ಟೈಟಾನ್ಸ್‌ಗಿಂದು ಕೆಕೆಆರ್‌ ಸವಾಲು, ಇಲ್ಲಿದೆ ಸಂಭಾವ್ಯ ಪ್ಲೇಯಿಂಗ್ 11 !

Published : Apr 29, 2023, 02:50 PM IST
ಟೈಟಾನ್ಸ್‌ಗಿಂದು ಕೆಕೆಆರ್‌ ಸವಾಲು, ಇಲ್ಲಿದೆ ಸಂಭಾವ್ಯ ಪ್ಲೇಯಿಂಗ್ 11 !

ಸಾರಾಂಶ

ಕೋಲ್ಕತಾದಲ್ಲಿ ಸೇಡಿನ ಸಮರ ನಡೆಯಲಿದೆ. ಕೆಕೆಆರ್ ವಿರುದ್ಧ ಮೊದಲ ಸೋಲಿಗೆ ಸೇಡು ತೀರಿಸಲು ಸಜ್ಜಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಪ್ಲಾನ್ ಹಾಕಿಕೊಂಡಿದೆ. ಇಂದಿನ ಪಂದ್ಯಕ್ಕೆ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ.

ಕೋಲ್ಕ​ತಾ(ಏ.29): ಸತತ 4 ಸೋಲು​ಗಳ ಬಳಿಕ ಆರ್‌​ಸಿಬಿ ವಿರು​ದ್ಧ ಗೆದ್ದು ಆತ್ಮ​ವಿ​ಶ್ವಾ​ಸ​ ಮರಳಿ ಪಡೆದಿರುವ ಕೋಲ್ಕತಾ ಮತ್ತೊಂದು ಜಯದ ಮೂಲಕ ಅಂಕ​ಪ​ಟ್ಟಿ​ಯಲ್ಲಿ ಮೇಲೇ​ರ​ಲು ಕಾಯು​ತ್ತಿದ್ದು, ಶನಿ​ವಾರ ಗುಜ​ರಾತ್‌ ವಿರುದ್ಧ ಸೆಣ​ಸಾ​ಡ​ಲಿದೆ. ಮತ್ತೊಂದೆಡೆ ಮೊದಲ ಮುಖಾ​ಮುಖಿಯ ಸೋಲಿಗೆ ಸೇಡು ತೀರಿಸಿಕೊಂಡು ಮತ್ತೆ ಅಗ್ರ​ಸ್ಥಾ​ನ​ಕ್ಕೇ​ರಲು ಹಾರ್ದಿಕ್‌ ಬಳಗ ಕಾತ​ರಿ​ಸು​ತ್ತಿದೆ.

