ಕೊಲೊಂಬೊ(ಜು.29): ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ನಿರ್ಣಾಯಕ ಘಟ್ಟ ತಲುಪಿದೆ. ಸರಣಿ 1-1 ಅಂತರದಿಂದ ಸಮಬಲಗೊಂಡಿರುವ ಕಾರಣ ಇಂದಿನ 3ನೇ ಹಾಗೂ ಅಂತಿಮ ಟಿ20 ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಕೊಲೊಂಬೊದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಗಾಯಗೊಂಡಿರುವ ನವದೀಪ್ ಸೈನಿ ಬದಲು ಸಂದೀಪ್ ವಾರಿಯರ್ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ.
Hello & Good Evening from Colombo! 👋 have won the toss & elected to bat against Sri Lanka in the third & final T20I of the series.
Follow the match 👉 https://t.co/E8MEONwPlh
Here's India's Playing XI 👇 pic.twitter.com/QaQL0664Z9
ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 38 ರನ್ ಗೆಲುವು ದಾಖಲಿಸಿತ್ತು. ಕೊರೋನಾ ಕಾರಣ 2ನೇ ಪಂದ್ಯ ಮುಂದೂಡಲಾಗಿತ್ತು. ನಿನ್ನೆ(ಜು.28) ನಡೆದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ 4 ವಿಕೆಟ್ ಗೆಲುವು ಕಂಡಿತ್ತು.