3 ಕೋಟಿ ಆಸ್ತಿಗಾಗಿ 79 ವರ್ಷದ ತಂದೆಯನ್ನು ಬೀದಿಗೆ ಬಿಟ್ಟ 'ಸುಪುತ್ರರು'!

Published : Aug 09, 2020, 11:15 PM ISTUpdated : Aug 09, 2020, 11:18 PM IST
3 ಕೋಟಿ ಆಸ್ತಿಗಾಗಿ 79 ವರ್ಷದ ತಂದೆಯನ್ನು ಬೀದಿಗೆ ಬಿಟ್ಟ 'ಸುಪುತ್ರರು'!

ಸಾರಾಂಶ

ಮೂರು ಕೋಟಿ ಆಸ್ತಿಗಾಗಿ ತಂದೆಯನ್ನೇ ಬೀದಿ ಪಾಲು ಮಾಡಿದ ಮಕ್ಕಳು/ ಹೃದಯಹೀನ ಮಕ್ಕಳಿಂದ ವೃದ್ಧ ತಂದೆ ಅನಾಥಾಶ್ರಮಕ್ಕೆ/ ಮಕ್ಕಳನ್ನು ಬಂಧಿಸಿದ ಪೊಲೀಸರು

ಹೈದರಾಬಾದ್(ಆ.  09)  ಸಿನಿಮಾಗಳಲ್ಲಿ ಇಂಥ  ಕತೆ ಕೇಳಿರುತ್ತೇವೆ. ಆದರೆ ನಿಜಕ್ಕೂ ನಡೆದರೆ.. ಮನಸಿಗೆ ಆಗುವ ನೋವು ಅಷ್ಟಿಷ್ಟಲ್ಲ. ಮೂರು ಕೋಟಿ ರೂ. ಆಸ್ತಿಯನ್ನು ಲಪಟಾಯಿಸಲು ಮೂವರು ಅಣ್ಣ-ತಮ್ಮಂದಿರು  79 ವರ್ಷದ ತಂದೆಯನ್ನು ಬೀದಿಪಾಲು ಮಾಡಿದ್ದಾರೆ .  ತೆಲಂಗಾಣದ ಸಿದ್ದಪೇಟ್ ಜಿಲ್ಲೆಯ ಮಧಿರಾದಿಂದ ಘಟನೆ ವರದಿಯಾಗಿದೆ. 

ಅನಾರೋಗ್ಯಕ್ಕೆ ತುತ್ತಾಗಿದ್ದ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ ಮೂವರು 'ಸುಪುತ್ರ; ರನ್ನು ಹುಜರಾಬಾದ್ ಜೈಲಿಗೆ ಕಳುಹಿಸಲಾಗಿದೆ.

ಹಣಕ್ಕಾಗಿ ಹೆತ್ತ ತಂದೆಗೆ ಸಾವಿನ ಇಂಜೆಕ್ಷನ್

ಸಹೋದರರಾದ  ಪೋತು ಸುಧಾಕರ್(45),  ಪೋತು ಜನಾರ್ಧನ (48), ಪೋತು ರವೀಂದರ್ (52)  ತಮ್ಮ ತಂದೆ ಪೋತು ಮಲ್ಲಯ್ಯ ಅವರನ್ನು ರಸ್ತೆ ಮಧ್ಯೆ ಬಿಟ್ಟು ಹೋಗಿದ್ದಾರೆ.  ಇದು ಮಲ್ಲಯ್ಯ ಅವರ ಆಸ್ತಿಯನ್ನು ತಮ್ಮ ತಮ್ಮಲ್ಲಿ ಹಂಚಿಕೊಳ್ಳಲು ಪುತ್ರರು ಮಾಡಿದ ಮಹಾತ್ಕಾರ್ಯ!  ತಾಯಿ ಹೆಸರಿನಲ್ಲಿ ಆರು ಎಕರೆ ಜಮೀನು ಇದ್ದ ಕಾರಣಕ್ಕೆ ಒಬ್ಬ ಆಕೆಯನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಒಪ್ಪಿದ್ದಾನೆ.  ಆದರೆ ತಾಯಿಯ ಚಿನ್ನಾಭರಣ ಕಸಿದು ಕೊಂಡಿದ್ದಾನೆ.

 ತಮ್ಮ ತಂದೆಗೆ ಆಹಾರ ನೀಡಿದರೆ ಜೋಕೆ ಎಂದು ಗ್ರಾಮಸ್ಥರಿಗೆ ಸಹೋದರರು ಬೆದರಿಕೆ ಹಾಕಿದ್ದರು. ಆಹಾರ ಸಿಗದ ವೃದ್ಧನನ್ನು ಅನಾಥಾಶ್ರಮಕ್ಕೆ ಸೇರಿಸುವ ಕೆಲಸವನ್ನು ಗ್ರಾಮಸ್ಥರಲ್ಲಿ ಕೆಲವರು ಮಾಡಿದ್ದರು.

 ಅನಾಥಾಶ್ರಮದಲ್ಲಿದ್ದ ತಂದೆಗೆ ಆರೋಗ್ಯ ಹದಗೆಟ್ಟ ಕಾರಣ ಆಸ್ಪತ್ರೆಗೆ ಸೇರಿಸಲಾಗಿದೆ. ಇದನ್ನು ಅರಿತ ಮಧಿರಾ ವಿಭಾಗದ ಕಂದಾಯ ಅಧಿಕಾರಿ ಮಾಹಿತಿ ಪಡೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ ಅಡಿಯಲ್ಲಿ ಪೊಲೀಸರು ಪುತ್ರರನ್ನು ಬಂಧಿಸಿದ್ದಾರೆ.  

ಹೃದಯಹೀನ ಮಕ್ಕಳು ತಪ್ಪು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಒಬ್ಬಾತ ಈಗಾಗಲೇ ಮನೆ ಕಟ್ಟಿಕೊಂಡಿದ್ದು ಉಳಿದವರು ದೊಡ್ಡ ಮೊತ್ತದ ಆಸ್ತಿ ಖರೀದಿ ಮಾಡಿದ್ದಾರೆ. 

 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!