
ಮುಂಬೈ[ಡಿ.26]: ಮಹಾರಾಷ್ಟ್ರ ಸರ್ಕಾರ, ರಾಜ್ಯದಲ್ಲಿ ಗಣ್ಯರಿಗೆ ಒದಗಿಸುವ ಭದ್ರತೆ ಪರಿಷ್ಕೃರಿಸಿದ್ದು, ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ಗೆ ಒದಗಿಸಿದ್ದ ಭದ್ರತೆ ಕಡಿತಗೊಳಿಸಿದ್ದರೆ, ನೂತನ ಸಿಎಂ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಭದ್ರತೆಯನ್ನು ಹೆಚ್ಚಿಸಿದೆ.
ಶೋಧಿಸಿದ ಹೊಸ ಜೇಡಕ್ಕೆ ಸಚಿನ್ ಹೆಸರಿಟ್ಟ ಗುಜರಾತ್ ವಿಜ್ಞಾನಿ
ಇದುವರೆಗೆ ಸಚಿನ್ಗೆ ಎಕ್ಸ್ ದರ್ಜೆ ಭದ್ರತೆ ಒದಗಿಸಲಾಗಿತ್ತು. ಅದನ್ನೀಗ ಹಿಂದಕ್ಕೆ ಪಡೆಯಲಾಗಿದೆ. ಅದರ ಬದಲು, ಅವರು ಮನೆಯಿಂದ ಹೊರಗೆ ತೆರಳುವ ವೇಳೆ ಅವರಿಗೆ ಪೊಲೀಸ್ ವಾಹನದ ಬೆಂಗಾವಲು ಸೇವೆ ಒದಗಿಸಲಾಗುತ್ತದೆ.
ಸಚಿನ್-ಅಂಜಲಿ ಲವ್ ಸ್ಟೋರಿ: ಮೊದಲ ಭೇಟಿ, ಮೊದಲ ಸಿನೆಮಾ..?
ಇದೇ ವೇಳೆ ವೈ ದರ್ಜೆ ಭದ್ರತೆ ಹೊಂದಿದ್ದ 29 ವರ್ಷದ ಆದಿತ್ಯ ಠಾಕ್ರೆ ಭದ್ರತೆಯನ್ನು ಝಡ್ ದರ್ಜೆಗೆ ಹೆಚ್ಚಿಸಲಾಗಿದೆ. ಅಣ್ಣಾ ಹಜಾರೆ ಭದ್ರತೆಯನ್ನು ವೈ ಪ್ಲಸ್ನಿಂದ ಝಡ್ಗೆ ಹೆಚ್ಚಿಸಲಾಗಿದೆ. ಮುಂಬೈ ದಾಳಿ ಪ್ರಕರಣದಲ್ಲಿ ಕಸಬ್ಗೆ ಗಲ್ಲು ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಕೀಲ ಉಜ್ವಲ್ ನಿಕ್ಕಂ ಮತ್ತು ಹಲವು ಬಿಜೆಪಿ ನಾಯಕರ ಭದ್ರತೆಯಲ್ಲಿ ಕಡಿತ ಮಾಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.