'ತಗೊಂಡ ಮೇಲೆ ವಾಪಾಸ್‌ ಕೊಡಬೇಕು'; ಕೊಹ್ಲಿ ಖಡಕ್ ಮಾತಿನ ವಿಡಿಯೋ ವೈರಲ್‌

Published : May 02, 2023, 12:40 PM IST
'ತಗೊಂಡ ಮೇಲೆ ವಾಪಾಸ್‌ ಕೊಡಬೇಕು'; ಕೊಹ್ಲಿ ಖಡಕ್ ಮಾತಿನ ವಿಡಿಯೋ ವೈರಲ್‌

ಸಾರಾಂಶ

ಲಖನೌ ಎದುರು ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಗೆಲುವಿನ ಬೆನ್ನಲ್ಲೇ ಡ್ರೆಸ್ಸಿಂಗ್ ರೂಂನಲ್ಲಿ ಆರ್‌ಸಿಬಿ ಭರ್ಜರಿ ಸಂಭ್ರಮಾಚರಣೆ ವಿರಾಟ್ ಕೊಹ್ಲಿಯ ಖಡಕ್ ಮಾತು ವೈರಲ್

ಲಖನೌ(ಮೇ.02): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಇಲ್ಲಿನ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್‌ ಎದುರು 18 ರನ್‌ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತವರಿನಲ್ಲಿ ಅನುಭವಿಸಿದ್ದ ಸೋಲಿನ ಲೆಕ್ಕಾ ಚುಕ್ತಾ ಮಾಡುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. 

ಲಖನೌ ತಂಡವನ್ನು ಅವರದ್ದೇ ತವರಿನ ಮೈದಾನದಲ್ಲಿ ಬಗ್ಗುಬಡಿದ ಬೆನ್ನಲ್ಲೇ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಲಖನೌ ತಂಡದ ವೇಗದ ಬೌಲರ್‌ ನವೀನ್ ಉಲ್ ಹಕ್‌ ಹಾಗೂ ಮೆಂಟರ್‌ ಗೌತಮ್‌ ಗಂಭೀರ್ ಜತೆ ಮಾತಿನ ಚಕಮಕಿ ಕೂಡಾ ನಡೆಯಿತು. ಬೆಂಗ​ಳೂ​ರಿನ ಪಂದ್ಯ​ದಲ್ಲಿ ಆರ್‌​ಸಿಬಿ ಅಭಿ​ಮಾ​ನಿ​ಗ​ಳನ್ನು ಗಂಭೀ​ರ್‌ ಕೆಣ​ಕ್ಕಿ​ದ್ದಕ್ಕೆ ಆಕ್ರೋ​ಶಿ​ತ​ರಾ​ಗಿದ್ದ ಕೊಹ್ಲಿ, ಈ ಬಾರಿ ಮೈದಾ​ನ​ದಲ್ಲೇ ಬಾಯಿ ಮುಚ್ಚಿಸುವ ಸನ್ನೆ ಮೂಲಕ ಉತ್ತರ ಕೊಟ್ಟರು. ಪಂದ್ಯದ ಬಳಿಕವೂ ಇವ​ರಿ​ಬ್ಬರ ನಡುವೆ ತೀವ್ರ ಮಾತಿನ ಚಕ​ಮಕಿ ನಡೆ​ಯಿತು. ಈ ವೇಳೆ ಅವ​ರ​ನ್ನು ಆಟ​ಗಾ​ರರು, ಅಂಪೈ​ರ್‌​ಗಳು ಸಮಾ​ಧಾನಪಡಿ​ಸಲು ಯತ್ನಿ​ಸಿ​ದರು.

ಇನ್ನು ಈ ಘಟನೆಯ ಬಳಿಕ ಡ್ರೆಸ್ಸಿಂಗ್‌ ರೂಂನಲ್ಲಿ ಆರ್‌ಸಿಬಿ ಪಡೆ ಲಖನೌ ಎದುರಿನ ಗೆಲುವನ್ನು ಭರ್ಜರಿಯಾಗಿಯೇ ಸಂಭ್ರಮಾಚರಣೆ ಮಾಡಿತು. ಈ ಸಂದರ್ಭದಲ್ಲಿ ತಂಡವನ್ನು ಉದ್ದೇಶಿಸಿ ಮಾತನಾಡಿದ ವಿರಾಟ್ ಕೊಹ್ಲಿ, 'ಕೊಟ್ಟರೆ ಅದನ್ನು ವಾಪಾಸ್ ಪಡೆಯಲು ಸಿದ್ದರಿರಬೇಕು, ಇಲ್ಲದಿದ್ದರೆ, ಕೊಡಲು ಹೋಗಬಾರದು' ಎಂದು ಹೇಳಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಇನ್ನು ಇದಷ್ಟೇ ಅಲ್ಲದೇ ವಿರಾಟ್ ಕೊಹ್ಲಿ, ಈ ಪಂದ್ಯ ಮುಕ್ತಾಯದ ಬಳಿಕ ಗೂಢಾರ್ಥದ ಸ್ಟೋರಿಯನ್ನು ಪೋಸ್ಟ್‌ ಮಾಡಿದ್ದು, ರೋಮನ್‌ನ ಮಾಜಿ ಸಾಮ್ರಾಟ ಮಾರ್ಕಸ್ ಆರ್ಲಿಯಸ್‌ ಅವರ " ನಾವು ಕೇಳುವ ಪ್ರತಿಯೊಂದು ಅಭಿಪ್ರಾಯವಾಗಿರುತ್ತದೆ. ಆದರೆ ಸತ್ಯವಾಗಿರುವುದಿಲ್ಲ. ಪ್ರತಿಯೊಂದು ನಾವು ನೋಡುವುದು ದೃಷ್ಟಿಕೋನವಾಗಿರುತ್ತದೆ, ಆದರೆ ಸತ್ಯವಾಗಿರುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಹೇಗಿತ್ತು ಆರ್‌ಸಿಬಿ-ಲಖನೌ ನಡುವಿನ ಪಂದ್ಯ?:

