ರಿಂಕು ಸಿಂಗ್, ಶ್ರೇಯಸ್ ಅಯ್ಯರ್ ಸೇರಿ 13 ಕ್ರಿಕೆಟಿಗರ ಉಳಿಸಿ, ಪ್ರಮುಖರ ಕೈಬಿಟ್ಟ ಕೆಕೆಆರ್!

Published : Nov 26, 2023, 07:33 PM IST
ರಿಂಕು ಸಿಂಗ್, ಶ್ರೇಯಸ್ ಅಯ್ಯರ್ ಸೇರಿ 13 ಕ್ರಿಕೆಟಿಗರ ಉಳಿಸಿ, ಪ್ರಮುಖರ ಕೈಬಿಟ್ಟ ಕೆಕೆಆರ್!

ಸಾರಾಂಶ

ಐಪಿಎಲ್ 2024ರ ಹರಾಜಿಗೂ ಮೊದಲು ಕೋಲ್ಕಾತಾ ನೈಟ್ ರೈಡರ್ಸ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈಗಾಗಲೇ ಗೌತಮ್ ಗಂಭೀರ್ ತಂಡಕ್ಕೆ ವಾಪಸ್ ಆಗಿದ್ದಾರೆ. ಇದೀಗ 12 ಪ್ರಮುಖ ಕ್ರಿಕೆಟಿಗರನ್ನು ತಂಡದ ರಿಲೀಸ್ ಮಾಡಿರುವ ಕೆಕೆಆರ್ 13 ಕ್ರಿಕೆಟಿಗರ ಉಳಿಸಿಕೊಂಡಿದೆ. 

ಕೋಲ್ಕತಾ(ನ.26) ಐಪಿಎಲ್ ಟೂರ್ನಿ ಸಿದ್ಧತೆ ಆರಂಭಗೊಂಡಿದೆ. ಐಪಿಎಲ್ ಹರಾಜಿಗೆ ಫ್ರಾಂಚೈಸಿಗಳು ಸಜ್ಜಾಗುತ್ತಿದೆ. ಇದಕ್ಕೂ ಮುನ್ನ ತಂಡದಲ್ಲಿ ಆಟಗಾರರನ್ನು ಉಳಿಸಲು, ಕೈಬಿಡಲು ಇಂದು(ನ.26) ಕೊನೆಯ ದಿನವಾಗಿದೆ. ಹೀಗಾಗಿ ಎಲ್ಲಾ ತಂಡಗಳು ತನ್ನ ನಿರ್ಧಾರ ಪ್ರಕಟಿಸುತ್ತಿದೆ. ಈ ಬಾರಿಯ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಹಲವು ಬದಲಾವಣೆ ಮಾಡಿದೆ. ಕೆಕೆಆರ್‌ಗೆ ಟ್ರೋಫಿ ತಂದುಕೊಟ್ಟ ಗೌತಮ್ ಗಂಭೀರ್ ಇದೀಗ ಮೆಂಟರ್ ಆಗಿ ತಂಡಕ್ಕೆ ಮರಳಿದ್ದಾರೆ. ಇತ್ತ 13 ಕ್ರಿಕೆಟಿಗರನ್ನು ತಂಡದಲ್ಲಿ ಉಳಿಸಿಕೊಂಡಿದೆ.

ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಜೇಸನ್ ರಾಯ್ ಸೇರಿದಂತೆ ಪ್ರಮುಖ ಕ್ರಿಕೆಟಿಗರನ್ನು ಕೋಲ್ಕತಾ ನೈಟ್ ರೈಡರ್ಸ್ ಉಳಿಸಿಕೊಂಡಿದೆ. ಆದರೆ ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಶಾರ್ದೂಲ್ ಠಾಕೂರ್,  ಮನ್ದೀಪ್ ಸಿಂಗ್, ಟಿಮ್ ಸೌಥಿ ಸೇರಿದಂತೆ ಪ್ರಮುಖ ಕ್ರಿಕೆಟಿಗರನ್ನು ತಂಡದಿಂದ ಕೈಬಿಟ್ಟಿದೆ.

