IPL 2023: ಕೊನೇ ಓವರ್‌ನಲ್ಲಿ 16 ರನ್‌ ರಕ್ಷಿಸಿಕೊಂಡ ಆರ್ಶ್‌ದೀಪ್‌, ಪಂಜಾಜ್‌ಗೆ ವಿಜಯದೀಪ!

Published : Apr 22, 2023, 11:31 PM ISTUpdated : Apr 22, 2023, 11:33 PM IST
IPL 2023: ಕೊನೇ ಓವರ್‌ನಲ್ಲಿ 16 ರನ್‌ ರಕ್ಷಿಸಿಕೊಂಡ ಆರ್ಶ್‌ದೀಪ್‌, ಪಂಜಾಜ್‌ಗೆ ವಿಜಯದೀಪ!

ಸಾರಾಂಶ

ಕೊನೇ ಓವರ್‌ನಲ್ಲಿ ಮುಂಬೈ ತಂಡದ ಗೆಲುವಿಗೆ 16 ರನ್‌ ಬೇಕಿದ್ದವು. ಕೈಯಲ್ಲಿ ಇನ್ನೂ 6 ವಿಕೆಟ್‌ಗಳಿದ್ದವು. ಇಂಥ ಸಮಯದಲ್ಲಿ ಮನಮೋಹಕ ದಾಳಿ ನಡೆಸಿದ ಆರ್ಶ್‌ದೀಪ್‌ ಸಿಂಗ್‌ ಪಂಜಾಬ್‌ ಕಿಂಗ್ಸ್‌ ತಂಡದ ಭರ್ಜರಿ ಗೆಲುವಿಗೆ ಕಾರಣರಾಗಿದ್ದಾರೆ.

ಮುಂಬೈ (ಏ.22): ಕೊನೇ ಓವರ್‌ನಲ್ಲಿ ಎರಡು ಬಾರಿ ಮಧ್ಯದ ಸ್ಟಂಪ್‌ಅನ್ನೇ ಮುರಿದುಹಾಕಿದಂತ ಎಸೆತಗಳನ್ನು ಎಸೆಯುವ ಮೂಲಕ ಮಾರಕ ದಾಳಿ ಸಂಘಟಿಸಿದ ಆರ್ಶ್‌ದೀಪ್‌ ಸಿಂಗ್‌, 16 ರನ್‌ಗಳನ್ನು ರಕ್ಷಣೆ ಮಾಡಿಕೊಳ್ಳುವ ಮೂಲಕ ಮುಂಬೈ ಇಂಡಿಯನ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ ತಂಡದ 13 ರನ್‌ಗಳ ಸ್ಮರಣೀಯ ಗೆಲುವಿಗೆ ಕಾರಣರಾದರು. ಕೊನೇ ಓವರ್‌ನಲ್ಲಿ ಮುಂಬೈ ತಂಡದ ಗೆಲುವಿಗೆ 16 ರನ್‌ ಬೇಕಿತ್ತಾದರೂ, ಕೇವಲ 2 ರನ್‌ ನೀಡಿ ಎರಡು ವಿಕೆಟ್‌ ಉರುಳಿಸುವ ಮೂಲಕ ಆರ್ಶ್‌ದೀಪ್‌ ಜಯಕ್ಕೆ ಕಾರಣರಾದರು. ಅದರಲ್ಲ ಆರ್ಶ್‌ದೀಪ್‌ ಕೊನೇ ಓವರ್‌ನಲ್ಲಿ ತಿಲಕ್‌ ವರ್ಮ ಹಾಗೂ ನೇಹಲಾ ವಧೀರಾರನ್ನು ಬೌಲ್ಡ್‌ ಮಾಡಿದಾಗ ಸತತ ಎರಡು ಎಸೆತಗಳಲ್ಲಿ ಮಧ್ಯದ ಸ್ಟಂಪ್‌ ಅಕ್ಷರಶಃ ಎರಡು ತುಂಡಾದವು. ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 29 ರನ್‌ಗೆ 4 ವಿಕೆಟ್‌ ಉರುಳಿಸಿದ ಆರ್ಶ್‌ದೀಪ್‌ ಲೀಗ್‌ನಲ್ಲಿ ತಂಡದ ನಾಲ್ಕನೇ ಗೆಲುವಿಗೆ ನೆರವಾದರು. ಮುಂಬೈ ಇಂಡಿಯನ್ಸ್‌ ತಂಡದ ಗೆಲುವಿಗೆ ಕ್ಯಾಮರೂನ್‌ ಗ್ರೀನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಸ್ಫೋಟಕ ಆಟವಾಡುವ ಮೂಲಕ ಶ್ರಮಿಸಿದರಾದರೂ, ಪಂದ್ಯದ ಅಂತಿಮ ಹಂತದಲ್ಲಿ ಪಂಜಾಬ್‌ ಬಿಗಿ ಬೌಲಿಂಗ್‌ ದಾಳಿ ನಡೆಸಿದ್ದರಿಂದ ಆಕರ್ಷಕ ಗೆಲುವು ಕಂಡಿತು.

IPL 2023: ಒಂದೇ ಓವರ್‌ನಲ್ಲಿ 31 ರನ್‌ ಚಚ್ಚಿಸಿಕೊಂಡ ಅರ್ಜುನ್‌ ತೆಂಡುಲ್ಕರ್‌, ಪಂಜಾಬ್‌ ಬಿಗ್‌ ಸ್ಕೋರ್‌!

ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡ ನಾಯಕ ಸ್ಯಾಮ್‌ ಕರ್ರನ್‌ ಅರ್ಧಶತಕ ಸೇರಿದಂತೆ ಕೆಳಕ್ರಮಾಂಕದ ಆಟಗಾರರ ಸಂಘಟಿತ ಬ್ಯಾಟಿಂಗ್‌ನಿಂದ 8 ವಿಕೆಟ್‌ಗೆ 214 ರನ್‌ ಪೇರಿಸಿತ್ತು. ಈ ಮೊತ್ತ ಬೆನ್ನಟ್ಟಿದ ಮುಂಬೈ ತಂಡ ಇನ್ನೇನು ಗೆಲುವಿನ ಹಾದಿಯಲ್ಲಿದೆ ಎನ್ನುವಾಗ ಬೌಲಿಂಗ್‌ ಬಿಗಿ ಮಾಡಿದ ಪಂಜಾಬ್‌ ತಂಡ 6 ವಿಕೆಟ್‌ಗೆ 201 ರನ್‌ಗಳಿಗೆ ಐಪಿಎಲ್‌ನ ಯಶಸ್ವಿ ತಂಡವನ್ನು ಕಟ್ಟಿಹಾಕುವ ಮೂಲಕ ಗೆಲುವು ಕಂಡಿತು.

'ಮೂರ್ಖತನದ ಆಟ..' ಕೆಎಲ್‌ ರಾಹುಲ್‌ ಬ್ಯಾಟಿಂಗ್‌ಗೆ ವೆಂಕಟೇಶ್‌ ಪ್ರಸಾದ್‌ ಕಿಡಿ!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