ಐಪಿಎಲ್‌ ಪ್ಲೇ-ಆಫ್‌ ಟಿಕೆ​ಟ್‌​ಗಾಗಿ ನೂಕು​ನು​ಗ್ಗ​ಲು!

Published : May 27, 2023, 08:33 AM ISTUpdated : May 27, 2023, 08:34 AM IST
ಐಪಿಎಲ್‌ ಪ್ಲೇ-ಆಫ್‌ ಟಿಕೆ​ಟ್‌​ಗಾಗಿ ನೂಕು​ನು​ಗ್ಗ​ಲು!

ಸಾರಾಂಶ

ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಿದರೂ ಕ್ಯೂ ನಿಲ್ಲುವುದು ತಪ್ಪಲಿಲ್ಲ ಅಹಮದಾಬಾದ್‌ನ ಮೋದಿ ಕ್ರೀಡಾಂಗಣದ ಬಳಿ ಸಾವಿರಾರು ಮಂದಿ ಜಮಾವಣೆ ಬಿಸಿಸಿಐ, ಗುಜರಾತ್‌ ಕ್ರಿಕೆಟ್‌ ಸಂಸ್ಥೆಯಿಂದ ಅಸ​ಮ​ರ್ಪಕ ನಿರ್ವ​ಹಣೆ ನೂಕು ನುಗ್ಗಲು, ಕಾಲ್ತುಳಿತದ ಪರಿಸ್ಥಿತಿ ಸುಡು ಬಿಸಿ​ಲಿಗೆ ಕುಸಿದು ಬಿದ್ದ ಹಲ​ವರು  

ಅಹ​ಮ​ದಾ​ಬಾ​ದ್‌(ಮೇ.27): ಐಪಿ​ಎಲ್‌ನ ಗುಜ​ರಾತ್‌ ಹಾಗೂ ಮುಂಬೈ ನಡು​ವಿನ ಶುಕ್ರ​ವಾ​ರದ ಪ್ಲೇ-ಆಫ್‌ ಪಂದ್ಯ, ಭಾನುವಾರ (ಮೇ 28) ರಂದು ನಡೆಯಲಿರುವ ಫೈನಲ್‌ ಪಂದ್ಯದ ಟಿಕೆ​ಟ್‌​ಗಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಬಳಿ ಗುರು​ವಾರ ಮತ್ತು ಶುಕ್ರ​ವಾರ ಸಾವಿ​ರಾರು ಜನರು ಪರ​ದಾಡಿದ್ದು, ಕಾಲ್ತುಳಿತದ ಪರಿಸ್ಥಿತಿ ಉಂಟಾಗಿ ಕೆಲ​ಕಾಲ ಆತಂಕದ ವಾತಾ​ವ​ರ​ಣ ಸೃಷ್ಟಿ​ಯಾ​ಗಿ​ತ್ತು. ಈ ಘಟನೆಯು ಬಿಸಿಸಿಐ ಹಾಗೂ ಗುಜರಾತ್‌ ಕ್ರಿಕೆಟ್‌ ಸಂಸ್ಥೆ(ಜಿಸಿಎ)ಯನ್ನು ಮುಜುಗರಕ್ಕೀಡಾಗಿಸಿದೆ.

ಆಗಿದ್ದೇನು?: ಪ್ಲೇ-ಆಫ್‌ ಪಂದ್ಯಗಳ ಟಿಕೆ​ಟ್‌​ಗ​ಳನ್ನು ಆನ್‌​ಲೈ​ನ್‌​ನಲ್ಲಿ ಮಾತ್ರ ಮಾರಾಟ ಮಾಡಲು ಬಿಸಿಸಿಐ ನಿರ್ಧರಿಸಿತ್ತು. ಚೆನ್ನೈನಲ್ಲಿ ನಡೆದ ಕ್ವಾಲಿಫೈಯರ್‌-1 ಹಾಗೂ ಎಲಿಮಿನೇಟರ್‌ ಪಂದ್ಯಗಳ ಟಿಕೆಟ್‌ಗಳನ್ನು ಖರೀದಿಸಿದ್ದ ಅಭಿಮಾನಿಗಳು, ತಮ್ಮ ಮೊಬೈಲ್‌ನಲ್ಲಿ ಕ್ಯೂಆರ್‌ ಕೋಡ್‌ ತೋರಿಸಿ ಚೆಪಾಕ್‌ ಕ್ರೀಡಾಂಗಣಕ್ಕೆ ಪ್ರವೇಶ ಪಡೆದಿದ್ದರು. ಆದರೆ ಅಹಮದಾಬಾದ್‌ನ ಪಂದ್ಯಗಳಿಗೆ ಕಾಯ್ದಿರಿಸಿದ ಟಿಕೆಟ್‌ ಪಡೆಯಲು ಪ್ರೇಕ್ಷ​ಕರು ಕ್ರೀಡಾಂಗ​ಣದ ಕೌಂಟ​ರ್‌ಗೇ ಬರ​ಬೇ​ಕಾ​ಗಿತ್ತು.