IPL RETENTION: ಹರ್ಷಲ್, ಹೇಜಲ್‌ವುಡ್ ಹಸರಂಗಗೆ ಗೇಟ್‌ಪಾಸ್‌..! ಹರಾಜಿಗೆ 40 ಕೋಟಿ ಉಳಿಸಿಕೊಂಡ RCB

ಕೆಕೆಆರ್ ತಂಡ ರಿಲೀಸ್ ಮಾಡಿದ ಆಟಗಾರರ ಪಟ್ಟಿ
ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಆರ್ಯ ದೇಸಾಯಿ, ಡೇವಿಡ್ ವೀಸ್, ಶಾರ್ದೂಲ್ ಠಾಕೂರ್, ನಾರಾಯಣ್ ಜಗದೀಶನ್, ಮನ್ದೀಪ್ ಸಂಗ್, ಕುಲ್ವಂತ್ ಕೇಜ್ರೋಲಿಯಾ, ಲ್ಯೂಕಿ ಫರ್ಗ್ಯೂಸನ್, ಉಮೇಶ್ ಯಾದವ್, ಟಿಮ್ ಸೌಥಿ, ಜಾನ್ಸನ್ ಚಾರ್ಲ್ಸ್

ಕೆಕೆಆರ್ ತಂಡ ಉಳಿಸಿಕೊಂ ಆಟಗಾರರ ಪಟ್ಟಿ
ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಶ್ರೇಯಸ್ ಅಯ್ಯರ್, ಜೇಸನ್ ರಾಯ್, ಸುನಿಲ್ ನರೈನ್, ಸೂಯಾಂಶ್ ಶರ್ಮಾ, ಅಂಕುಲ್ ರಾಯ್, ಆ್ಯಂಡ್ರೆ ರಸೆಲ್,  ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಆರೋರಾ, ವರುಣ್ ಚಕ್ರವರ್ತಿ

ಜೋ ರೂಟ್ ಸೇರಿ 9 ಮಂದಿ ತಂಡದಿಂದ ಕೈಬಿಟ್ಟ ರಾಜಸ್ಥಾನ ರಾಯಲ್ಸ್, ಏಕೈಕ ಕನ್ನಡಿಗ ರೀಟೈನ್!

ಆಟಗಾರರ ರಿಲೀಸ್‌ನಿಂದ ಕೆಕೆಆರ್ ಬಳಿಕ 10.75 ಕೋಟಿ ರೂಪಾಯಿ ಬಾಕಿ ಇದೆ. ಇದರ ಜೊತೆಗೆ 5 ಕೋಟಿ ಹೆಚ್ಚುವರಿ ಹಣದೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿದೆ.  ಕೋರ್ ತಂಡವನ್ನು ಕೆಕೆಆರ್ ಉಳಿಸಿಕೊಂಡಿದೆ. ಹೀಗಾಗಿ ಹರಾಜಿನಲ್ಲಿ ಯುವ ಪ್ರತಿಭೆಗಳಿಗೆ ಕೆಕೆಆರ್ ಮಣೆ ಹಾಕಲಿದೆ.

10 ಐಪಿಎಲ್ ತಂಡಗಳು ಇದೀಗ ಆಟಗಾರರ ರಿಟೈನ್ ಹಾಗೂ ರಿಲೀಸ್ ಲಿಸ್ಟ್ ಘೋಷಣೆ ಮಾಡುತ್ತಿದೆ. ಇಂದು ಕೊನೆಯ ದಿನವಾಗಿರುವ ಕಾರಣ ತಂಡಗಳು ಮಹತ್ವದ ನಿರ್ಧಾರ ಘೋಷಿಸತ್ತಿದೆ. ಆರ್‌ಸಿಬಿ ಕೂಡ ಪ್ರಮುಖ ಕ್ರಿಕೆಟಿಗರ ಉಳಿಸಿಕೊಂಡಿದೆ. ಕೊಹ್ಲಿ ಸತತ 17ನೇ ವರ್ಷ ಆರ್‌ಸಿಬಿ ಪರ ಆಡಲು ಸಜ್ಜಾಗಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?