ವಿಜಯ್‌ ಹಜಾರೆ ಟೂರ್ನಿ: ಕರ್ನಾ​ಟ​ಕ​ಕ್ಕಿಂದು ಗೋವಾ ಚಾಲೆಂಜ್‌

By Web DeskFirst Published Oct 16, 2019, 7:48 AM IST
Highlights

ವಿಜಯ್ ಹಜಾರೆ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ, ಇಂದು ಲೀಗ್ ಹಂತದ ಅಂತಿಮ ಪಂದ್ಯಕ್ಕೆ ಸಜ್ಜಾಗಿದೆ. ಗೋವಾ ವಿರುದ್ದ ಗೆಲುವು ಸಾಧಿಸಿ ನಾಕೌಟ್ ಪ್ರವೇಶಿಸಲು ಸಜ್ಜಾಗಿದೆ. 

ಬೆಂಗಳೂರು(ಅ.16): 2019-20ರ ವಿಜಯ್‌ ಹಜಾರೆ ರಾಷ್ಟ್ರೀಯ ಏಕ​ದಿನ ಟೂರ್ನಿ​ಯಲ್ಲಿ ಪ್ರಚಂಡ ಲಯ​ದ​ಲ್ಲಿ​ರುವ ಕರ್ನಾ​ಟಕ ತಂಡ, ಈಗಾ​ಗಲೇ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದೆ. ಬುಧ​ವಾರ ಇಲ್ಲಿನ ಆಲೂರು ಮೈದಾ​ನ​ದಲ್ಲಿ ನಡೆ​ಯ​ಲಿ​ರುವ ಲೀಗ್‌ ಹಂತ​ದ ಅಂತಿಮ ಪಂದ್ಯ​ದಲ್ಲಿ ಗೋವಾ ತಂಡ​ವನ್ನು ಎದು​ರಿ​ಸ​ಲಿದ್ದು, ಗೆಲು​ವಿ​ನೊಂದಿಗೆ ನಾಕೌಟ್‌ ಹಂತಕ್ಕೆ ಕಾಲಿ​ಡ​ಲು ರಾಜ್ಯ ತಂಡ ಎದುರು ನೋಡು​ತ್ತಿದೆ.

ಇದನ್ನೂ ಓದಿ: ವಿಜಯ್ ಹಜಾರೆ: ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ!

ಕರ್ನಾ​ಟಕ ಆಡಿ​ರುವ 7 ಪಂದ್ಯ​ಗ​ಳಲ್ಲಿ 6ರಲ್ಲಿ ಗೆಲುವು ಸಾಧಿ​ಸಿ ‘ಎ’ ಗುಂಪಿ​ನಲ್ಲಿ ಅಗ್ರ​ಸ್ಥಾನ ಕಾಯ್ದು​ಕೊಂಡಿದೆ. 24 ಅಂಕ​ಗ​ಳನ್ನು ಹೊಂದಿ​ರುವ ಕರ್ನಾ​ಟಕ, ಈ ಪಂದ್ಯ​ದಲ್ಲಿ ಸೋಲುಂಡರೂ ಅಗ್ರ​ಸ್ಥಾ​ನ​ದಲ್ಲೇ ಉಳಿ​ದು​ಕೊ​ಳ್ಳುವುದು ಬಹು​ತೇಕ ಖಚಿತ ಎನಿ​ಸಿದೆ. ಆದರೆ ತಂಡ ಸದ್ಯ ಇರುವ ಲಯ ನೋಡಿ​ದರೆ ಸೋಲು​ವ ಸಾಧ್ಯತೆ ಕಡಿಮೆ. ಗೋವಾ ತಂಡ 7 ಪಂದ್ಯ​ಗ​ಳಲ್ಲಿ ಕೇವಲ 1ರಲ್ಲಿ ಗೆದ್ದಿದ್ದು ಈಗಾ​ಗಲೇ ನಾಕೌಟ್‌ ರೇಸ್‌ನಿಂದ ಹೊರ​ಬಿ​ದ್ದಿದೆ. ಕರ್ನಾ​ಟಕ ತಂಡ ಭರ್ಜರಿ ಗೆಲು​ವಿನ ನಿರೀಕ್ಷೆಯಲ್ಲಿದ್ದು, ಕ್ವಾರ್ಟರ್‌ ಫೈನಲ್‌ಗೂ ಮೊದಲು ಉತ್ತಮ ಅಭ್ಯಾಸ ನಡೆಸಲು ಕಾತರಗೊಂಡಿದೆ.

