ಐಪಿ​ಎಲ್‌ ವಿದೇ​ಶಕ್ಕೆ ಶಿಫ್ಟ್‌ ಬಹು​ತೇಕ ಖಚಿತ

Published : Jul 03, 2020, 05:05 PM IST
ಐಪಿ​ಎಲ್‌ ವಿದೇ​ಶಕ್ಕೆ ಶಿಫ್ಟ್‌ ಬಹು​ತೇಕ ಖಚಿತ

ಸಾರಾಂಶ

ಐಪಿಎಲ್ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದೆ. ಹೀಗಿರುವಾಗಲೇ 13ನೇ ಆವೃತ್ತಿಯ ಮಿಲಿಯನ್ ಡಾಲರ್ ಐಪಿಎಲ್ ಟೂರ್ನಿ ವಿದೇಶದಲ್ಲಿ ನಡೆಯುವುದು ಪಕ್ಕಾ ಎಂದು ಬಿಸಿಸಿಐ ಖಚಿತಪಡಿಸಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವ​ದೆ​ಹ​ಲಿ(ಜು.03): 13ನೇ ಆವೃ​ತ್ತಿಯ ಇಂಡಿ​ಯನ್‌ ಪ್ರೀಮಿ​ಯರ್‌ ಲೀಗ್‌ (ಐ​ಪಿ​ಎಲ್‌) ವಿದೇ​ಶಕ್ಕೆ ಸ್ಥಳಾಂತರಗೊಳ್ಳು​ವುದು ಬಹು​ತೇಕ ಖಚಿತವಾಗಿದೆ ಎಂದು ಬಿಸಿ​ಸಿಐ ಅಧಿ​ಕಾ​ರಿ​ಯೊಬ್ಬರು ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದ​ರ್ಶನದ ವೇಳೆ ಸುಳಿವು ನೀಡಿದ್ದಾರೆ. 

‘ಟಿ20 ವಿಶ್ವ​ಕಪ್‌ನ ಭವಿಷ್ಯದ ಬಗ್ಗೆ ಐಸಿಸಿ ಅಧಿ​ಕೃತ ನಿರ್ಧಾರ ಪ್ರಕ​ಟಿ​ಸು​ವು​ದನ್ನೇ ಬಿಸಿ​ಸಿಐ ಕಾಯುತ್ತಿದೆ. ಯುಎಇ ಇಲ್ಲವೇ ಶ್ರೀಲಂಕಾ​ದಲ್ಲಿ ಟೂರ್ನಿ ನಡೆ​ಸಲು ಚಿಂತನೆ ನಡೆ​ಸ​ಲಾ​ಗಿದೆ. ಎಲ್ಲೇ ನಡೆ​ದರೂ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯ​ಗಳು ನಡೆ​ಯ​ಲಿವೆ. ಮುಂಬೈ​ನಲ್ಲಿ 4 ಕ್ರೀಡಾಂಗಣಗಳಿ​ರುವ ಕಾರಣ, ಅಲ್ಲೇ ನಡೆ​ಸಿ​ದ್ದರೆ ಅನು​ಕೂ​ಲ​ವಾ​ಗು​ತ್ತಿತ್ತು. ಆದರೆ ಸದ್ಯದ ಪರಿಸ್ಥಿ​ತಿ​ಯಲ್ಲಿ ಭಾರ​ತ​ದಲ್ಲಿ ಟೂರ್ನಿ ನಡೆ​ಸುವುದು ಅಸಾ​ಧ್ಯ’ ಎಂದು ಅಧಿ​ಕಾರಿ ತಿಳಿ​ಸಿ​ದ್ದಾರೆ.

ಇನ್ನೊಂದು ವರದಿಯ ಪ್ರಕಾರ ದಕ್ಷಿಣ ಭಾರತದಲ್ಲಿ ಅಂದರೆ ಬೆಂಗಳೂರು ಹಾಗೂ ಚೆನ್ನೈನಲ್ಲಿ ಟೂರ್ನಿ ಆಯೋಜಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಶ್ರೀಲಂಕಾ ಈಗಾಗಲೇ ತಾವು ಟೂರ್ನಿ ಆಯೋಜಿಸಲು ಸಿದ್ಧವೆಂದು ಹೇಳಿಕೆ ನೀಡಿತ್ತು. ಸೋಮವಾರವಷ್ಟೇ ಶ್ರೀಲಂಕಾ ದೇಶಾದ್ಯಂತ ಲಾಕ್‌ಡೌನ್ ತೆರವುಗೊಳಿಸಿದೆ.

ಸಾರ್ವಕಾಲಿಕ ಶ್ರೇಷ್ಠ IPL ತಂಡ ಪ್ರಕಟಿಸಿದ ಎಬಿ ಡಿವಿಲಿಯರ್ಸ್..!

ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಒಂದು ವೇಳೆ ಮುಂದೂಡಲ್ಪಟ್ಟರೆ, ಆ ಸಮಯದಲ್ಲಿ ಐಪಿಎಲ್ ಆಯೋಜಿಸಬಹುದು ಎನ್ನುವುದು ಬಿಸಿಸಿಐ ಲೆಕ್ಕಾಚಾರವಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡಾ ಈ ವರ್ಷ ಶತಾಯಗತಾಯ ಐಪಿಎಲ್ ನಡಿಸಿಯೇ ಸಿದ್ದ ಎನ್ನುವ ಮಾತುಗಳನ್ನಾಡಿದ್ದಾರೆ.  
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿವೃತ್ತಿ ನಂತರ ಕೊಹ್ಲಿ, ರೋಹಿತ್ ಏನ್ಮಾಡ್ತಾರೆ? ಗುಟ್ಟು ಬಿಚ್ಚಿಟ್ಟ ಅಶ್ವಿನ್
ind vs sl 1st test : ಸರ್ಪರಾಜ್‌ಗೆ ಇಲ್ಲ ಸ್ಥಾನ, ಮೂವರು ಕನ್ನಡಿಗರಿಗೆ ಪ್ಲೇಯಿಂಗ್-11ನಲ್ಲಿ ಸ್ಥಾನ ಕೊಟ್ಟ ಚೋಪ್ರಾ