ಉಡುಪಿ; ಲಾರಿಯೊಳಗಿನ ಬಿದಿರಿನ ಒಳಗಿತ್ತು 49 ಕೆಜಿ ಗಾಂಜಾ!

Published : Aug 23, 2020, 09:47 PM ISTUpdated : Aug 23, 2020, 10:10 PM IST
ಉಡುಪಿ; ಲಾರಿಯೊಳಗಿನ ಬಿದಿರಿನ ಒಳಗಿತ್ತು 49 ಕೆಜಿ ಗಾಂಜಾ!

ಸಾರಾಂಶ

ಬಿದಿರಿನೊಳಗೆ ಸಾಗಿಸುತಿದ್ದ 50 ಕೆಜಿ ಗಾಂಜಾ ವಶ, ಇಬ್ಬರ ಬಂಧನ/ ಬಿದಿರಿನೊಳಗೆ ಗಾಂಜಾ ಇಟ್ಟು ಸಾಗಿಸುತ್ತಿದ್ದರು/ ಸಿಕ್ಕಿದ್ದು ಬರೋಬ್ಬರಿ 49150 ಕೆಜಿ ಗಾಂಜಾ/  6 ಬಿದಿರುಗಳ ಒಳಗೆ ಗಾಂಜಾ ತುಂಬಿದ್ದರು

ಉಡುಪಿ(ಆ. 23) ಇಲ್ಲಿನ ಬ್ರಹ್ಮವಾರ ಸಮೀಪದ ಹೇರೂರು ಗ್ರಾಮದ ಕೃಷಿಕೇಂದ್ರದ ಬಳಿ ಉಡುಪಿ ಡಿಸಿಐಬಿ ಪೊಲೀಸರು, ಇಬ್ಬರು ವ್ಯಕ್ತಿಗಳು ಲಾರಿಯಲ್ಲಿ ಕಳ್ಳಸಾಗಾಣೆ ಮಾಡುತಿದ್ದ 49150 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. 

ಆರೋಪಿಗಳನ್ನು  ತಮಿಳುನಾಡು ಜಿಲ್ಲೆಯ ತಿರುವನ್ವೇಲಿ ಜಿಲ್ಲೆಯ ನಿವಾಸಿ ಕರುತ ಪಾಂಡಿ (40) ಮತ್ತು ಪಶ್ಚಿಮ ಬಂಗಾಳದ ಕುಚ್ಬಿಹಾರ್ ಜಿಲ್ಲೆಯ ವಾನು ಹಲ್‍ದಾರ್ (30) ಎಂದು ಗುರುತಿಸಲಾಗಿದೆ.

ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಅನ್ನೇ ದೋಚಿದ ಗಾರ್ಡ್

ಶನಿವಾರ ಖಚಿತ ಮಾಹಿತಿಯ ಮೇರೆಗೆ ಡಿಸಿಐಬಿ ಎಸೈ ಮಂಜಪ್ಪ ಡಿ.ಆರ್. ಮತ್ತು ಸಿಬ್ಬಂದಿಗಳು ಮಧ್ಯಾಹ್ನ 12.30ಕ್ಕೆ ಈ ಲಾರಿಯನ್ನು ತಡೆದು ನಿಲ್ಲಿಸಿದಾಗ, ಲಾರಿಯಲ್ಲಿ ಲೋಡ್ ಮಾಡಿದ್ದ 6 ಬಿದಿರುಗಳ ಒಳಗೆ ಗಾಂಜಾವನ್ನು ತುಂಬಿಸಿರುವುದು ಪತ್ತೆಯಾಗಿದೆ. ಈ ಗಾಂಜಾದ ಮೌಲ್ಯ ಸುಮಾರು 14,75,000 ರು. ಎಂದು ಅಂದಾಜಿಸಲಾಗಿದೆ.

ಜೊತೆಗೆ 30 ಲಕ್ಷ ರು.  ಮೌಲ್ಯದ ಲಾರಿ ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