ಇದನ್ನೂ ಓದಿ: ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಸಂಜು ಸಾಮ್ಸನ್!

ಬ್ಯಾಟ್ಸ್‌ಮನ್‌ಗಳ ಮೇಲೆ ನಿರೀಕ್ಷೆ: ಮನೀಶ್‌ ಪಾಂಡೆ (471 ರನ್‌), ಕೆ.ಎಲ್‌.ರಾ​ಹುಲ್‌ (359 ರನ್‌), ದೇವ​ದತ್‌್ತ ಪಡಿ​ಕ್ಕಲ್‌ (354 ರನ್‌) ಹೊರ​ತು​ಪ​ಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳಿಂದ ನಿರೀ​ಕ್ಷಿತ ಪ್ರದ​ರ್ಶನ ಮೂಡಿ​ಬಂದಿಲ್ಲ. ಈ ಮೂವ​ರನ್ನು ಹೊರ​ತು​ಪ​ಡಿಸಿ ಟೂರ್ನಿ​ಯಲ್ಲಿ ಒಟ್ಟು 100ಕ್ಕಿಂತ ಹೆಚ್ಚು ರನ್‌ ಕಲೆಹಾಕಿ​ರುವ ಆಟ​ಗಾರ ವಿಕೆಟ್‌ ಕೀಪರ್‌ ಬಿ.ಆರ್‌.ಶ​ರತ್‌ (102 ರನ್‌). ಹೀಗಾಗಿ, ನಾಕೌಟ್‌ಗೂ ಮೊದಲು ತಂಡದ ಇತರ ಬ್ಯಾಟ್ಸ್‌ಮನ್‌ಗಳು ಲಯ ಕಂಡು​ಕೊ​ಳ್ಳುವ ಅವ​ಶ್ಯ​ಕತೆ ಇದೆ. ಪವನ್‌ ದೇಶ​ಪಾಂಡೆ, ಕರುಣ್‌ ನಾಯರ್‌, ಕೆ.ವಿ.​ಸಿ​ದ್ಧಾಥ್‌ರ್‍ , ಆಲ್ರ​ರೌಂಡರ್‌ ಕೆ.ಗೌ​ತಮ್‌ ಮೇಲೆ ಹೆಚ್ಚಿನ ಒತ್ತಡವಿದೆ.

ಇದನ್ನೂ ಓದಿ: ಕುಡ್ಲದ ಕುವರಿಗೆ ಮನೀಶ್ ಪಾಂಡೆ ಕ್ಲೀನ್ ಬೋಲ್ಡ್!.

ಪ್ರಸಿದ್‌್ಧ ಯಶಸ್ವಿ ಬೌಲಿಂಗ್‌: ಯುವ ವೇಗದ ಬೌಲರ್‌ ಪ್ರಸಿದ್‌್ಧ ಕೃಷ್ಣ ಈ ಟೂರ್ನಿಯಲ್ಲಿ ರಾಜ್ಯದ ಯಶಸ್ವಿ ಬೌಲರ್‌ ಎನಿ​ಸಿ​ಕೊಂಡಿ​ದ್ದಾರೆ. 7 ಪಂದ್ಯ​ಗ​ಳಲ್ಲಿ ಅವರು 16 ವಿಕೆಟ್‌ ಕಬ​ಳಿ​ಸಿದ್ದು, ಕೇವಲ 4.02ರ ಎಕಾ​ನಮಿ ರೇಟ್‌ನಲ್ಲಿ ರನ್‌ ಬಿಟ್ಟು​ಕೊ​ಟ್ಟಿ​ದ್ದಾರೆ. ಸ್ಪಿನ್ನರ್‌ಗಳಾದ ಶ್ರೇಯಸ್‌ ಗೋಪಾಲ್‌ (13 ವಿಕೆಟ್‌) ಹಾಗೂ ಕೆ.ಗೌ​ತಮ್‌ (11 ವಿಕೆಟ್‌) ಉತ್ತಮ ಪ್ರದ​ರ್ಶನ ನೀಡಿದ್ದು, ಲಯ ಕಾಪಾ​ಡಿ​ಕೊ​ಳ್ಳ​ಬೇ​ಕಿದೆ. ಅನು​ಭವಿ ವೇಗಿ​ಗ​ಳಾದ ಅಭಿ​ಮನ್ಯು ಮಿಥುನ್‌ (9 ವಿಕೆಟ್‌) ಹಾಗೂ ರೋನಿತ್‌ ಮೋರೆ (10 ವಿಕೆಟ್‌) ಅವ​ರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿ​ಸಿದೆ.

