
ಪುಣೆ(ಅ.11): ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಸ್ಲೆಡ್ಜ್ ಮಾಡಿದರೂ ನಾನು ಏಕಾಗ್ರತೆಯಿಂದ ಬ್ಯಾಟ್ ಮಾಡುತ್ತಿದ್ದೆ ಎಂದು ಚೇತೇಶ್ವರ್ ಪೂಜಾರ ದಿನದಂತ್ಯದ ಬಳಿಕ ಹೇಳಿದರು. ರಬಾಡ ಎಸೆತಕ್ಕೆ ಪೂಜಾರ ಖಾತೆ ತೆರೆಯದೆ ಔಟಾಗಬೇಕಿತ್ತು. ಆದರೆ ಪೂಜಾರಗೆ ಆಫ್ರಿಕಾ ಜೀವದಾನ ನೀಡಿದ್ದರಿಂದ ರಬಾಡ ಹತಾಶೆಯಾಗಿ ಸ್ಲೆಡ್ಜ್ ಮಾಡಿದರು.
ಇದನ್ನೂ ಓದಿ: ಸೆಹ್ವಾಗ್ ಹಾದಿಯಲ್ಲಿ ಮಯಾಂಕ್; ಕನ್ನಡಿಗನನ್ನು ಕೊಂಡಾಡಿದ ಟ್ವಿಟರಿಗರು..!
ಪೂಜಾರ ಆಫ್ರಿಕಾ ವೇಗಿ ರಬಾಡಗೆ ಉತ್ತರಿಸಲು ಹೋಗಿಲ್ಲ. 58 ರನ್ ಗಳಿಸಿ ಪೂಜಾರ ವಿಕೆಟ್ ಒಪ್ಪಿಸಿದಾಗ ರಬಾಡ ಪುನಃ ಏನೋ ಹೇಳಿದ್ದರು. ‘ರಬಾಡ ಏನು ಹೇಳಿದರೋ ನೆನಪಿಲ್ಲ. ಬ್ಯಾಟ್ಸ್ಮನ್ಗೆ ಏನಾದರು ಹೇಳುವುದು ರಬಾಡಗೆ ಇಷ್ಟ. ನನ್ನ ಏಕಾಗ್ರತೆ ತಪ್ಪಿಸಲು ರಬಾಡ ಯತ್ನಿಸುವ ನಿರೀಕ್ಷೆಯಿತ್ತು. ಹಾಗಾಗಿ ರಬಾಡ ಹೇಳಿದ್ದನ್ನು ಕೇಳಿಸಿಕೊಳ್ಳಲಿಲ್ಲ’ ಎಂದು ಪೂಜಾರ ತಿಳಿಸಿದರು.
ಇದನ್ನೂ ಓದಿ: ಅಪ್ಪನ ಅಗಲಿಕೆಯಿಂದ ಬಡತನ, ಒಂದೇ Tಶರ್ಟ್ನಲ್ಲಿ ಆಡಿದ್ದ ಬುಮ್ರಾ ಈಗ ಕೋಟ್ಯಾಧಿಪತಿ!
ವಿಶಾಖಪಟ್ಟಣಂ ಟೆಸ್ಟ್ ಪಂದ್ಯ ಸೋತಿರುವ ಸೌತ್ ಆಪ್ರಿಕಾ, ಪುಣೆ ಟೆಸ್ಟ್ ಪಂದ್ಯ ಗೆಲ್ಲಲೇಬೇಕಾದ ಒತ್ತಡಲ್ಲಿದೆ. ಹೀಗಾಗಿ ಸ್ಲೆಡ್ಜಿಂಗ್ ಮೂಲಕ ಭಾರತವನ್ನು ಕಟ್ಟಿ ಹಾಕಲು ರಣತಂತ್ರ ಹೆಣೆದಿದೆ. ಆದರೆ ದಿಟ್ಟ ಹೋರಾಟ ನೀಡುತ್ತಿರುವ ಭಾರತ, 2ನೇ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.