ರಣಜಿಯಲ್ಲಿ ಕರ್ನಾಟಕದ ನಾಕೌಟ್‌ಗೇರುವ ಕನಸು ಭಗ್ನ!

Published : Feb 01, 2025, 09:18 AM IST
ರಣಜಿಯಲ್ಲಿ ಕರ್ನಾಟಕದ ನಾಕೌಟ್‌ಗೇರುವ ಕನಸು ಭಗ್ನ!

ಸಾರಾಂಶ

ಕರ್ನಾಟಕ ರಣಜಿ ಟ್ರೋಫಿ 2024-25ರಲ್ಲಿ ನಾಕೌಟ್ ಹಂತ ತಲುಪಲು ವಿಫಲವಾಗಿದೆ. ಹರ್ಯಾಣ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ಗೆಲುವು ಅಗತ್ಯವಿದ್ದರೂ, ಸಾಧ್ಯವಾಗಲಿಲ್ಲ. ಹರ್ಯಾಣ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಕರ್ನಾಟಕದ ಕನಸು ಭಗ್ನವಾಯಿತು. ಒಂಬತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಕರ್ನಾಟಕ ನಾಕೌಟ್ ಹಂತ ತಲುಪಿಲ್ಲ. ಹರ್ಯಾಣ ಮತ್ತು ಕೇರಳ 'ಸಿ' ಗುಂಪಿನಿಂದ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿವೆ.

ಬೆಂಗಳೂರು: ಕರ್ನಾಟಕ ತಂಡ 2024-25ರ ರಣಜಿ ಟ್ರೋಫಿಯಲ್ಲಿ ತನ್ನ ಅಭಿಯಾನವನ್ನು ಗುಂಪು ಹಂತದಲ್ಲೇ ಕೊನೆಗೊಳಿಸಲಿದೆ. ಹರ್ಯಾಣ ವಿರುದ್ಧ ಇಲ್ಲಿ ನಡೆಯುತ್ತಿರುವ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ರಾಜ್ಯಕ್ಕೆ ಇನ್ನಿಂಗ್ಸ್ ಜಯದ ಅಗತ್ಯವಿತ್ತು. ಆದರೆ, ಮೊದಲ ಇನ್ನಿಂಗ್ಸ್‌ನಲ್ಲಿ 304 ರನ್‌ಗೆ ಆಲೌಟ್ ಕರ್ನಾಟಕ, ಹರ್ಯಾಣವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ವಿಫಲವಾದ ಕಾರಣ, ನಾಕೌಟ್‌ಗೇರುವ ಕನಸು ಭಗ್ನಗೊಂಡಿದೆ.

ಕರ್ನಾಟಕ ಇನ್ನಿಂಗ್ಸ್ ಗೆಲುವು ಸಾಧಿಸಬೇಕಿದ್ದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಹರ್ಯಾಣ ಮೇಲೆ ಫಾಲೋ ಆನ್ ಹೇರಬೇಕಿತ್ತು ಅಥವಾ 10 ವಿಕೆಟ್ ಜಯ ಅಗತ್ಯವಿತ್ತು. ಈ ಎರಡೂ ಸಾಧ್ಯವಾಗದ ಕಾರಣ, ರಾಜ್ಯ ತಂಡ ಗುಂಪು ಹಂತದಲ್ಲೇ ಹೊರಬೀಳಲಿದೆ. 'ಸಿ' ಗುಂಪಿಂದ ಹರ್ಯಾಣ, ಕೇರಳ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದಿವೆ.

ಆಂಗ್ಲರನ್ನು ಬಗ್ಗುಬಡಿದ ಟೀಂ ಇಂಡಿಯಾ: ತವರಿನಲ್ಲಿ ಭಾರತಕ್ಕೆ ಮತ್ತೊಂದು ಟಿ20 ಸರಣಿ!