ಮತ್ತೊಂದೆಡೆ ಗೋವಾ ಹೀನಾಯ ಪ್ರದ​ರ್ಶನ ತೋರಿದೆ. ದೆಹಲಿ ಮೂಲದ ಆದಿತ್ಯ ಕೌಶಿಕ್‌ ಹೊರ​ತು​ಪ​ಡಿಸಿ ಉಳಿ​ದ್ಯಾವ ಬ್ಯಾಟ್ಸ್‌ಮನ್‌ 200ಕ್ಕಿಂತ ಹೆಚ್ಚು ರನ್‌ ಕಲೆಹಾಕಿಲ್ಲ. ಯಾವೊಬ್ಬ ಬೌಲರ್‌ ಸಹ 10 ವಿಕೆಟ್‌ ಕಬ​ಳಿ​ಸಿಲ್ಲ. ‘ಎ’ ಹಾಗೂ ‘ಬಿ’ ಗುಂಪಿನ ಒಟ್ಟು ಅಂಕ​ಪ​ಟ್ಟಿ​ಯಲ್ಲಿ 17ನೇ ಸ್ಥಾನ​ದ​ಲ್ಲಿ​ರುವ ಗೋವಾ ತಂಡ, ಮುಂದಿನ ಆವೃ​ತ್ತಿಗೆ ‘ಸಿ’ ಗುಂಪಿಗೆ ಹಿಂಬಡ್ತಿ ಪಡೆ​ಯ​ಲಿದೆ.

ಸ್ಥಿರ ಹಾಗೂ ಸಾಂಘಿಕ ಪ್ರದ​ರ್ಶನದೊಂದಿಗೆ ಕರ್ನಾ​ಟಕ, ಅಂಕ​ಪ​ಟ್ಟಿ​ಯಲ್ಲಿ ಅಗ್ರಸ್ಥಾನ ಉಳಿ​ಸಿ​ಕೊಂಡಿದೆ. ಸದ್ಯದ ಮಟ್ಟಿಗೆ ತಂಡ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿ​ಸಿ​ಕೊ​ಳ್ಳು​ತ್ತಿದ್ದು, ಲೀಗ್‌ ಹಂತ​ದಲ್ಲಿ ತೋರಿದ ಪ್ರದ​ರ್ಶ​ನ​ವನ್ನೇ ನಾಕೌಟ್‌ ಹಂತ​ದಲ್ಲೂ ತೋರ​ಬೇ​ಕಿದೆ. ಅದ​ಕ್ಕಿಂತ ಮೊದಲು ಲೀಗ್‌ ಹಂತ​ವನ್ನು ಭರ್ಜ​ರಿ​ಯಾಗಿ ಮುಕ್ತಾ​ಯ​ಗೊ​ಳಿ​ಸಲು ಮನೀಶ್‌ ಪಾಂಡೆ ಪಡೆ ಎದುರು ನೋಡು​ತ್ತಿದೆ.

ಪಂದ್ಯ ಆರಂಭ: ಬೆಳ​ಗ್ಗೆ 9ಕ್ಕೆ

click me!