ಪಾಕ್ ನಾಯಕನಿಗೆ ಗೂಗ್ಲಿ ಪ್ರಶ್ನೆ ; ಪತ್ರಕರ್ತನಿಗೆ ನಿಷೇಧ ಹೇರಿದ PCB!

Published : Oct 15, 2019, 03:36 PM IST
ಪಾಕ್ ನಾಯಕನಿಗೆ ಗೂಗ್ಲಿ ಪ್ರಶ್ನೆ ; ಪತ್ರಕರ್ತನಿಗೆ ನಿಷೇಧ ಹೇರಿದ PCB!

ಸಾರಾಂಶ

ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಅತಿ ಹೆಚ್ಚು ಟ್ರೋಲ್ ಹಾಗೂ ಟೀಕೆ ಎದುರಿಸಿದ್ದಾರೆ. ಇದೀಗ ಸರ್ಫರಾಜ್ ಅಹಮ್ಮದ್‌ಗೆ ಅಸಂಬದ್ದ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿಷೇಧ ಹೇರಿದೆ.

ಕರಾಚಿ(ಅ.15): ವಿಶ್ವಕಪ್ ಟೂರ್ನಿಯಂದ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಟೀಕೆ ಎದುರಿಸುತ್ತಲೇ ಇದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ, ಫಿಟ್ನೆಸ್ ಸೇರಿದಂತೆ ಸರ್ಫರಾಜ್ ಹೆಜ್ಜೆ ಹೆಜ್ಜೆಗೂ ಟ್ರೋಲ್ ಆಗಿದ್ದಾರೆ. ಇದೀಗ ನಾಯಕ ಸರ್ಫರಾಜ್ ಅಹಮ್ಮದ್‌ಗೆ ಅಸಂಬದ್ದ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಪಾಕ್ ಕ್ರಿಕೆಟ್ ಮಂಡಳಿ ನಿಷೇಧ ಹೆರಿದೆ.

ಇದನ್ನೂ ಓದಿ: ಶಮಿ ಹೊಗಳುತ್ತಲೇ ಪಾಕ್ ಬೌಲರ್ಸ್ ಕಾಲೆಳೆದ ಅಖ್ತರ್..!

ವಿಶ್ವಕಪ್ ಟೂರ್ನಿ ಬಳಿಕ, ಪಾಕಿಸ್ತಾನ ವಿರುದ್ದದ ಟಿ20  ಸರಣಿಯಲ್ಲೂ ಸರ್ಫರಾಜ್ ಅಹಮ್ಮದ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇಷ್ಟೇ ಅಲ್ಲ ಟಿ20 ಸರಣಿಯಲ್ಲೂ ಸೋಲು ಕಂಡಿತ್ತು. ಇನ್ನು ರಾಷ್ಟ್ರೀಯ ಕಪ್ ಟಿ20 ಸರಣಿಯಲ್ಲೂ ಸರ್ಫರಾಜ್ ಅಹಮ್ಮದ್ ಉತ್ತಮ ಬ್ಯಾಟಿಂಗ್ ಪ್ರದದರ್ಸನ ನೀಡಿಲ್ಲ. ಪ್ರತ್ರಕರ್ತ, ನೀವು ಈ ರೀತಿ ಪ್ರದರ್ಶನ ನೀಡಿದರೆ ಮುಂದೆ ಯಾರು ಪಂದ್ಯವನ್ನು ವೀಕ್ಷಿಲಲು ಬರುತ್ತಾರೆ ಎಂದು ಪ್ರಶ್ನಿಸಿದ್ದಾನೆ.

 

ಇದನ್ನೂ ಓದಿ: ಪಾಕ್‌ಗೆ ಮುಖಭಂಗ; ಟಿ20 ಸರಣಿ ಲಂಕಾ ಕೈವಶ

ಕಳಪೆ ಪ್ರದರ್ಶನ ನೀಡುತ್ತಿದ್ದರೆ, ಜನರು ಟಿಕೆಟ್ ದುಡ್ದು ಕೊಟ್ಟು ಪಂದ್ಯ ನೋಡಲು ಯಾರು ಬರುತ್ತಾರೆ ಎಂದು ಪ್ರಶ್ನಿಸಿದ್ದಾನೆ. ಅಸಂಬದ್ದ ಪ್ರಶ್ನೆಗೆ ನಾಯಕ ಸರ್ಫರಾಜ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪತ್ರಕರ್ತನಿಗೆ ನಿಷೇಧ ಹೆರಿದೆ. ಫೈಸ್ಲಾಬಾದ್ ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ನಿರ್ಬಂಧ ಹೇರಿದೆ. ಇಷ್ಟೇ ಅಲ್ಲ ಪತ್ರಕರ್ತನ ಎಕ್ರಡಿಟೇಶನ್ ಕಾರ್ಡ್ ರದ್ದು ಮಾಡಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!