Ranji Trophy: ಕರ್ನಾಟಕಕ್ಕೆ ಮತ್ತೆ ಸೌರಾಷ್ಟ್ರ ಕಂಟಕ; ಇನಿಂಗ್ಸ್‌ ಹಿನ್ನಡೆ ಭೀತಿ..!

Published : Feb 11, 2023, 08:43 AM IST
Ranji Trophy: ಕರ್ನಾಟಕಕ್ಕೆ ಮತ್ತೆ ಸೌರಾಷ್ಟ್ರ ಕಂಟಕ; ಇನಿಂಗ್ಸ್‌ ಹಿನ್ನಡೆ ಭೀತಿ..!

ಸಾರಾಂಶ

ರಣಜಿ ಟ್ರೋಫಿ ಟೂರ್ನಿಯ ಸೆಮೀಸ್‌ನಲ್ಲಿ ಕರ್ನಾಟಕ ಎದುರು ಸೌರಾಷ್ಟ್ರ ತಿರುಗೇಟು ಇನಿಂಗ್ಸ್‌ ಹಿನ್ನಡೆ ಅನುಭವಿಸುವ ಭೀತಿಯಲ್ಲಿದೆ ಮಯಾಂಕ್‌ ಅಗರ್‌ವಾಲ್ ಪಡೆ ಆಕರ್ಷಕ ಶತಕ ಸಿಡಿಸಿ ಮಿಂಚಿದ ಸೌರಾಷ್ಟ್ರದ ಶೆಲ್ಡನ್ ಜ್ಯಾಕ್ಸನ್, ಅರ್ಪಿತ್ ವಸಾವ್ಡಾ

ಬೆಂಗ​ಳೂ​ರು(ಫೆ.11): ರಣಜಿ ಟ್ರೋಫಿ ಕ್ರಿಕೆ​ಟ್‌​ನಲ್ಲಿ ಬದ್ಧ​ವೈರಿ ಸೌರಾಷ್ಟ್ರ ವಿರುದ್ಧ ಕರ್ನಾ​ಟಕ ತಂಡ ಅನು​ಭ​ವಿ​ಸುವ ಸಂಕ​ಷ್ಟದ ಸಂಪ್ರ​ದಾಯ ನಿಲ್ಲುವ ಲಕ್ಷಣ ಕಾಣು​ತ್ತಿ​ಲ್ಲ. ಹಿಂದಿನ 3 ನಾಕೌಟ್‌ ಮುಖಾಮುಖಿಗಳಲ್ಲಿ ಸೌರಾಷ್ಟ್ರಕ್ಕೆ ಶರಣಾಗಿದ್ದ ಕರ್ನಾಟಕ, ಈ ಸಲವೂ ಅದೇ ದಿಕ್ಕಿನಲ್ಲಿ ಸಾಗಿದೆ.

ಮಯಾಂಕ್‌ ಅಗ​ರ್‌​ವಾಲ್‌ ಸಾಹ​ಸ ದಿಂದಾಗಿ ರಾಜ್ಯ ತಂಡ 400ಕ್ಕೂ ಹೆಚ್ಚು ರನ್‌ ಕಲೆ​ ಹಾ​ಕಿ​ದರೂ, ಶೆಲ್ಡನ್‌ ಜ್ಯಾಕ್ಸನ್‌ ಹಾಗೂ ಹಂಗಾಮಿ ನಾಯಕ ಅರ್ಪಿತ್‌ ವಸಾವ್ಡಾ ಮನಮೋಹಕ ಬ್ಯಾಟಿಂಗ್‌​ನಿಂದಾಗಿ ಸೌರಾಷ್ಟ್ರ ತಂಡ ಸೆಮಿ​ಫೈ​ನಲ್‌ ಕಾದಾ​ಟ​ದಲ್ಲಿ ಮೊದಲ ಇನ್ನಿಂಗ್‌್ಸ ಮುನ್ನಡೆ ಸಾಧಿ​ಸು​ವತ್ತ ದಾಪು​ಗಾ​ಲಿ​ಟ್ಟಿ​ದೆ.

