
ಮುಂಬೈ(ಮೇ.21): ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಆರ್ಸಿಬಿ, ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಪಾಯಿಂಟ್ ಟೇಬಲ್ನಲ್ಲಿ ಟಾಪ್ನಲ್ಲಿರುವ ಗುಜರಾತ್ ಟೈಟಾನ್ಸ್ಗೆ (Gujarat Titans) ಈ ಸೋಲಿನಿಂದ ಏನೂ ಸಮಸ್ಯೆಯಾಗಿಲ್ಲ. ಆದರೆ ಸಮಸ್ಯೆಯಾಗಿರೋದು ಗುಜರಾತ್ ಟೈಟಾನ್ಸ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಮ್ಯಾಥ್ಯೂ ವೇಡ್ಗೆ (Matthew Wade). ಹೌದು, ಈ ಪಂದ್ಯದ ವೇಳೆ ಅಶಿಸ್ತು ವರ್ತನೆ ತೋರಿದ ಆಸೀಸ್ ಪ್ಲೇಯರ್ಗೆ ಮ್ಯಾಚ್ ರೆಫ್ರಿ, ಎಚ್ಚರಿಕೆ ನೀಡಿ ಛೀಮಾರಿ ಹಾಕಿದ್ದಾರೆ.
ಡ್ರೆಸ್ಸಿಂಗ್ ರೂಮ್ನಲ್ಲಿ ಬ್ಯಾಟ್ ಪೀಸ್ ಪೀಸ್:
ಮುಂಬೈನಲ್ಲಿ ನಡೆದ ಆರ್ಸಿಬಿ (RCB) ವಿರುದ್ಧ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೈಟಾನ್ಸ್, ಬೇಗ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡಿತು. ನಂಬರ್ 3 ಸ್ಲಾಟ್ನಲ್ಲಿ ಬ್ಯಾಟಿಂಗಿಳಿದ ಮ್ಯಾಥ್ಯೂ ವೇಡ್, 2 ಬೌಂಡ್ರಿ, ಒಂದು ಸಿಕ್ಸ್ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ರು. ಆದ್ರೆ ಗ್ಲೆನ್ ಮ್ಯಾಕ್ಸ್ವೆಲ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದು ಔಟಾದ್ರು. ಆಗ ವೇಡ್, ಡಿಆರ್ಎಸ್ ಮೋರೆ ಹೋದರು. ಆದರೆ ಥರ್ಡ್ ಅಂಪೈರ್ ಸಹ ಔಟ್ ಎಂದು ತೀರ್ಪು ನೀಡಿದ್ರು. ಚೆಂಡು ಪ್ಯಾಡ್ಗೆ ಬಡಿಯುವ ಮುನ್ನ ಬ್ಯಾಟ್ಗೆ ತಾಗಿತ್ತು ಅನ್ನೋದು ವೇಡ್ ಅವರ ಮನಸ್ಥಿತಿ ಆಗಿತ್ತು. ಈ ಬೇಸರದಲ್ಲೇ ಅವರು ಪೆವಿಲಿಯನ್ಗೆ ಹೆಜ್ಜೆ ಹಾಕಿದ್ರು.
ವೇಡ್ ಸಮಾಧಾನ ಮಾಡಿದ ಕಿಂಗ್ ಕೊಹ್ಲಿ:
ವಿವಾದಾತ್ಮಕ ತೀರ್ಪಿಗೆ ಬಲಿಯಾದ ಮ್ಯಾಥ್ಯೂ ವೇಡ್, ತಲೆ ಅಲ್ಲಾಡಿಕೊಂಡೇ ಬೇಸರದಲ್ಲಿ ಪೆವಿಲಿಯನ್ಗೆ ಹೆಜ್ಜೆ ಹಾಕಿದ್ರು. ನಾಟೌಟ್ ಅನ್ನ ಔಟ್ ನೀಡಿದ್ರು ಅನ್ನೋ ಬೇಸರ ಅವರಲ್ಲಿತ್ತು. ಪೆವಿಲಿಯನ್ಗೆ ಹೋಗ್ತಿದ್ದ ವೇಡ್ಗೆ ಕಿಂಗ್ ಕೊಹ್ಲಿ ಸಮಾಧಾನ ಸಹ ಮಾಡಿದ್ರು. ಆದ್ರೆ ಡ್ರೆಸ್ಸಿಂಗ್ ರೂಮ್ ವರೆಗೆ ಸೈಲೆಂಟಾಗಿ ಹೋದ ಮ್ಯಾಥ್ಯೂ ವೇಡ್, ಅಲ್ಲಿ ವೈಲೆಂಟ್ ಆದ್ರು. ಡ್ರೆಸಿಂಗ್ ರೂಮ್ಗೆ ಎಂಟ್ರಿ ಆಗುತ್ತಿದಂತೆ ಹೆಲ್ಮೆಟ್ ಬಿಸಾಕಿದ ವೇಡ್, ಬ್ಯಾಟನ್ನ ಬಡಿದು ಮುರಿದು ಹಾಕಿದ್ರು. ಆ ಹೆಲ್ಮೆಟ್ ಮತ್ತು ಬ್ಯಾಟ್ ಮತ್ತೆ ಬಳಸಲು ಬರೋದಿಲ್ಲ ಬಿಡಿ. ವೇಡ್ ಇಷ್ಟು ಸಿಟ್ಟಾಗಲು ಕಾರಣ ಅವರು, 8 ಪಂದ್ಯ ಆಡಿದ್ರೂ ಒಂದೂ ಅರ್ಧಶತಕ ಬಾರಿಸಿಲ್ಲ.
