ಲಖನೌದಲ್ಲಿ ಆರ್‌ಸಿಬಿ ಏರಿಸಿದ ಬಿಸಿಗೆ ತಂಪೆರೆದ ಮಳೆರಾಯ, LSG vs CSK ಟಾಸ್ ವಿಳಂಬ!

Published : May 03, 2023, 03:14 PM ISTUpdated : May 03, 2023, 03:23 PM IST
ಲಖನೌದಲ್ಲಿ ಆರ್‌ಸಿಬಿ ಏರಿಸಿದ ಬಿಸಿಗೆ ತಂಪೆರೆದ ಮಳೆರಾಯ, LSG vs CSK ಟಾಸ್ ವಿಳಂಬ!

ಸಾರಾಂಶ

ಐಪಿಎಲ್ 2023 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಲಖನೌ ಮೈದಾನದಲ್ಲಿ ನೀಡಿದ ಪ್ರದರ್ಶನ ಹಾಗೂ ಸ್ಲೆಡ್ಜಿಂಗ್ ಬಿಸಿ ಇನ್ನೂ ಆರಿಲ್ಲ. ಮಳೆರಾಯ ಪದೇ ಪದೇ ತಂಪರೆಯುತ್ತಿದ್ದರೂ ಲಖನೌ ಹೀಟ್ ಕಡಿಮೆಯಾಗಿಲ್ಲ. ಇದೀಗ ಲಖನೌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಟಾಸ್ ವಿಳಂಬವಾಗಿದೆ.

ಲಖನೌ(ಮೇ.03): ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ಬಿಸಿ ಇನ್ನೂ ಆರಿಲ್ಲ. ಈ ಬಿಸಿ ಆರಿಸಲು ಲಖನೌದಲ್ಲಿ ಮಳೆರಾಯ ತಂಪೆರೆದಿದ್ದಾನೆ. ಇದರ ಪರಿಣಾಮ ಲಖನೌ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ಟಾಸ್ ವಿಳಂಬವಾಗಿದೆ. ಆರ್‌ಸಿಬಿ ವಿರುದ್ದ ಸೋಲಿನ ಬಳಿಕ ಇದೀಗ ಕೆಎಲ್ ರಾಹುಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಲಖನೌ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ.

ಆರ್‌ಸಿಬಿ ವಿರುದ್ಧ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತವರಿನಲ್ಲಿ ಮತ್ತೊಂದು ಸೆಣಸಾಟಕ್ಕೆ ಸಜ್ಜಾಗಿದ್ದು, ಇಂದು ಚೆನ್ನೈ ವಿರುದ್ದ ಕಣಕ್ಕಿಳಿದಿದೆ. ತುಂತುರ ಮಳೆ ನಿಂತಿದ್ದು, ಪಿಚ್‌ಗೆ ಹಾಕಿದ್ದ ಕವರ್ ತೆಗೆಯಲಾಗಿದೆ. ಲಖನೌ ಹಾಗೂ ಚೆನ್ನೈ ಆಟಗಾರರು ಮೈದಾನಕ್ಕಿಳಿದಿದ್ದಾರೆ. ಒಂದಡೆ ಅಭ್ಯಾಸ ನಡೆಯುತ್ತಿದೆ. ಶೀಘ್ರದಲ್ಲೇ ಟಾಸ್ ಪ್ರಕ್ರಿಯೆ ನಡೆಯಲಿದೆ.  ಇತ್ತ ಲಖನೌ ತಂಡದಲ್ಲಿ ಆಟಗಾರರು ತಯಾರಿ ನಡೆಸುತ್ತಿದ್ದಾರೆ. ರಾಹುಲ್ ಅನುಪಸ್ಥಿತಿಯಲ್ಲಿ ಲಖನೌ ಆಟಗಾರರು ಇಂದು ಕಣಕ್ಕಿಳಿಯುತ್ತಿದ್ದಾರೆ.