ತಂಡ 3ನೇ ದಿನ​ದಂತ್ಯಕ್ಕೆ 4 ವಿಕೆ​ಟ್‌ಗೆ 364 ರನ್‌ ಗಳಿ​ಸಿದ್ದು, ಇನ್ನು ಕೇವಲ 43 ರನ್‌ ಹಿನ್ನ​ಡೆ​ಯ​ಲ್ಲಿದೆ. 5 ದಿನದ ಆಟದ ಮುಕ್ತಾ​ಯಕ್ಕೆ ಯಾವುದೇ ಫಲಿ​ತಾಂಶ ಬರ​ದಿ​ದ್ದರೆ ಮೊದಲ ಇನ್ನಿಂಗ್‌್ಸ ಮುನ್ನಡೆ ಪಡೆದ ತಂಡ ಫೈನಲ್‌ ಪ್ರವೇ​ಶಿ​ಸ​ಲಿದ್ದು, ಕರ್ನಾ​ಟಕ ಪಂದ್ಯ ತನ್ನ​ದಾ​ಗಿ​ಸಿ​ಕೊಳ್ಳಲು ಕೊನೆ 2 ದಿನ ಅಸಾ​ಧಾ​ರಣ ಪ್ರದ​ರ್ಶನ ನೀಡಬೇ​ಕಾದ ಅಗ​ತ್ಯ​ವಿ​ದೆ.

Ranji Trophy ಮಯಾಂಕ್‌ ಅಗರ್‌ವಾಲ್ ಕೆಚ್ಚೆದೆಯ ದ್ವಿಶತಕ; ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ..!

232 ರನ್‌ ಜೊತೆ​ಯಾ​ಟ: 2ನೇ ದಿನ 2 ವಿಕೆಟ್‌ಗೆ 76 ರನ್‌ ಗಳಿಸಿದ್ದ ಸೌರಾಷ್ಟ್ರ ಶುಕ್ರ​ವಾರ ರಾಜ್ಯದ ಬೌಲ​ರ್‌​ಗ​ಳನ್ನು ಇನ್ನಿಲ್ಲದಂತೆ ಕಾಡಿತು. 3ನೇ ದಿನ ಪಿಚ್‌ ಸ್ಪಿನ್ನ​ರ್‌​ಗ​ಳಿಗೆ ನೆರ​ವಾ​ಗುವ ನಿರೀ​ಕ್ಷೆ​ಯಿತ್ತಾದ್ದರೂ ಜ್ಯಾಕ್ಸನ್‌, ಅರ್ಪಿತ್‌ ಆತಿ​ಥೇಯ ತಂಡದ ದಾಳಿ​ಯನ್ನು ಸಮ​ರ್ಥ​ವಾಗಿ ಎದು​ರಿ​ಸಿ​ದರು. ಹಾರ್ವಿಕ್‌ ದೇಸಾಯಿ 33 ರನ್‌ಗೆ ವಿಕೆಟ್‌ ಒಪ್ಪಿ​ಸಿದ ಬಳಿ​ಕ ಜ್ಯಾಕ್ಸ​ನ್‌ಗೆ ಜೊತೆ​ಯಾದ ಅರ್ಪಿತ್‌ 4ನೇ ವಿಕೆ​ಟ್‌ಗೆ 378 ಎಸೆ​ತ​ಗ​ಳಲ್ಲಿ 232 ರನ್‌ ಜೊತೆ​ಯಾ​ಟ​ವಾ​ಡಿದರು.

2ನೇ ದಿನ ಸಮಥ್‌ರ್‍ ಕೈಚೆ​ಲ್ಲಿದ್ದ ಕ್ಯಾಚ್‌ನ ಲಾಭ​ವೆ​ತ್ತಿ ಕ್ರೀಸ್‌​ನಲ್ಲಿ ಭದ್ರ​ವಾಗಿ ನೆಲೆ​ಯೂ​ರಿದ ಜ್ಯಾಕ್ಸನ್‌ ಕರ್ನಾ​ಟ​ಕಕ್ಕೆ ಕಂಟಕರಾದರು. ಅವರು 245 ಎಸೆ​ತ​ಗ​ಳಲ್ಲಿ 23 ಬೌಂಡರಿ, 2 ಸಿಕ್ಸ​ರ​ನ್ನೊ​ಳ​ಗೊಂಡ 160 ರನ್‌ ಸಿಡಿಸಿ ಕೆ.ಗೌ​ತ​ಮ್‌ಗೆ ವಿಕೆಟ್‌ ಒಪ್ಪಿ​ಸಿ​ದರು. ಸದ್ಯ 112 ರನ್‌ ಗಳಿ​ಸಿ​ರುವ ಅರ್ಪಿತ್‌ ಜೊತೆಗೆ ಚಿರಾಗ್‌ ಜಾನಿ​(19) ಕ್ರೀಸ್‌​ ಕಾಯ್ದುಕೊಂಡಿದ್ದಾರೆ. ಸೌರಾಷ್ಟ್ರದ ಬ್ಯಾಟಿಂಗ್‌ ಪಡೆ ಉದ್ದವಿದ್ದು, ದೊಡ್ಡ ಮುನ್ನಡೆ ಸಂಪಾದಿಸಿ ಕರ್ನಾಟಕಕ್ಕೆ ಫೈನಲ್‌ ಬಾಗಿಲು ಬಂದ್‌ ಆಗುವಂತೆ ಮಾಡಲು ಎದುರು ನೋಡುತ್ತಿದೆ.