ಹೀಗಾಗಿ ಸಾವಿ​ರಾರು ಮಂದಿ ಏಕ​ಕಾ​ಲ​ದಲ್ಲಿ ಕ್ರೀಡಾಂಗ​ಣದ ಗೇಟ್‌​ ಬಳಿ ಜಮಾ​ಯಿ​ಸಿದ ಕಾರಣ ನೂಕು​ನು​ಗ್ಗಲು, ತಳ್ಳಾ​ಟ ಉಂಟಾ​ಯಿತು. ಕ್ಯೂನಲ್ಲಿ 4-5 ಗಂಟೆಗಳ ಕಾಲ ನಿಂತಿದ್ದ ವೇಳೆ ನೂರಾರು ಮಂದಿ ಸುಡು ಬಿಸಿ​ಲಿ​ನಲ್ಲಿ ಕುಸಿದು ಬಿದ್ದಿ​ದ್ದಾರೆ ಎನ್ನಲಾ​ಗಿದ್ದು, ಜನ​ರನ್ನು ನಿಯಂತ್ರಿ​ಸಲು ಪೊಲೀ​ಸರು ಲಾಠಿ ಚಾಜ್‌ರ್‍ ಮಾಡಿ​ದ್ದಾರೆ ಎಂದು ಕೆಲ ಅಭಿಮಾನಿಗಳು ದೂರಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ದಾಖ​ಲೆಯ ಆಸನ ಸಾಮರ್ಥ್ಯ ಹೊಂದಿ​ದ್ದರೂ ಟಿಕೆಟ್‌ ಮಾರಾಟದಲ್ಲಾದ ಎಡ​ವ​ಟ್ಟು​ಗ​ಳಿಂದಾಗಿ ಬಿಸಿ​ಸಿಐ, ಗುಜರಾತ್‌ ಕ್ರಿಕೆಟ್‌ ಸಂಸ್ಥೆ ವಿರುದ್ಧ ಅಭಿ​ಮಾ​ನಿ​ಗಳು ಆಕ್ರೋ​ಶಿ​ತ​ರಾ​ಗಿದ್ದು, ಸಾಮಾಜಿಕ ತಾಣಗಳಲ್ಲಿ ಹಿಡಿಶಾಪ ಹಾಕಿ​ದ್ದಾ​ರೆ.

IPL 2023: ಫೈನಲ್‌ಗೆ ಗುಜರಾತ್‌ ಟೈಟಾನ್ಸ್‌, ಮನೆಗೆ ನಡೆದ ಐದು ಬಾರಿಯ ಚಾಂಪಿಯನ್ಸ್‌!

ಐಪಿಎಲ್‌ ಟಿಕೆಟ್‌ಗಳ ಮಾರಾಟ ಹೇಗಾಗುತ್ತೆ?

ಲೀಗ್‌ ಹಂತದ ಪಂದ್ಯಗಳ ಟಿಕೆಟ್‌ಗಳ ಮಾರಾಟ ನಿರ್ವಹಣೆ ಹೊಣೆ ಆಯಾ ಫ್ರಾಂಚೈಸಿಗಳ ಮೇಲಿರಲಿದೆ. ಉದಾಹರಣೆಗೆ ಆರ್‌ಸಿಬಿ ತಂಡ (RCB Team) ತವರಿನ ಪಂದ್ಯಗಳ ಟಿಕೆಟ್‌ ಮಾರಾಟವನ್ನು ತಂಡದ ಆಡಳಿತ ನೋಡಿಕೊಳ್ಳಲಿದೆ. ಆದರೆ ಪ್ಲೇ-ಆಫ್‌ ಪಂದ್ಯಗಳ ಟಿಕೆಟ್‌ ನಿರ್ವಹಣೆಯನ್ನು ಬಿಸಿಸಿಐ ಮಾಡಲಿದ್ದು, ಆತಿಥ್ಯ ವಹಿಸುವ ಕ್ರಿಕೆಟ್‌ ಸಂಸ್ಥೆಯು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

ವಿಶ್ವ​ಕ​ಪ್‌​ ಪಂದ್ಯ​ಕ್ಕೂ ಹೀಗಾದ್ರೆ ಏನು​ ಗ​ತಿ?

