತರಿಯನ್ನ ತೆಗೆದುಕೊಂಡು ಜೀಷಾನ್, ಜವಾದ್ ನ ಕತ್ತಿನ ಭಾಗಕ್ಕೆ ಇರಿದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ಜವಾದ್ ತಾನೇ ಸ್ವತಃ ಎಚ್ ಬಿ ಎಸ್ ಆಸ್ಪತ್ರೆಗೆ ಓಡಿದ್ದ.

ಆದ್ರೆ, ಆಸ್ಪತ್ರೆ ಆವರಣದಲ್ಲೇ ತೀವ್ರ ರಕ್ತಸ್ರಾವದಿಂದ ಜವಾದ್ ಸಾವನ್ನಪ್ಪಿದ್ದ. ಇದೀಗ ಜೀಷಾನ್ ನನ್ನ ಬಂಧಿಸಿರುವ ಶಿವಾಜಿನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?