
ಪುಣೆ(ಅ.09): ಟೀಂ ಇಂಡಿಯಾ ನಿಗದಿತ ಓವರ್ ಕ್ರಿಕೆಟ್ನಿಂದ ಸ್ಪಿನ್ನರ್ ಆರ್ ಅಶ್ವಿನ್ನ್ನು ದೂರ ಇಡಲಾಗಿದೆ. ರವೀಂದ್ರ ಜಡೇಜಾ ಕೆಲ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಈ ಸ್ಟಾರ್ ಸ್ಪಿನ್ನರ್ಗಳನ್ನು ಟೆಸ್ಟ್ ಮಾದರಿಯಿಂದಲೂ ಹೊರಗಿಡುವ ಪ್ರಯತ್ನಗಳೂ ನಡೆದಿದೆ. ವಿಂಡೀಸ್ ಪ್ರವಾಸದಲ್ಲಿ ಅಶ್ವಿನ್ ಒಂದು ಪಂದ್ಯ ಆಡಿಲ್ಲ. ಆದರೆ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಹಾಗೂ ಜಡೇಜಾ ಮೋಡಿಗೆ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದ ಬಳಿಕ ಕೊಹ್ಲಿ ತಮ್ಮ ವರಸೆ ಬದಲಿಸಿದ್ದಾರೆ.
ಇದನ್ನೂ ಓದಿ: ರ್ಯಾಂಕಿಂಗ್ನಲ್ಲಿ ಕೊಹ್ಲಿ ಹಿಂದಿಕ್ಕಿ ಕ್ಷಮೆ ಕೇಳಿದ ನೆದರ್ಲೆಂಡ್ ಕ್ರಿಕೆಟಿಗ!
ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ನೆಚ್ಚಿಕೊಂಡಿದ್ದ ಕೊಹ್ಲಿಗೆ, ಇದೀಗ ಮತ್ತದೇ ಹಳೇ ಹಾಗೂ ಅನುಭವಿ ಸ್ಪಿನ್ನರ್ಗಳೇ ಬೇಕಾಗಿದ್ದಾರೆ. ಏಕದಿನ, ಟಿ20 ಕ್ರಿಕೆಟ್ನಲ್ಲಿ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಸ್ಥಾನವನ್ನು ಕುಲ್ದೀಪ್ ಹಾಗೂ ಚಹಾಲ್ಗೆ ನೀಡಲಾಯಿತು. ಟೆಸ್ಟ್ ಮಾದರಿಯಲ್ಲೂ ಈ ಪ್ರಯತ್ನ ನಡೆಯಿತು. ಆದರೆ ಫಲ ನೀಡಲಿಲ್ಲ. ಇದೀಗ ಕೊಹ್ಲಿ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾಗೆ ನಮ್ಮ ಮೊದಲ ಆದ್ಯತೆ. ಇವರೇ ನಮ್ಮ ಸ್ಪಿನ್ನರ್ಸ್ ಎಂದಿದ್ದಾರೆ.
ಇದನ್ನೂ ಓದಿ: ಟ್ಯಾಟೂ ಅಭಿಮಾನಿಯ ಮೆಚ್ಚಿ ಅಪ್ಪಿದ ಕೊಹ್ಲಿ!
ಈ ಹಿಂದೆ ಯುವ ಕ್ರಿಕೆಟಿಗರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕೆಲ ಬದಲಾವಣೆ ಅನಿವಾರ್ಯ ಎಂದು ಅಶ್ವಿನ್ ಹಾಗೂ ಜಡೇಜಾಗೆ ಕೊಕ್ ನೀಡಲಾಗಿತ್ತು. ಆದರೆ ಕುಲ್ದೀಪ್, ಚಹಾಲ್ ಪರ್ಫಾಮೆನ್ಸ್ ಕಳೆಗುಂದಿದ ಬೆನ್ನಲ್ಲೇ, ಅಶ್ವಿನ್ ಜಡ್ಡು ಜೋಡಿ ಸಿಕ್ಕ ಅವಕಾಶದಲ್ಲಿ ದಿಟ್ಟ ಹೋರಾಟ ನೀಡಿ ಮಿಂಚಿದ್ದಾರೆ. ಇದೀಗ ಭಾರತದ ಕಂಡೀಷನ್ನಲ್ಲಿ ಅಶ್ವಿನ್ ಹಾಗೂ ಜಡೇಜಾಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ ಎಂದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 8 ವಿಕೆಟ್ ಕಬಳಿಸಿದರೆ, ಜಡೇಜಾಾ 6 ವಿಕೆಟ್ ಕಬಳಿಸಿದ್ದರು. ಬ್ಯಾಟಿಂಗ್ನಲ್ಲೂ ಮಿಂಚಿದ ಜಡೇಜಾ 70 ರನ್ ಸಿಡಿಸಿದ್ದರು. ಇವರಿಬ್ಬರ ಪ್ರದರ್ಶನದಿಂದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.