ಕೋಚ್‌ಗೆ ಬೈದು ತಂಡದಿಂದಲೇ ಕಿಕೌಟ್‌ ಆದ ಅಶೋಕ್ ದಿಂಡಾ!

Suvarna News   | Asianet News
Published : Dec 26, 2019, 02:12 PM IST
ಕೋಚ್‌ಗೆ ಬೈದು ತಂಡದಿಂದಲೇ ಕಿಕೌಟ್‌ ಆದ ಅಶೋಕ್ ದಿಂಡಾ!

ಸಾರಾಂಶ

ಅನುಭವಿ ವೇಗಿ ಅಶೋಕ್ ದಿಂಡಾ, ಪಶ್ಚಿಮ ಬಂಗಾಳ ತಂಡದ ಬೌಲಿಂಗ್‌ ತರಬೇತುದಾರ ರಣದೇಬ್‌ ಬೋಸ್‌ ಜತೆ ಕಿರಿಕ್ ಮಾಡಿಕೊಂಡು ತಂಡದಿಂದ ಕಿಕೌಟ್ ಆಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಕೋಲ್ಕೊತಾ[ಡಿ.26]: ತಂಡದ ಬೌಲಿಂಗ್‌ ತರಬೇತುದಾರ ರಣದೇಬ್‌ ಬೋಸ್‌ ಅವರನ್ನು ನಿಂದಿಸಿದ ಕಾರಣಕ್ಕಾಗಿ ಬಂಗಾಳ ತಂಡದ ಬೌಲರ್‌ ಅಶೋಕ್‌ ದಿಂಡಾ ಅವರನ್ನು ತಂಡದಿಂದ ಕೈಬಿಡಲಾಗಿದೆ. 

ರಣಜಿ ಟ್ರೋಫಿ: ಬ್ಯಾಟಿಂಗ್‌ನಿಂದಲೇ ಉತ್ತರ ಕೊಟ್ಟ ಶಿಖರ್ ಧವನ್

ಬುಧವಾರದಿಂದ ಆರಂಭವಾದ ಆಂಧ್ರಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದಿಂದ ಅವರು ಹೊರಬಿದ್ದಿದ್ದಾರೆ. ಡ್ರೆಸ್ಸಿಂಗ್‌ ಕೋಣೆಯಲ್ಲಿ ದಿಂಡಾ ಬೌಲಿಂಗ್‌ ತರಬೇತುದಾರ ಬೋಸ್‌ ಜೊತೆ ಜಗಳ ಮಾಡಿಕೊಂಡು ಅವರನ್ನು ಕೆಟ್ಟಪದ ಬಳಸಿ ನಿಂದಿಸಿದರು. ಕೂಡಲೇ ಕ್ಷಮೆ ಕೇಳುವಂತೆ ದಿಂಡಾ ಅವರಿಗೆ ಬಂಗಾಳ ಕ್ರಿಕೆಟ್‌ ಮಂಡಳಿ ಸೂಚಿಸಿತ್ತು. ಆದರೆ ದಿಂಡಾ ಇದನ್ನು ನಿರಾಕರಿಸಿದ್ದರು. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗಿದೆ. ದಿಂಡಾ ಹಾಗೂ ಬೋಸ್‌ ಒಟ್ಟಿಗೆ ಆಡುತ್ತಿದ್ದಾನಿಂದಲೂ ಇಬ್ಬರ ನಡುವೆ ಮನಸ್ತಾಪವಿದೆ ಎನ್ನಲಾಗಿದೆ.

IPL 2020: ಹರಾಜಿಗೆ ಮುನ್ನ ಮತ್ತೆ 6 ಆಟಗಾರರ ಸೇರ್ಪಡೆ

ಅಶೋಕ್ ದಿಂಡಾ 2020ರ ಐಪಿಎಲ್ ಆಟಗಾರರ ಹರಾಜಿಗೆ ಕೊನೆಯ ಕ್ಷಣದಲ್ಲಿ ಸೇರ್ಪಡೆಗೊಂಡಿದ್ದರು. ಆದರೆ ಯಾವೊಬ್ಬ ಫ್ರಾಂಚೈಸಿಯೂ ದಿಂಡಾ ಅವರನ್ನು ಖರೀದಿಸುವ ಮನಸು ಮಾಡಿರಲಿಲ್ಲ. ಆಂಧ್ರ ಪ್ರದೇಶ ವಿರುದ್ಧ ಬಂಗಾಳ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?