ಗಂಗೂಲಿ, ಧೋನಿ ಕೊಹ್ಲಿಗೆ ಸಿಕ್ಕ ಪ್ರಶಂಸೆ ದ್ರಾವಿಡ್‌ಗೆ ಸಿಗಲಿಲ್ಲ; ಗಂಭೀರ್!

Published : Jun 23, 2020, 09:24 PM ISTUpdated : Jun 23, 2020, 10:12 PM IST
ಗಂಗೂಲಿ, ಧೋನಿ ಕೊಹ್ಲಿಗೆ ಸಿಕ್ಕ ಪ್ರಶಂಸೆ ದ್ರಾವಿಡ್‌ಗೆ ಸಿಗಲಿಲ್ಲ; ಗಂಭೀರ್!

ಸಾರಾಂಶ

ಭಾರತದ ಯಶಸ್ವಿ ನಾಯಕರ ಮಾತು ಬಂದಾಗ ಕಪಿಲ್, ಗಂಗೂಲಿ, ಧೋನಿ ಇದೀಗ ಕೊಹ್ಲಿ ಅನ್ನೋ ಉತ್ತರ , ಚರ್ಚೆ ಸಾಮಾನ್ಯ. ಆದರೆ ಕನ್ನಡಿಗ ರಾಹುಲ್ ದ್ರಾವಿಡ್ ಹೆಸರು ಪ್ರಸ್ತಾಪವಾಗುದೇ ಇಲ್ಲ. ಈ ಕುರಿತು ಮಾಜಿ ಕ್ರಿಟಿಗ, ದೆಹಲಿ ಸಂಸದ ಗೌತಮ್ ಗಂಭೀರ್ ಬೇಸರ ತೋಡಿಕೊಂಡಿದ್ದಾರೆ.

ದೆಹಲಿ(ಜೂ.23): ಟೀಂ ಇಂಡಿಯಾ ಹಲವು ದಿಗ್ಗಜ ನಾಯಕರನ್ನು ಕಂಡಿದೆ. ಶ್ರೇಷ್ಠ ನಾಯಕರ ಪೈಕಿ ರಾಹುಲ್ ದ್ರಾವಿಡ್ ಕೂಡ ಮುಂಚೂಣಿಯಲ್ಲಿದ್ದಾರೆ. ಆದರೆ ನಾಯಕತ್ವದ ಮಾತು ಬಂದಾಗ ದ್ರಾವಿಡ್ ಹೆಸರು ಪ್ರಸ್ತಾಪವಾಗುವುದೇ ಇಲ್ಲ. ಏಕದಿನದಲ್ಲಿ ಗೆಲುವಿನ ಸರಾಸರಿ 56, ಟೆಸ್ಟ್‌ನಲ್ಲಿ 33 ಶೇಕಡಾ ಗೆಲುವಿನ ಸರಾಸರಿ ಹೊಂದಿರುವ ರಾಹುಲ್ ದ್ರಾವಿಡ್‌ಗೆ ಸಿಗಬೇಕಾದ ಪ್ರಶಂಸೆ, ಪ್ರಚಾರ ಸಿಗುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ, ದೆಹಲಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

ಮಾಡರ್ನ್ ಕ್ರಿಕೆಟ್‌ಗೆ ನನ್ನ ಸ್ಟ್ರೈಕ್ ರೇಟ್ ಸಾಲಲ್ಲ; ರಾಹುಲ್ ದ್ರಾವಿಡ್!

ನಾಯಕತ್ವ ಪ್ರಶಂಸೆಗೆ ರಾಹುಲ್ ದ್ರಾವಿಡ್ ಅರ್ಹರಾಗಿದ್ದಾರೆ. ಆದರೆ ಯಾರೂ ಕೂಡ ದ್ರಾವಿಡ್ ಮಾತೇ ಎತ್ತಲ್ಲ. ದ್ರಾವಿಡ್ ನಾಯಕನಾಗಿ 79 ಏಕದಿನದಿಂದ 42ರಲ್ಲಿ ಗೆಲುವು ಸಾಧಿಸಿದ್ದರೆ, 33 ಪಂದ್ಯ ಸೋತಿದ್ದಾರೆ. ಏಕದಿನದಲ್ಲಿ ಗೆಲವಿನ ಸರಾಸರಿ 56%. ಇನ್ನು 25 ಟೆಸ್ಟ್ ಪಂದ್ಯಗಳಿಂದ 8 ಗೆಲುವು 6 ಸೋಲು ಕಂಡಿದ್ದಾರೆ. ಗೆಲುವಿನ ಸರಾಸರಿ 32 ಶೇಕಡ.

ಬ್ಯಾಟಿಂಗ್, ಕೀಪಿಂಗ್, ನಾಯಕ; ಎಲ್ಲಾ ಜವಾಬ್ದಾರಿ ನಿರ್ವಹಿಸಿದ ಏಕೈಕ ಕ್ರಿಕೆಟಿಗ ದ್ರಾವಿಡ್!.

ತಂಡದ ಹೇಳಿದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಏಕೈಕ ಕ್ರಿಕೆಟಿಗ ರಾಹುಲ್ ದ್ರಾವಿಡ್. 2003ರ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಕೀಪಿಂಗ್, ಆರಂಭಿಕ, ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್, ಕೆಳಕ್ರಮಾಂಕ ಸೇರಿದಂತೆ ಎಲ್ಲಾ ಕ್ರಮಾಂಕದಲ್ಲಿ ಬ್ಯಾಟಿಂಗ್, ಸ್ಲಿಪ್ ಫೀಲ್ಡರ್, ಸ್ಪಿನ್ನರ್ ಹೀಗೆ ಎಲ್ಲಾ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆದರೆ ದ್ರಾವಿಡ್‌ಗೆ ಗೌರವ ಸಿಗಲೇ ಇಲ್ಲ ಎಂದು ಗಂಭೀರ್ ಹೇಳಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

‘ಸೂಪರ್‌ಸ್ಟಾರ್ ತಯಾರಾಗುತ್ತಿದ್ದಾನೆ’; ವೈಭವ್ ಸೂರ್ಯವಂಶಿ ಬಗ್ಗೆ ಕೃಷ್ಣಮಾಚಾರಿ ಶ್ರೀಕಾಂತ್ ಭರ್ಜರಿ ಭವಿಷ್ಯ
ಮಹಿಳಾ ಏಷ್ಯಾಕಪ್‌ ಟಿ20: ಇಂದು ಭಾರತ ಎದುರು ಪಾಕಿಸ್ತಾನಕ್ಕೆ ಡು ಆರ್ ಡೈ ಮ್ಯಾಚ್! ಎಷ್ಟು ಗಂಟೆಗೆ ಆರಂಭ? ನೇರ ಪ್ರಸಾರ ಎಲ್ಲಿ?