ಈ ಕ್ರೀಡಾಂಗ​ಣ​ದಲ್ಲೇ ಏಕ​ದಿನ ವಿಶ್ವ​ಕಪ್‌ನ (ODI World Cup) ಹಲವು ಪಂದ್ಯ​ಗಳು ನಡೆ​ಯ​ಲಿದ್ದು, ಭಾರತ-ಪಾಕಿಸ್ತಾನ (India vs Pakistan) ಪಂದ್ಯಕ್ಕೂ ಆತಿಥ್ಯ ವಹಿ​ಸುವ ಸಾಧ್ಯ​ತೆ​ಯಿದೆ. ಆದರೆ ಐಪಿ​ಎಲ್‌ ಪಂದ್ಯ​ದ ಟಿಕೆ​ಟ್‌ನ ವಿಚಾ​ರ​ದಲ್ಲೇ ಹೀಗಾ​ದರೆ ವಿಶ್ವ​ಕಪ್‌ನ ಹೈವೋ​ಲ್ಟೇಜ್‌ ಪಂದ್ಯ​ಗಳ ವೇಳೆ ಗುಜರಾತ್‌ ಕ್ರಿಕೆಟ್‌ ಸಂಸ್ಥೆಯಿಂದ ಪ್ರೇಕ್ಷಕರ ನಿರ್ವಹಣೆ ಸಾಧ್ಯವೇ ಎನ್ನುವ ಬಗ್ಗೆ ಪ್ರಶ್ನೆ​ ಉದ್ಭ​ವಿ​ಸಿದೆ. ಟಿಕೆ​ಟ್‌​ಗಾಗಿ ಬಿಸಿ​ಸಿಐ ಬೇರೆ ವ್ಯವಸ್ಥೆ ಮಾಡ​ಲಿ​ದೆಯೇ ಅಥ​ವಾ ಇ-ಟಿಕೆಟ್‌ ಮೂಲ​ಕವೇ ಕ್ರೀಡಾಂಗ​ಣ ಪ್ರವೇ​ಶಕ್ಕೆ ಅವ​ಕಾಶ ನೀಡಲಿ​ದೆಯೇ ಎಂದು ಸಾಮಾಜಿಕ ತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಐಪಿ​ಎಲ್‌ ಫೈನ​ಲ್‌ಗೆ ಮುನ್ನ ಅದ್ಧೂರಿ ಸಮಾ​ರಂಭ

ಅಹ​ಮ​ದಾ​ಬಾ​ದ್‌: ಅಹ​ಮ​ದಾ​ಬಾ​ದ್‌ನ ನರೇಂದ್ರ ಮೋದಿ ಕ್ರೀಡಾಂಗ​ಣ​ದಲ್ಲಿ ಮೇ 28ರಂದು ನಡೆ​ಯ​ಲಿ​ರುವ 16ನೇ ಆವೃತ್ತಿ ಐಪಿ​ಎ​ಲ್‌ ಫೈನ​ಲ್‌ಗೂ ಮುನ್ನ ಅದ್ಧೂರಿ ಸಮಾ​ರೋಪ ಸಮಾ​ರಂಭ ಆಯೋ​ಜಿ​ಸಲು ಬಿಸಿ​ಸಿಐ ನಿರ್ಧ​ರಿ​ಸಿದ್ದು, ಖ್ಯಾತ ರ‍್ಯಾಪರ್‌ಗಳು, ಸಂಗೀತ ಕಲಾ​ವಿ​ದ​ರು ಪಾಲ್ಗೊ​ಳ್ಳ​ಲಿ​ದ್ದಾರೆ. ಸಂಜೆ 6 ಗಂಟೆಗೆ ಸಮಾ​ರಂಭ ಶುರು​ವಾ​ಗ​ಲಿದ್ದು, ರಾರ‍ಯಪರ್‌ ಕಿಂಗ್‌ ಹಾಗೂ ಡಿಜೆ ನ್ಯೂಕ್ಲೆಯಾ ಪಾಲ್ಗೊ​ಳ್ಳ​ಲಿ​ದ್ದಾರೆ. ಇನ್ನು ರ‍್ಯಾಪರ್‌ ಡಿವೈನ್‌ ಸೇರಿ​ದಂತೆ ಹಲ​ವರು ಮೊದಲ ಇನ್ನಿಂಗ್‌್ಸ ಮುಗಿದು 2ನೇ ಇನ್ನಿಂಗ್‌್ಸ ಆರಂಭಗೊಳ್ಳುವ ಮೊದಲೂ ಪ್ರದ​ರ್ಶನ ನೀಡ​ಲಿ​ದ್ದಾರೆ. ಖ್ಯಾತ ಬಾಲಿವುಡ್‌ ಗಾಯಕಿ ಜೋನಿತಾ ಗಾಂಧಿ ಕೂಡಾ ಸಮಾ​ರಂಭ​ದಲ್ಲಿ ಪಾಲ್ಗೊ​ಳ್ಳ​ಲಿ​ದ್ದಾರೆ ಎಂದು ಐಪಿ​ಎಲ್‌ ಪ್ರಕ​ಟ​ಣೆ ತಿಳಿ​ಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐರ್ಲೆಂಡ್ ಎದುರು ಭಾರತ ಟಿ20 ಸರಣಿ ವೈಟ್‌ವಾಷ್ ಮುಖಭಂಗ; ಸೂರ್ಯಕುಮಾರ್ ಯಾದವ್ ಭಾವನಾತ್ಮಕ ಪೋಸ್ಟ್ ವೈರಲ್
ಐರ್ಲೆಂಡ್ ಪ್ರವಾಸದಲ್ಲಿ Vaibhav Sooryavanshiಗೆ ಸಿಗ್ತಿಲ್ಲ ಅವಕಾಶ, ಅಚ್ಚರಿ ಕಾರಣ ಹೇಳಿದ ಸಹಾಯಕ ಕೋಚ್