ಸ್ಕೋರ್‌: ಕರ್ನಾ​ಟಕ 407/10 
ಸೌರಾಷ್ಟ್ರ(3ನೇ ದಿನ​ದಂತ್ಯ​ಕ್ಕೆ) 364/4
(ಜಾಕ್ಸನ್‌ 160, ಅರ್ಪಿತ್‌ 112*, ವಿದ್ವತ್‌ 2-64)

ಮಧ್ಯ ಪ್ರದೇಶ ವಿರುದ್ಧ ಇನ್ನಿಂಗ್ಸ್‌ ಮುನ್ನಡೆ ಪಡೆದ ಬಂಗಾ​ಳ

ಇಂದೋ​ರ್‌​: ರಣಜಿ ಟ್ರೋಫಿ ಸೆಮಿ​ಫೈ​ನ​ಲ್‌​ನಲ್ಲಿ ಹಾಲಿ ಚಾಂಪಿ​ಯನ್‌ ಮಧ್ಯ​ಪ್ರ​ದೇ​ಶ ತಂಡ ಬಂಗಾಳ ವಿರುದ್ಧ ಇನ್ನಿಂಗ್‌್ಸ ಹಿನ್ನಡೆ ಅನು​ಭ​ವಿ​ಸಿದೆ. ಬಂಗಾಳದ 438 ರನ್‌ಗೆ ಉತ್ತರವಾಗಿ ಮಧ್ಯ​ಪ್ರ​ದೇಶ ಕೇವಲ 170 ರನ್‌ಗೆ ಸರ್ವ​ಪ​ತನ ಕಂಡಿತು. ಸರನ್ಶ್ ಜೈನ್‌​(65) ತಂಡದ ಪರ ಏಕೈಕ ಅರ್ಧ​ಶತಕ ಸಿಡಿ​ಸಿ​ದರೆ, ಶುಭಂ ಶರ್ಮಾ ಔಟಾ​ಗದೆ 44 ರನ್‌ ಸಿಡಿ​ಸಿ​ದರು. ಆಕಾಶ್‌ದೀಪ್‌ 42ಕ್ಕೆ 5 ವಿಕೆಟ್‌ ಕಿತ್ತರು. 

268 ರನ್‌ ಮುನ್ನಡೆ ಪಡೆ​ದರೂ ಫಾಲೋ-ಆನ್‌ ಹೇರದೆ ಬಂಗಾಳ 2ನೇ ಇನ್ನಿಂಗ್‌್ಸ ಆರಂಭಿ​ಸಿದ್ದು, 3ನೇ ದಿನ​ದಂತ್ಯಕ್ಕೆ 2 ವಿಕೆ​ಟ್‌ಗೆ 59 ರನ್‌ ಗಳಿ​ಸಿದೆ. ತಂಡ ಒಟ್ಟಾರೆ 329 ರನ್‌ ಮುನ್ನ​ಡೆ​ಯ​ಲ್ಲಿದ್ದು, 4ನೇ ದಿನ​ವಾದ ಶನಿ​ವಾರ ಮತ್ತಷ್ಟು ರನ್‌ ಸೇರಿಸಿ ಮಧ್ಯ​ಪ್ರ​ದೇ​ಶಕ್ಕೆ ದೊಡ್ಡ ಗುರಿ ನೀಡುವ ನಿರೀ​ಕ್ಷೆ​ಯ​ಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