
ಕರಾಚಿ (ಪಾಕಿಸ್ತಾನ)ಅ.11): ಶ್ರೀಲಂಕಾ ವಿರುದ್ಧದ ಹೀನಾಯ ಸೋಲಿಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ತಂಡದ ಪ್ರಧಾನ ಕೋಚ್ ಮಿಸ್ಬಾ ಉಲ್ ಹಕ್, ‘ಈ ಸೋಲು ನನ್ನ ಕಣ್ಣು ತೆರೆಸಿದೆ. ದೇಶದ ಕ್ರಿಕೆಟ್ ವ್ಯವಸ್ಥೆಯಲ್ಲೇನೋ ಗಂಭೀರ ಸಮಸ್ಯೆಯಿದೆ’ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಪಾಕ್ಗೆ ಮುಖಭಂಗ; ಟಿ20 ಸರಣಿ ಲಂಕಾ ಕೈವಶ
‘ಈ ಸರಣಿ ಸೋಲು ಪಾಕ್ ಕ್ರಿಕೆಟ್ ವ್ಯವಸ್ಥೆ ಕಣ್ಣು ತೆರೆಸಿದೆ. ತನ್ನ ಪ್ರಮುಖ ಆಟಗಾರರನ್ನೇ ಹೊಂದಿರದ ತಂಡವೊಂದರ ಎದುರು ನಾವು ಸೋತಿದ್ದೇವೆ. ಹೀಗಿರುವಾಗ ನಾವು ನಂ.1 ಎನ್ನುವುದು ಹೇಗೆ ಸಾಧ್ಯ? ನಾವು ಎಲ್ಲಾ ಮೂರು ವಿಭಾಗಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದೇವೆ. ಶ್ರೀಲಂಕಾ ಎಲ್ಲಾ ವಿಭಾಗಗಳಲ್ಲಿ ಮೇಲುಗೈ ಸಾಧಿಸಿತು. ಇದು ಏಕಪಕ್ಷೀಯ ಸರಣಿಯಾಗಿತ್ತು’ ಎಂದು ಮಿಸ್ಬಾ ಹೇಳಿದರು.
ಇದನ್ನೂ ಓದಿ: ಮೈದಾನದಲ್ಲೇ ಪ್ರಾಣ ಬಿಟ್ಟ ಅಂಪೈರ್; ಕಂಬನಿ ಮಿಡಿದ ಕ್ರಿಕೆಟ್ ಜಗತ್ತು
ಶ್ರೀಲಂಕಾ ವಿರುದ್ದದ 3 ಏಕದಿನ ಪಂದ್ಯವನ್ನು 2-0 ಅಂತರದಲ್ಲಿ ಗೆದ್ದುಕೊಂಡ ಪಾಕಿಸ್ತಾನ, ಟಿ20 ಸರಣಿಯಲ್ಲಿ ಮುಗ್ಗರಿಸಿತು. 3-0 ಅಂತರದಲ್ಲಿ ಟಿ20 ಸರಣಿ ಗೆದ್ದ ಶ್ರೀಲಂಕಾ ಏಕದಿನ ಸೋಲಿಗೆ ತಿರುಗೇಟು ನೀಡಿತು. ಆದರೆ ತವರಿನಲ್ಲಿ ಚುಟುಕು ಕ್ರಿಕೆಟ್ ಸೋಲು ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾಯಕ ಸರ್ಫರಾಜ್ ವಿರುದ್ದ ಆಕ್ರೋಷಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಕೋಚ್ ಮಿಸ್ಬಾ ಹೇಳಿಕೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿರುವ ಸಮಸ್ಯೆಯನ್ನು ಜಗಜ್ಜಾಹೀರು ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.