ಭಾರತ-ಇಂಗ್ಲೆಂಡ್ ಸರಣಿ ಮುಂದೂ​ಡಿಕೆ..! IPL ನಡೆಯೋದು ಪಕ್ಕಾ..?

Kannadaprabha News   | Asianet News
Published : Jul 16, 2020, 02:40 PM IST
ಭಾರತ-ಇಂಗ್ಲೆಂಡ್ ಸರಣಿ ಮುಂದೂ​ಡಿಕೆ..! IPL ನಡೆಯೋದು ಪಕ್ಕಾ..?

ಸಾರಾಂಶ

ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಭಾರತಕ್ಕೆ ಬರಲು ಇಂಗ್ಲೆಂಡ್‌ ತಂಡ ಹಿಂದೇಟು ಹಾಕು​ತ್ತಿ​ದೆ. ಇದರ ಜತೆಗೆ ಸೆಪ್ಟೆಂಬರ್‌ನಲ್ಲಿ ಐಪಿ​ಎಲ್‌ ಆರಂಭ​ಗೊ​ಳ್ಳ​ಲಿ​ರುವ ಕಾರಣ, 3 ಪಂದ್ಯ​ಗಳ ಏಕ​ದಿನ ಹಾಗೂ 3 ಪಂದ್ಯ​ಗಳ ಟಿ20 ಸರ​ಣಿ​ಯನ್ನು 2021ರ ಸೆಪ್ಟೆಂಬರ್‌ನಲ್ಲಿ ನಡೆ​ಸಲು ನಿರ್ಧ​ರಿ​ಸ​ಲಾ​ಗಿದೆ . ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವ​ದೆ​ಹ​ಲಿ(ಜು.16): ಸೆಪ್ಟೆಂಬರ್‌ನಲ್ಲಿ ಭಾರ​ತ​ದಲ್ಲಿ ನಡೆ​ಯ​ಬೇ​ಕಿರುವ ಇಂಗ್ಲೆಂಡ್‌ ವಿರು​ದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗಳು ಮುಂದೂ​ಡಿಕೆಯಾಗುವುದು ಬಹು​ತೇಕ ಖಚಿತಗೊಂಡಿದೆ. 

ಸೆಪ್ಟೆಂಬರ್‌ನಲ್ಲಿ ಐಪಿ​ಎಲ್‌ ಆರಂಭ​ಗೊ​ಳ್ಳ​ಲಿ​ರುವ ಕಾರಣ, 3 ಪಂದ್ಯ​ಗಳ ಏಕ​ದಿನ ಹಾಗೂ 3 ಪಂದ್ಯ​ಗಳ ಟಿ20 ಸರ​ಣಿ​ಯನ್ನು 2021ರ ಸೆಪ್ಟೆಂಬರ್‌ನಲ್ಲಿ ನಡೆ​ಸಲು ನಿರ್ಧ​ರಿ​ಸ​ಲಾ​ಗಿದೆ ಎಂದು ಮಾಧ್ಯ​ಮ​ಗಳು ವರದಿ ಮಾಡಿವೆ. 

ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಭಾರತಕ್ಕೆ ಬರಲು ಇಂಗ್ಲೆಂಡ್‌ ತಂಡ ಹಿಂದೇಟು ಹಾಕು​ತ್ತಿ​ರು​ವುದು ಸಹ ಸರಣಿ ಮುಂದೂ​ಡಲು ಕಾರಣ ಎನ್ನ​ಲಾ​ಗಿದೆ. ಶುಕ್ರ​ವಾರ ಬಿಸಿ​ಸಿಐ ಸಭೆ ನಡೆ​ಯ​ಲಿದ್ದು, ಈ ಬಗ್ಗೆ ಅಧಿ​ಕೃತ ಪ್ರಕ​ಟಣೆ ಹೊರ​ಬೀ​ಳುವ ನಿರೀಕ್ಷೆ ಇದೆ.

ಕೊಹ್ಲಿ ಪಡೆಗೆ ದುಬೈನಲ್ಲಿ 6 ವಾರ ಅಭ್ಯಾಸ ಶಿಬಿರ?

ನವ​ದೆ​ಹ​ಲಿ: ಸೆಪ್ಟೆಂಬರ್‌ನಿಂದ ನವೆಂಬರ್‌ ವರೆಗೂ ಐಪಿಎಲ್‌ ನಡೆ​ಸಲು ಯೋಜನೆ ರೂಪಿ​ಸು​ತ್ತಿ​ರುವ ಬಿಸಿ​ಸಿಐ, ಟೂರ್ನಿಗೂ ಮುನ್ನ ಕೇಂದ್ರ ಗುತ್ತಿಗೆ ಹೊಂದಿ​ರುವ ಆಟ​ಗಾ​ರ​ರನ್ನು ವಿಶೇಷ ವಿಮಾ​ನ​ದಲ್ಲಿ ದುಬೈಗೆ ಕಳು​ಹಿಸಿ, 6 ವಾರಗಳ ಅಭ್ಯಾಸ ಶಿಬಿರ ಆಯೋ​ಜಿಸಲು ಚಿಂತನೆ ನಡೆ​ಸಿದೆ. 

ವಿಂಡೀಸ್ ವಿರುದ್ಧ 2ನೇ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ಗೆ ಶಾಕ್..!

ಶುಕ್ರ​ವಾರ ನಡೆ​ಯ​ಲಿ​ರುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊ​ಳ್ಳ​ಲಾ​ಗು​ವುದು ಎಂದು ರಾಷ್ಟ್ರೀಯ ಮಾಧ್ಯ​ಮ​ವೊಂದು ವರದಿ ಮಾಡಿದೆ. ಸದ್ಯದ ಸ್ಥಿತಿ​ಯಲ್ಲಿ ಭಾರ​ತ​ದಲ್ಲಿ ಐಪಿ​ಎಲ್‌ ಆಯೋ​ಜಿ​ಸು​ವುದು ಅಸಾಧ್ಯವೆನಿ​ಸಿರುವ ಕಾರಣ, ಯುಎ​ಇ​ನಲ್ಲಿ ಟೂರ್ನಿ ನಡೆ​ಸು​ವುದು ಬಹು​ತೇಕ ಖಚಿತ ಎಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?