ಬಿಹಾರ ವಿರುದ್ಧದ ಪಂದ್ಯದಲ್ಲಿ ಕೇರಳ ಇನ್ನಿಂಗ್ಸ್ ಹಾಗೂ 169 ರನ್ ಜಯ ಸಾಧಿಸಿ, 7 ಪಂದ್ಯಗಳಲ್ಲಿ 28 ಅಂಕ ಕಲೆಹಾಕಿತು. ಒಂದು ವೇಳೆ ಹರ್ಯಾಣ ಕರ್ನಾಟಕ ವಿರುದ್ಧ ಗೆದ್ದರೆ, ಅಥವಾ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದು ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್‌ಗೆ ಕಾಲಿಡಲಿದೆ. ಕರ್ನಾಟಕ ಈ ಪಂದ್ಯವನ್ನು ಗೆದ್ದರೂ 3ನೇ ಸ್ಥಾನಿಯಾಗೇ ಉಳಿಯಲಿದೆ. 

2ನೇ ದಿನ ರಾಜ್ಯ 37 ರನ್: ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 267 ರನ್ ಗಳಿಸಿದ್ದ ಕರ್ನಾಟಕ, 2ನೇ ದಿನವಾದ ಶುಕ್ರವಾರ ಆ ಮೊತ್ತಕ್ಕೆ ಕೇವಲ 37 ರನ್ ಸೇರಿಸಿ ಉಳಿದ 5 ವಿಕೆಟ್ ಕಳೆದುಕೊಂಡಿತು. ಸಾಧಾರಣ ಮೊತ್ತ ದಾಖಲಿಸಿದ ಬಳಿಕ ಕರ್ನಾಟಕ ತನ್ನ ಬೌಲರ್‌ಗಳಿಂದ ಅಸಾಧಾರಣ ಪ್ರದರ್ಶನ ನಿರೀಕ್ಷಿಸಿತು. ಆದರೆ, ನಾಯಕ ಅಂಕಿತ್ ಕುಮಾರ್‌ ಅಮೋಘ ಶತಕ ಹರ್ಯಾಣಕ್ಕೆ ಆಸರೆಯಾಯಿತು. ಆರಂಭಿಕನಾಗಿ ಆಡಿದ ಅಂಕಿತ್, 154 ಎಸೆತದಲ್ಲಿ 118 ರನ್ ಗಳಿಸಿದರು. ಹರ್ಯಾಣ ದಿನದಂತ್ಯಕ್ಕೆ 5 ವಿಕೆಟ್‌ಗೆ 232 ರನ್ ಗಳಿಸಿದ್ದು, ಇನ್ನು 72 ರನ್ ಹಿನ್ನಡೆಯಲ್ಲಿದೆ.

ಸಚಿನ್ ತೆಂಡುಲ್ಕರ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ; ಜೀವಮಾನ ಶ್ರೇಷ್ಠ ಪ್ರಶಸ್ತಿ ಘೋಷಿಸಿದ ಬಿಸಿಸಿಐ!

2015-16ರ ಬಳಿಕ ಮೊದಲ ಸಲ ನಾಕೌಟ್‌ಗಿಲ್ಲ ಕರ್ನಾಟಕ!

ಕರ್ನಾಟಕ ತಂಡ 9 ವರ್ಷಗಳಲ್ಲಿ ಮೊದಲ ಬಾರಿಗೆ ನಾಕೌಟ್ ಹಂತಕ್ಕೇರಲು ವಿಫಲವಾಗಿದೆ. 2013-14, 2014-15ರಲ್ಲಿ ಚಾಂಪಿಯನ್ ಆಗಿದ್ದ ಕರ್ನಾಟಕ 2015-16ರಲ್ಲಿ ನಾಕೌಟ್‌ಗೇರಲು ವಿಫಲವಾಗಿತ್ತು. ಆದರೆ2016-17ರಋತುವಿನಿಂದ 2023-24ರ ವರೆಗೂ ಪ್ರತಿ ಬಾರಿಯೂ ನಾಕೌಟ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಗೆಲ್ಲಲಾಗಲಿಲ್ಲ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!