ಕ್ಷೇತ್ರ ರಕ್ಷಣೆಗೆ ಅಡ್ಡಿ: ಲಂಕಾ ವಿರುದ್ದ ಕ್ರೀಡಾ ಸ್ಪೂರ್ತಿ ಮರೆತ ವಿಂಡೀಸ್‌?

Published : Mar 12, 2021, 08:18 AM IST
ಕ್ಷೇತ್ರ ರಕ್ಷಣೆಗೆ ಅಡ್ಡಿ: ಲಂಕಾ ವಿರುದ್ದ ಕ್ರೀಡಾ ಸ್ಪೂರ್ತಿ ಮರೆತ ವಿಂಡೀಸ್‌?

ಸಾರಾಂಶ

ಶ್ರೀಲಂಕಾ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಏಕದಿನ ಪಂದ್ಯದಲ್ಲಿ ಗುಣತಿಲಕ ರನೌಟ್‌ ಇದೀಗ ಸಾಕಷ್ಟು ಸದ್ದು ಮಾಡುತ್ತಿದ್ದು, ವಿಂಡೀಸ್‌ ಆಟಗಾರರು ಕ್ರೀಡಾಸ್ಪೂರ್ತಿ ಮರೆತರಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನಾಥ್‌ರ್‍ಸೌಂಡ್‌(ಆ್ಯಂಟಿಗಾ): ವೆಸ್ಟ್‌ಇಂಡೀಸ್‌ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಲಂಕಾ ಬ್ಯಾಟ್ಸ್‌ಮನ್‌ ಗುಣತಿಲಕ ಕ್ಷೇತ್ರ ರಕ್ಷಣೆಗೆ ಅಡ್ಡಿಪಡಿಸಿ ಔಟಾದರು. ಆದರೆ ಈ ಪ್ರಸಂಗ ವಿವಾದಕ್ಕೆ ಕಾರಣವಾಗಿದೆ. 

ಲಂಕಾ ಇನ್ನಿಂಗ್ಸ್‌ನ 21ನೇ ಓವರ್‌ ವೇಳೆ ಗುಣತಿಲಕ ರನ್‌ಗಾಗಿ ಕೆಲ ದೂರ ಓಡಿದ್ದಾಗ ವಿಂಡೀಸ್‌ ನಾಯಕ ಕಿರೋನ್‌ ಪೊಲ್ಲಾರ್ಡ್‌ ಚೆಂಡನ್ನು ಕೈಗೆತ್ತಿಕೊಳ್ಳಲು ಧಾವಿಸಿದರು. ಈ ಸಂದರ್ಭದಲ್ಲಿ ಗುಣತಿಲಕ ಕ್ರೀಸ್‌ಗೆ ವಾಪಸಾಗುವ ವೇಳೆ ಚೆಂಡಿನ ಮೇಲೆ ಕಾಲಿಟ್ಟರು.

ಈ ವೇಳೆ ಅವರ ಕಾಲಿನ ಹಿಂಬದಿಗೆ ತಗುಲಿ ಚೆಂಡು ಕೀಪರ್‌ನತ್ತ ಸಾಗಿತು. ರನೌಟ್‌ ಮಾಡಲು ಬಂದ ಪೊಲ್ಲಾರ್ಡ್‌, ಕ್ಷೇತ್ರರಕ್ಷಣೆಗೆ ಅಡ್ಡಿಪಡಿಸಿದ್ದಾಗಿ ಅಂಪೈರ್‌ ಬಳಿ ದೂರಿ ಔಟ್‌ ನೀಡುವಂತೆ ಮನವಿ ಸಲ್ಲಿಸಿದರು. ಆನ್‌ಫೀಲ್ಡ್‌ ಅಂಪೈರ್‌ ಜೋ ವಿಲ್ಸನ್‌ 3ನೇ ಅಂಪೈರ್‌ಗೆ ತೀರ್ಪು ವರ್ಗಾಯಿಸುವ ಮೊದಲು ಸಾಫ್ಟ್‌ ಸಿಗ್ನಲ್‌ ಔಟ್‌ ಎಂದು ಘೋಷಿಸಿದ್ದರು. ಗುಣತಿಲಕ ಉದ್ದೇಶಪೂರ್ವಕವಾಗಿ ಕ್ಷೇತ್ರ ರಕ್ಷಣೆಗೆ ಅಡ್ಡಿಪಡಿಸಿದ್ದಾರೆ ಎನ್ನುವುದು ಖಚಿತವಾಗದಿದ್ದರೂ ಆನ್‌ಫೀಲ್ಡ್‌ ಅಂಪೈರ್‌ ಸಾಫ್ಟ್‌ ಸಿಗ್ನಲ್‌ ಔಟ್‌ ಎಂದು ಘೋಷಿಸಿದ್ದ ಕಾರಣ 3ನೇ ಅಂಪೈರ್‌ ಔಟ್‌ ಎನ್ನುವ ತೀರ್ಮಾನಕ್ಕೆ ಬಂದರು.

ಟಿ20 ಕ್ರಿಕೆಟ್‌: ಟೀಂ ಇಂಡಿಯಾಗೆ ಮತ್ತೆ ನಂ.1 ಆಗುವ ಗುರಿ

ಈ ಘಟನೆ ಸಾಮಾಜಿಕ ತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿಂಡೀಸ್‌ ಆಟಗಾರರು ಕ್ರೀಡಾ ಸ್ಫೂರ್ತಿ ಮರೆತು ವರ್ತಿಸಿದರು ಎಂದು ಆರೋಪಿಸಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Sachin: ₹70,00,00,000 ಕೋಟಿ ಕೊಟ್ಟು ಭರ್ಜರಿ ಜಮೀನು ಖರೀದಿಸಿದ ಸಚಿನ್ ತೆಂಡೂಲ್ಕರ್; ಈ ಹಿಲ್‌ಸ್ಟೇಷನ್‌ನಲ್ಲಿ ಏನು ತಯಾರಾಗುತ್ತೆ?
ನಿಂಗೆ ಯಾರೂ ಹೆಣ್ಮಕ್ಕಳು ಇಲ್ವಾ: ಪಾಂಡ್ಯ ವಿಚಾರದಲ್ಲಿ ರೊಚ್ಚಿಗೆದ್ದ ನಟಿ