IPL 2022 ತಾಹಿರ್ ದಾಖಲೆ ಸರಿಗಟ್ಟಿದ ಚಹಲ್, ಇತಿಹಾಸ ನಿರ್ಮಿಸಲು ಯುಜಿಗೆ ಬೇಕಿದೆ ಇನ್ನೊಂದು ವಿಕೆಟ್
ಇಷ್ಟಕ್ಕೆ ಸುಮ್ಮನಾಗದ ವೇಡ್, ಸ್ಟೇಡಿಯಂನ ಬಿಗ್ ಸ್ಕ್ರೀನ್ ಮತ್ತು ಟಿವಿಯಲ್ಲಿ ಬರೋ ರಿಪ್ಲೇ ನೋಡಿ ಕುಪಿತಗೊಂಡರು. ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿ (Virat Kohli) ಮತ್ತು ಮ್ಯಾಕ್ಸ್ವೆಲ್ ಇಬ್ಬರೂ ವೇಡ್ ಅವರನ್ನ ಸಮಾಧಾನ ಮಾಡಿದ್ರು. ಪಂದ್ಯದ ನಂತರ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದಕ್ಕಾಗಿ ವೇಡ್ಗೆ ಎಚ್ಚರಿಕೆ ನೀಡಿ ಛೀಮಾರಿ ಹಾಕಿದ್ರು ಮ್ಯಾಚ್ ರೆಫ್ರಿ.
ಉರಿಯುವ ಬೆಂಕಿಗೆ ತುಪ್ಪ ಸುರಿದ ಪಾಂಡ್ಯ:
ನಾಟೌಟ್ ಅನ್ನ ಔಟ್ ಕೊಟ್ಟಿದ್ದಾರೆ ಅನ್ನೋ ಬೇಸರದಲ್ಲಿದ್ದ ವೇಡ್ಗೆ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತಷ್ಟು ಬೇಸರ ಮಾಡಿದ್ದಾರೆ. ಬ್ಯಾಟ್ಗೆ ಚೆಂಡು ತಾಗಿರುವುದು ಅಲ್ಟ್ರಾ ಎಡ್ಜ್ನಲ್ಲಿ ಸ್ವಲ್ಪ ಕಂಡಿತ್ತು ಎಂದು ನಾನು ಭಾವಿಸುತ್ತೇನೆ. ಆದರೆ, ದೊಡ್ಡ ಪರದೆಯಲ್ಲಿ ಇದು ಸರಿಯಾಗಿ ಕಂಡಿರಲಿಲ್ಲ. ಇದು ನಮ್ಮ ತಪ್ಪಲ್ಲ. ಇಂಥಾ ವಿಷಯದಲ್ಲಿ ತಂತ್ರಜ್ಞಾನ ಸಹಾಯ ಮಾಡಿಲ್ಲವಾದರೆ, ಯಾರು ನೆರವಾಗಲಿದ್ದಾರೆಂದು ತನಗೆ ತಿಳಿಯುತ್ತಿಲ್ಲ ಎಂದು ಹೇಳೋ ಮೂಲಕ ಪಾಂಡ್ಯ, ಉರಿಯುವ ಬೆಂಕಿಗೆ ತುಪ್ಪ ಸುರಿದು ಮತ್ತಷ್ಟು ವಿವಾದ ಸೃಷ್ಟಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.