
ಮ್ಯಾಂಚೆಸ್ಟರ್(ಜು.20): ಕೊರೋನಾ ಸೋಂಕು ಹರಡಬಹುದು ಎನ್ನುವ ಭೀತಿಯಿಂದ ಚೆಂಡಿಗೆ ಎಂಜಲು ಹಾಕಿ ಉಜ್ಜಬಾರದು ಎನ್ನುವ ನಿಯಮವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಜಾರಿ ಮಾಡಿದೆ.
ಆದರೆ ಇಲ್ಲಿ ವಿಂಡೀಸ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಆಟಗಾರ ಡೊಮಿನಿಕ್ ಸಿಬ್ಲಿ ಆಕಸ್ಮಿಕವಾಗಿ ಚೆಂಡಿಗೆ ಎಂಜಲು ಹಾಕಿದರು. ತಕ್ಷಣ ಅಂಪೈರ್ ಸ್ಯಾನಿಟೈಸರ್ ಬಳಸಿ ಚೆಂಡನ್ನು ಸ್ವಚ್ಛಗೊಳಿಸಿದ ಪ್ರಸಂಗ ನಡೆಯಿತು. ಎಂಜಲು ಬಳಕೆ ಮಾಡಿದರೆ 2 ಬಾರಿ ಅಂಪೈರ್ಗಳು ಎಚ್ಚರಿಕೆ ನೀಡಲಿದ್ದು, 3ನೇ ಬಾರಿ ತಪ್ಪಾದರೆ ಪೆನಾಲ್ಟಿ ರೂಪದಲ್ಲಿ ಎದುರಾಳಿ ತಂಡಕ್ಕೆ 5 ರನ್ ಸೇರ್ಪಡೆಗೊಳ್ಳಲಿದೆ.
ಬಾಂಗ್ಲಾ ಕ್ರಿಕೆಟಿಗರ ಅಭ್ಯಾಸ: ಒಮ್ಮೆಗೆ ಒಬ್ಬರಿಗೆ ಪ್ರವೇಶ!
ಢಾಕಾ: ಕೊರೋನಾ ಸೋಂಕಿನ ಭೀತಿಯಿಂದಾಗಿ ಕ್ರಿಕೆಟ್ ಅಭ್ಯಾಸ ನಿಲ್ಲಿಸಿದ್ದ ಬಾಂಗ್ಲಾದೇಶ ಕ್ರಿಕೆಟಿಗರು ಭಾನುವಾರದಿಂದ ಅಭ್ಯಾಸ ಪುನರಾಂಭಿಸಿದ್ದಾರೆ. 9 ಆಟಗಾರರು ಅಭ್ಯಾಸಕ್ಕೆ ಮರಳಿದ್ದು, ಕೋವಿಡ್-19 ಮಾರ್ಗಸೂಚಿ ಪ್ರಕಾರ, ಒಮ್ಮೆಗೆ ಒಬ್ಬ ಕ್ರಿಕೆಟಿಗ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಿಸಬೇಕು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಸೂಚಿಸಿದೆ.
2ನೇ ಟೆಸ್ಟ್: ರೋಚಕ ಘಟ್ಟದತ್ತ ಆಂಗ್ಲೋ-ವಿಂಡೀಸ್ ಟೆಸ್ಟ್
ಒಬ್ಬ ಕ್ರಿಕೆಟಿಗನ ಜೊತೆ ಒಬ್ಬ ಟ್ರೈನರ್ಗೆ ಮಾತ್ರ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ಸಿಗಲಿದೆ. ಕೆಲ ಆಟಗಾರರು ಢಾಕಾದಲ್ಲಿ ಅಭ್ಯಾಸ ನಡೆಸಿದರೆ, ಇನ್ನೂ ಕೆಲವರು ಸೈಲ್ಹೆಟ್ನಲ್ಲಿ ನೆಟ್ಸ್ ಅಭ್ಯಾಸ ನಡೆಸಿದರು. ಆಟಗಾರ ಹಾಗೂ ಟ್ರೈನರ್ ಪ್ರತ್ಯೇಕ ನೀರಿನ ಬಾಟಲ್, ಆಸನ, ಟಾಯ್ಲೆಟ್ಗಳನ್ನು ಬಳಕೆ ಮಾಡುವಂತೆ ಸೂಚಿಸಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.