ಎರಡೂ ತಂಡ​ದಲ್ಲಿ ಸ್ಫೋಟಕ ಬ್ಯಾಟ​ರ್‌​ಗ​ಳಿದ್ದು, ಈಡನ್‌ ಗಾರ್ಡನ್ಸ್‌ನಲ್ಲಿ ಮತ್ತೊಮ್ಮೆ ರನ್‌ ಹೊಳೆ ನಿರೀ​ಕ್ಷಿ​ಸ​ಬ​ಹುದು. ಇಲ್ಲಿ ನಡೆದ 3 ಪಂದ್ಯ​ಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡಗಳ ಸ್ಕೋರ್‌ 204, 228 ಹಾಗೂ 235. ಆದರೆ ಸ್ಪಿನ್ನ​ರ್‌​ಗ​ಳಿಗೂ ನೆರವು ನೀಡ​ಬಲ್ಲ ಪಿಚ್‌​ನಲ್ಲಿ ಎರಡೂ ತಂಡದ ಬ್ಯಾಟ​ರ್‌​ಗಳಿಗೆ ಸವಾಲು ಎದು​ರಾ​ಗ​ಬ​ಹುದು. ಕೆಕೆ​ಆರ್‌ ಪರ ರಿಂಕು, ನಿತೀಶ್‌ ರಾಣಾ, ರಾಯ್‌ ಮಾತ್ರ ಬ್ಯಾಟಿಂಗ್‌​ನಲ್ಲಿ ಅಬ್ಬ​ರಿ​ಸಿದ್ದು, ಇವ​ರನ್ನು ಕಟ್ಟಿ​ಹಾ​ಕಲು ರಶೀದ್‌, ನೂರ್‌ ಅಹ್ಮ​ದ್‌ ಕಾಯು​ತ್ತಿ​ದ್ದಾರೆ. ಮತ್ತೊಂದೆ​ಡೆ ಸ್ಪಿನ್ನರ್‌​ಗ​ಳಾದ ವರುಣ್‌, ಸುಯಶ್‌ರನ್ನು ಎದು​ರಿ​ಸು​ವಲ್ಲಿ ಗುಜ​ರಾತ್‌ ಎಷ್ಟರ ಮಟ್ಟಿಗೆ ಯಶ​ಸ್ವಿ​ಯಾ​ಗ​ಲಿದೆ ಎನ್ನು​ವು​ದರ ಮೇಲೆ ಪಂದ್ಯದ ಫಲಿ​ತಾಂಶ ನಿರ್ಧಾ​ರ​ವಾ​ಗ​ಬಹು​ದು.

IPL 2023: ಬರೋಬ್ಬರಿ 458 ರನ್‌ ದಾಖಲಾದ ಪಂದ್ಯದಲ್ಲಿ ಲಕ್ನೋ ಸೂಪರ್‌ ವಿನ್‌!

ಒಟ್ಟು ಮುಖಾಮುಖಿ: 02
ಕೆಕೆಆರ್‌: 02
ಗುಜರಾತ್‌: 00
ಸಂಭವನೀಯ ಆಟಗಾರರ ಪಟ್ಟಿ

ಕೆಕೆಆರ್‌: ರಾಯ್‌, ಜಗ​ದೀ​ಶನ್‌, ವೆಂಕಿ, ರಾಣಾ(ನಾಯಕ), ರಿಂಕು, ರಸೆಲ್‌, ನರೇನ್‌, ವೀಸಾ, ವೈಭವ್‌, ಉಮೇಶ್‌, ವರುಣ್‌, ಸುಯಾ​ಶ್‌.
ಗುಜ​ರಾ​ತ್‌: ಸಾಹ, ಗಿಲ್‌, ಹಾರ್ದಿ​ಕ್‌​(​ನಾ​ಯ​ಕ), ವಿಜಯ್‌, ಮಿಲ್ಲರ್‌, ಅಭಿ​ನವ್‌, ತೆವಾ​ಟಿಯಾ, ರಶೀದ್‌, ಲಿಟ್‌್ಲ, ಶಮಿ, ನೂರ್‌, ಮೋಹಿತ್‌,

ಪಂದ್ಯ: ಮಧ್ಯಾಹ್ನ 3.30ಕ್ಕೆ,  

ಪಿಚ್‌ ರಿಪೋರ್ಚ್‌
ಈ ವರ್ಷ ಈಡನ್‌ ಗಾರ್ಡನ್ಸ್‌ನಲ್ಲಿ ಮೂರು ಪಂದ್ಯ​ದಲ್ಲೂ ಮೊದಲು ಬ್ಯಾಟ್‌ ಮಾಡಿದ ತಂಡ 200+ ರನ್‌ ಗಳಿ​ಸಿದೆ ಮತ್ತು ಯಾವ ಪಂದ್ಯ​ದಲ್ಲೂ ಚೇಸಿಂಗ್‌ ತಂಡ ಗೆದ್ದಿಲ್ಲ. ಹೀಗಾಗಿ ಟಾಸ್‌ ಜಯಿ​ಸಿದ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿ​ಕೊ​ಳ್ಳ​ಬ​ಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