
ದಾವಣಗೆರೆ(ಜೂ.06): ಯುವಕನಿಂದ ವಂಚನೆಗೊಳಗಾದ ಯುವತಿಯೊಬ್ಬಳು ಮೊಬೈಲ್ನಲ್ಲಿ ಹೇಳಿಕೆ ದಾಖಲಿಸಿ ನೇಣಿಗೆ ಶರಣಾದ ಘಟನೆ ನಗರದ ಭಾರತ್ ಕಾಲೋನಿಯಲ್ಲಿ ಇಂದು(ಭಾನುವಾರ) ನಡೆದಿದೆ. ಆಶಾ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವತಿಯಾಗಿದ್ದಾಳೆ.
ಕೆ.ಬಿ.ಈರಣ್ಣ ಎಂಬ ಎಂಬಾತನೇ ಪ್ರೀತಿಸಿ ಮದುವೆ ಆಗುವುದಾಗಿ ವಂಚಿಸಿದ ಯುವಕನಾಗಿದ್ದಾನೆ. ಯುವಕ ಮಾಡಿದ ವಂಚನೆ ಬಗ್ಗೆ ಹೇಳಿಕೆ ದಾಖಲಿಸಿ ಮನೆಯಲ್ಲಿ ನೇಣು ಬಿಗಿದುಕೊಂಡು ಆಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಂದೆ ತಾಯಿ ತರಕಾರಿ ಮಾರಾಟಕ್ಕೆ ಹೋಗಿ ಮನೆಗೆ ವಾಪಸ್ಸಾದಾಗ ಮಗಳು ನೇಣಿಗೆ ಶರಣಾಗಿದ್ದಳು.
ಶಿವಮೊಗ್ಗ: ನೇಣಿಗೆ ಶರಣಾದ ಮಹಿಳೆ, ಕಾರಣ ನಿಗೂಢ..?
ನನ್ನ ಸಾವಿಗೆ ಕೆ ಬಿ ಈರಣ್ಣನೇ ಕಾರಣ, ನನ್ನಂತ ಸಾವು ಯಾರಿಗೂ ಬರಬಾರದು. ನನ್ನನ್ನ ಚೆನ್ನಾಗಿ ನಂಬಿಸಿ ಮೋಸ ಮಾಡಿಸಿದವನಿಗೆ ಗಲ್ಲು ಶಿಕ್ಷೆ ಕೊಡಿಸಿಮ, ನನ್ನ ತರಾ ಇನ್ನೊಂದು ಹುಡುಗಿ ಜೀವನದಲ್ಲೂ ಆಟ ಆಡುತ್ತಿದ್ದಾನೆ. ಆ ಹುಡುಗಿ ಜೀವನವಾದ್ರೂ ಚನ್ನಾಗಿ ಇರಲಿ. ನಮ್ಮ ತಂದೆ ತಾಯಿ ಹೇಳಿದ್ರು ಆತನ ವಂಚಕ ಅಂತಾ ಅದರೆ ನಾನು ಕೇಳಲಿಲ್ಲ ಎಂದು ಹೇಳಿಕೆ ದಾಖಲಿಸಿ ಆಶಾ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಆರ್ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