
ಕಾರ್ಡಿಫ್ (ಜು.16) ಇಂಗ್ಲೆಂಡ್ ವಿರುದ್ದದ 2ನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಯುವ ವೇಗಿ ಗುರ್ನೂರ್ ಬ್ರಾರ್ ವಿರುದ್ದ ಐಸಿಸಿ ಮಹತ್ವದ ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸಿದ ಗುರ್ನೂರ್ ಬಾರ್ ವಿರುದ್ದ ಐಸಿಸಿ ಕ್ರಮ ತೆಗೆದುಕೊಂಡಿದೆ. ಗುರ್ನೂರ್ ಬ್ರಾರ್ ಐಸಿಸಿ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ 2.9 ನಿಯಮ ಉಲ್ಲಂಘಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎರಡನೇ ಏಕದಿನ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಕ್ರಮ ಕೈಗೊಂಡಿದ್ದು, ವೇಗಿಗೆ ಹಿನ್ನಡೆಯಾಗಿದೆ.
ಮೊದಲ ಏಕದಿನ ಪಂದ್ಯದ 8ನೇ ಓವರ್ನಲ್ಲಿ ಗುರ್ನೂರ್ ಬ್ರಾರ್ ಚೆಂಡನ್ನು ಕ್ರೀಸ್ನಲ್ಲಿದ್ದ ಇಂಗ್ಲೆಂಡ್ ಬ್ಯಾಟರ್ ಕಡೆ ಎಸೆದಿದ್ದರು.ಇದು ಐಸಿಸಿ ನಿಯಮ ಉಲ್ಲಂಘನೆಯಾಗಿದೆ. ಬ್ಯಾಟರ್ ಕಡೆ ಅಥವಾ ಕ್ರಿಕೆಟಿಗನ ಕಡೆ ಬಾಲ್ ಅಥವಾ ಯಾವುದೇ ವಸ್ತುಗಳನ್ನು ಎಸೆದರೂ ನಿಯಮ ಉಲ್ಲಂಘನೆಯಾಗಿದೆ.ಆಕ್ರೋಶದಲ್ಲಿ ಗುರ್ನೂರ್ ಬಾರ್ ಚೆಂಡು ಎಸೆದಿದ್ದರು. ಇದರ ಪರಿಣಾಮ ಐಸಿಸಿ ಇದೀಗ ಡಿಮೆರಿಟ್ ಪಾಯಿಂಟ್ಸ್ ನೀಡಿದೆ.
ಸದ್ಯ ಗುರ್ನೂರ್ ಬ್ರಾರ್ಗೆ ಡಿಮೇರಿಟ್ಸ್ ಪಾಯಿಂಟ್ಸ್ ನೀಡಲಾಗಿದೆ. ಇದೇ ರೀತಿ ಮತ್ತೆ ನಿಯಮ ಉಲ್ಲಂಘಿಸಿ ಡಿಮೆರಿಟ್ಸ್ ಪಾಯಿಂಟ್ಸ್ ನಿಗದಿತ ಮಿತಿ ಮೀರಿದರೆ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಾಗಾಗುತ್ತಾರೆ. ಗುರ್ನೂರ್ ಬ್ರಾರ್ ಇದೇ ರೀತಿ ಐಸಿಸಿ ನಿಯಮ ಉಲ್ಲಂಘಿಸಿದರೆ ಮುಂದಿನ ಸರಣಿಗಳಲ್ಲಿ ಸಂಕಷ್ಟ ಎದುರಾಗಲಿದೆ.
ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪ್ರಮುಖ ಬ್ರೇಕ್ಥ್ರೂ ನೀಡಿದ ವೇಗಿ ಗುರ್ನೂರ್ ಬ್ರಾರ್ 2 ವಿಕೆಟ್ ಕಬಳಿಸಿದ್ದಾರೆ. 43 ರನ್ ಸಿಡಿಸಿದ ಬೆನ್ ಡಕೆಟ್ ಹಾಗೂ 14 ರನ್ ಸಿಡಿಸಿದ ಜೇಕಬ್ ಬೆತೆಲ್ ವಿಕೆಟ್ ಕಬಳಿಸಿದ್ದರು. ಭಾರತ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಗೆಲುವು ದಾಖಲಿಸಿತ್ತು.
ಮೊದಲ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ದಾಖಲಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯ ಗೆದ್ದು ಸರಣಿ ಕೈವಶ ಮಾಡಲು ಮುಂದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.