
ಮುಂಬೈ(ಮೇ.21): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಲೀಗ್ ಹಂತದ ಕೊನೆ ಪಂದ್ಯ ಗೆದ್ದು, ತನ್ನ ಭವಿಷ್ಯವನ್ನ ಮುಂಬೈ ಇಂಡಿಯನ್ಸ್ (Mumbai Indians) ಕೈಯಲ್ಲಿಟ್ಟಿದೆ. ಡು ಪ್ಲೆಸಿಸ್ ಬಳಗದ ಅಳಿವು-ಉಳಿವಿನ ಪ್ರಶ್ನೆ ಸದ್ಯ ಎಲ್ಲವೂ ಮುಂಬೈ ಇಂಡಿಯನ್ಸ್ ಮೇಲೆ ನಿಂತಿದೆ. ನಿಮಗೆ ನೆನಪಿರಲಿ. ಆರ್ಸಿಬಿಗೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಬಿಟ್ರೆ, ಮತ್ತೊಂದು ದೊಡ್ಡ ವೈರಿ ಅಂದ್ರೆ ಅದು ಇದೇ ಮುಂಬೈ ಇಂಡಿಯನ್ಸ್. ಐಪಿಎಲ್ ಆರಂಭವಾದಾಗಿನಿಂದಲೂ ಎರಡೂ ತಂಡಗಳು ಅಂಗಳದಲ್ಲಿ ಹಾವು-ಮುಂಗುಸಿಯಂತೆ ಕಾದಾಡುತ್ತಾ ಬಂದಿವೆ. ಅಭಿಮಾನಿಗಳಂತೂ ಕಿತ್ತಾಡುತ್ತಲೇ ಇರ್ತಾರೆ. ಇವರನ್ನ ಕಂಡ್ರೆ ಅವರಿಗಾಗಲ್ಲ, ಅವರನ್ನು ಕಂಡ್ರೆ ಇವರಿಗಾಗಲ್ಲ. ಇಬ್ಬರೂ ಬಿಗ್ ಹೇಟರ್ಸ್. ಇಂತಹ ಬದ್ಧವೈರಿಗಳು ನಾವೀಗ ದುಷ್ಮನ್ಸ್ ಅಲ್ಲ, ಭಾಯ್ ಭಾಯ್ ಅಂತಿದ್ದಾರೆ.
ಇಂದು ಮುಂಬೈಗೆ ಸಿಗಲಿದೆ ಆರ್ಸಿಬಿ ಫ್ಯಾನ್ಸ್ ಬೆಂಬಲ:
ಎಂತಹ ಕಟುಕ ಮನುಷ್ಯನೇ ಬದಲಾಗ್ತಾನೆ. ಅಂತ್ರದಲ್ಲಿ ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ವೈರತ್ವ ಕೊನೆಗೊಳ್ಳದಿರುತ್ತಾ..? ಖಂಡಿತ ಕೊನೆಗೊಂಡಿದೆ. ಇಂದು ಐಪಿಎಲ್ ಹಂಗಾಮದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಈ ಬ್ಯಾಟಲ್ನಲ್ಲಿ ಆರ್ಸಿಬಿ ತಂಡ ಬದ್ಧವೈರಿ ಮುಂಬೈ ಸಪೋರ್ಟ್ಗೆ ನಿಂತಿದೆ. ಹಳೇದೆಲ್ಲವನ್ನು ಮರೆತು, ಇಂದು ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲೆಂದು ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿ ಮತ್ತು ಆಟಗಾರರು ಪ್ರಾರ್ಥಿಸ್ತಿದ್ದಾರೆ. ಯಾಕಂದ್ರೆ ಆರ್ಸಿಬಿ ಮುಂದಿನ ಐಪಿಎಲ್ ಭವಿಷ್ಯ ಮುಂಬೈ ಮೇಲೆ ನಿಂತಿದೆ. ಇಂದು ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದರೆ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ. ಇಲ್ಲವಾದ್ರೆ ಟೂರ್ನಿಯಿಂದಲೇ ಹೊರಬೀಳಲಿದೆ. ಹೀಗಾಗಿ ಇಡೀ ಆರ್ಸಿಬಿ ಫ್ಯಾನ್ಸ್ ಇಂದು ಮುಂಬೈ ಅಭಿಮಾನಿಗಳಾಗಿ ಬದಲಾಗಿದ್ದಾರೆ.