ಲಖನೌ ತಂಡಕ್ಕೆ ಡಬಲ್‌ ಶಾಕ್‌: ಐಪಿಎಲ್‌ನಿಂದ ಔಟಾದ ಕೆ.ಎಲ್‌. ರಾಹುಲ್‌, ಜಯದೇವ್‌ ಉನದ್ಕತ್

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಈ ಆವೃತ್ತಿಯಲ್ಲಿ 5 ಪಂದ್ಯಗಳು ನಡೆದಿದ್ದು, 3ರಲ್ಲಿ 140ಕ್ಕಿಂತ ಕಡಿಮೆ ಮೊತ್ತ ದಾಖಲಾಗಿದೆ. ಈ ಪಂದ್ಯವೂ ಲೋ ಸ್ಕೋರಿಂಗ್‌ ಥ್ರಿಲ್ಲರ್‌ ಆದರೆ ಅಚ್ಚರಿಯಿಲ್ಲ. ಪಿಚ್‌ ಸ್ಪಿನ್‌ ಸ್ನೇಹಿಯಾಗಿರುವ ಕಾರಣ ಚೆನ್ನೈ ನಾಯಕ ಧೋನಿ ತಮ್ಮ ಸ್ಪಿನ್‌ ಅಸ್ತ್ರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅಂಕಪಟ್ಟಿಯಲ್ಲಿ ಅಗ್ರ-4ರಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲುವು ಎರಡೂ ತಂಡಗಳಿಗೆ ಅವಶ್ಯಕವೆನಿಸಿದೆ.

ಒಟ್ಟು ಮುಖಾಮುಖಿ: 02
ಚೆನ್ನೈ: 01
ಲಖನೌ: 01

ಬಿಸಿಸಿಐ ಪ್ರವಾಸಗಳಲ್ಲಿ ವೇಶ್ಯೆಯರೊಂದಿಗೆ ಲೈಂಗಿಕ ಸಂಬಂಧ: ಮೊಹಮ್ಮದ್ ಶಮಿ ವಿರುದ್ಧ ಸುಪ್ರೀಂ ಮೊರೆ ಹೋದ ಪತ್ನಿ

ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ: ಋುತುರಾಜ್‌, ಕಾನ್ವೇ, ರಹಾನೆ , ಮೋಯಿನ್‌ ಅಲಿ, ರಾಯುಡು, ಶಿವಂ ದುಬೆ, ಜಡೇಜಾ, ಧೋನಿ(ನಾಯಕ), ಪತಿರನ, ತುಷಾರ್‌, ತೀಕ್ಷಣ/ಸ್ಯಾಂಟ್ನರ್‌, ಆಕಾಶ್‌.

ಲಖನೌ: ಮೇಯ​ರ್‍ಸ್, ಮನನ್‌/ಪ್ರೇರಕ್‌, ಬದೋನಿ, ಹೂಡಾ, ಕೃನಾಲ್‌(ನಾಯಕ), ಸ್ಟೋಯ್ನಿಸ್‌, ಪೂರನ್‌, ಗೌತಮ್‌, ಆವೇಶ್‌/ಯಶ್‌, ಬಿಷ್ಣೋಯ್‌, ಮಿಶ್ರಾ, ನವೀನ್‌/ವುಡ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ 

ಪಿಚ್‌ ರಿಪೋರ್ಚ್‌
ಈ ಪಂದ್ಯಕ್ಕೆ ಕೆಂಪು ಮಣ್ಣಿನ ಪಿಚ್‌ ಬಳಸಲು ನಿರ್ಧರಿಸಿದ್ದು, ಹೆಚ್ಚಿನ ಬೌನ್ಸ್‌ ನಿರೀಕ್ಷಿಸಬಹುದು. ಹೀಗಾಗಿ ಸ್ಪಿನ್ನರ್‌ಗಳು ಇನ್ನಷ್ಟುಪರಿಣಾಮಕಾರಿಯಾಗಲಿದ್ದಾರೆ. ಇಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 147 ರನ್‌.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ
U19 ಏಷ್ಯಾಕಪ್, 150 ರನ್‌ಗೆ ಪಾಕಿಸ್ತಾನ ಆಲೌಟ್ ಮಾಡಿದ ಟೀಂ ಇಂಡಿಯಾಗೆ 90 ರನ್ ಗೆಲುವು