ಮುಂಬೈ ಬೆಂಬಲಿಸಿದ್ದಾರೆ ಕೊಹ್ಲಿ:
ಗುಜರಾತ್ ಟೈಟಾನ್ಸ್ (Gujarat Titans) ವಿರುದ್ದ ಘರ್ಜಿಸಿ ಪಂದ್ಯ ಗೆಲ್ಲಿಸಿಕೊಟ್ಟ ವಿರಾಟ್ ಕೊಹ್ಲಿ (Virat Kohli), ಆರ್ಸಿಬಿ ಪ್ಲೇ ಆಫ್ ಆಸೆ ಜೀವಂತವಾಗಿರಿಸಿದ್ರು. ಅಷ್ಟೇ ಅಲ್ಲ ಪಂದ್ಯ ಬಳಿಕ ನನ್ನ ಫುಲ್ ಸಪೋರ್ಟ್ ಮುಂಬೈಗೆ ಇರಲಿದೆ. ಅವರ 25 ಸಪೋರ್ಟ್ ಸ್ಟಾಫ್ ಜತೆ ನಾವೆಲ್ಲರೂ ಮುಂಬೈ ಇಂಡಿಯನ್ಸ್ಗೆ ಬೆಂಬಲಿಸಿದ್ದೇವೆ ಎಂದು ಕಿಂಗ್ ಕೊಹ್ಲಿ ಹೇಳಿದ್ದಾರೆ. ಇನ್ನು ಮ್ಯಾಚ್ ಪ್ರಜಂಟೇಶನ್ ವೇಳೆ ಮಾತನಾಡಿದ ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಇನ್ನೇನಿದ್ರು ನಮ್ಮ ಸಪೋರ್ಟ್ ಮುಂಬೈಗೆ. ರೋಹಿತ್ ಶರ್ಮಾ ಮೇಲೆ ಎಲ್ಲ ಭಾರ ಹಾಕಿದ್ದೇವೆ. ಪಂದ್ಯ ಗೆದ್ದು ಕೊಡುತ್ತಾರೆ ಅಂತ ನಂಬಿದ್ದೇವೆ ಎಂದರು.
IPL 2022: ಡೆಲ್ಲಿ ಗೆದ್ದರೆ ಪ್ಲೇ ಆಫ್ಗೆ, ಮುಂಬೈ ಗೆದ್ದರೆ ಆರ್ಸಿಬಿ ಪ್ಲೇ ಆಫ್ಗೆ..!!
5 ಬಾರಿ ಕಪ್ ಗೆದ್ದಿದ್ದಲ್ಲ, ಡೆಲ್ಲಿ ಮೇಲೆ ಮ್ಯಾಚ್ ಗೆದ್ದು ತೋರಿಸಿ:
ಒಂದೆಡೆ ಆರ್ಸಿಬಿ ಫ್ಯಾನ್ಸ್ ಆ್ಯಂಡ್ ಟೀಮ್ ಮುಂಬೈ ಸಪೋರ್ಟ್ಗೆ ನಿಂತಿದಿದ್ರೆ, ಇನ್ನೊಂದೆಡೆ ಮುಂಬೈ ಟ್ರೋಲ್ ಆಗ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಮುಂಬೈ ಕಾಲೆಳೆಯುವ ರೀತಿಯಲ್ಲಿ ಮೀಮ್ಸ್ ಹರಿದಾಡ್ತಿವೆ. ಐದು ಸಲ ಕಪ್ ಗೆದ್ದಿದ್ದು ಅಲ್ಲ, ಇವಾಗ ಡೆಲ್ಲಿ ಮೇಲೆ ಮ್ಯಾಚ್ ಗೆದ್ದು ತೋರಿಸ್ತೋ ಅಂತಿದ್ದಾರೆ. ಜೊತೆಗೆ ಟೆಸ್ಟ್ ಕ್ಯಾಪ್ಟನ್ಸಿ ಬಿಟ್ಟುಕೊಟ್ಟೆ. ಒನ್ಡೇ ಮತ್ತು ಟಿ20 ಕ್ಯಾಪ್ಟನ್ಸಿ ಕೂಡ ಕೊಟ್ಟೆ, ಪ್ಲೀಸ್ ಲಾಸ್ಟ್ ಮ್ಯಾಚ್ ಡೆಲ್ಲಿ ಮೇಲೆ ಗೆದ್ದುಬಿಡ್ರೋ ಮಗ ಸಾಕು ಅಂತ ಕೊಹ್ಲಿ, ರೋಹಿತ್ಗೆ ಹೇಳುವ ಮೀಮ್ಸ್ ಹರಿದಾಡ್ತಿದೆ. ಒಟ್ಟಿನಲ್ಲಿ ಆರ್ಸಿಬಿ, ತಾವು ಸೇವ್ ಆಗಲು ವೈರತ್ವ ಮರೆತು ಮುಂಬೈ ಬೆಂಬಲಕ್ಕೆ ನಿಂತಿದೆ. ಮುಂಬೈ ಪಂದ್ಯ ಗೆದ್ದು ಆರ್ಸಿಬಿ ಸಪೋರ್ಟ್ಗೆ ಋಣಿಯಾಗಿರುತ್ತಾ? ಇಲ್ಲ ಸೋತು ದ್ವೇಷ ಹೆಚ್ಚಾಗುವಂತೆ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.