150 ಕೂಡಾ ಉತ್ತಮ ಮೊತ್ತ ಎನಿ​ಸಿದ್ದ ಪಿಚ್‌​ನಲ್ಲಿ ಮೊದಲು ಬ್ಯಾಟಿಂಗ್‌​ಗಿ​ಳಿದ ಆರ್‌​ಸಿಬಿ ಗಳಿ​ಸಿದ್ದು 9 ವಿಕೆ​ಟ್‌ಗೆ ಕೇವಲ 126 ರನ್‌. ಬ್ಯಾಟ​ರ್‌​ಗಳು ನಿರೀ​ಕ್ಷಿತ ಮೊತ್ತ ಗಳಿಸ​ದಿ​ದ್ದ​ರೂ ಬೌಲ​ರ್‌​ಗಳು ತಂಡದ ಕೈಹಿ​ಡಿ​ದರು. ಬಿಗು ದಾಳಿ ನಡೆಸಿ 19.5 ಓವ​ರಲ್ಲಿ 108ಕ್ಕೆ ಆಲೌಟ್‌ ಮಾಡಿತು. ಶೂನ್ಯಕ್ಕೇ ವಿಕೆಟ್‌ ಕಳೆ​ದು​ಕೊಂಡ ತಂಡದ ಪೆವಿ​ಲಿ​ಯನ್‌ ಪರೇಡ್‌ ಕೊನೆವರೆಗೂ ನಿಲ್ಲಿ​ಲಿ​ಲ್ಲ. ಕೆ.ಗೌ​ತ​ಮ್‌​(23), ಕೃನಾ​ಲ್‌​(14), ಸ್ಟೋಯ್ನಿ​ಸ್‌​(13) ಬಿಟ್ಟರೆ ಉಳಿ​ದ​ವ​ರಾರ‍ಯರೂ ಮಿಂಚ​ಲಿಲ್ಲ.

IPL 2023 ಮೈದಾನದಲ್ಲೇ ಕಿತ್ತಾಡಿದ ಕೊಹ್ಲಿ-ಗಂಭೀರ್‌ಗೆ ಪಂದ್ಯದ ಶೇ.100 ರಷ್ಟು ದಂಡ!

ಕೇವಲ 38ಕ್ಕೆ ಪ್ರಮುಖ 5 ವಿಕೆಟ್‌ ಕಿತ್ತ ಆರ್‌​ಸಿಬಿ ಬೌಲರ್ಸ್‌ ಪಂದ್ಯದ ಮೇಲಿನ ಹಿಡಿತ ಕೈಜಾ​ರ​ದಂತೆ ನೋಡಿ​ಕೊಂಡರು. ಅಮಿತ್‌ ಮಿಶ್ರಾ​(​19), ನವೀನ್‌-ಉಲ್‌-ಹಕ್‌(13) ಹೋರಾಟ ತಂಡದ ಗೆಲು​ವಿಗೆ ಸಾಕಾ​ಗ​ಲಿಲ್ಲ. ಗಾಯ​ದಿಂದಾಗಿ ಕೊನೆ ಕ್ರಮಾಂಕ​ದಲ್ಲಿ ಕ್ರೀಸ್‌​ಗಿ​ಳಿದ ರಾಹು​ಲ್‌​(00) ಖಾತೆ ತೆರೆಯಲೂ ಸಾಧ್ಯ​ವಾ​ಗ​ಲಿ​ಲ್ಲ. ಜೋಶ್ ಹೇಜ​ಲ್‌​ವುಡ್‌, ಕರ್ಣ್ ಶರ್ಮಾ ತಲಾ 2 ವಿಕೆಟ್‌ ಪಡೆ​ದ​ರು.

ಆರಂಭಿ​ಕರೇ ಆಸ​ರೆ: ಆರ್‌​ಸಿ​ಬಿಯ ಮಾನ ಈ ಪಂದ್ಯ​ದಲ್ಲೂ ಕಾಪಾ​ಡಿದ್ದು ಆರಂಭಿ​ಕರು. ನಿಧಾ​ನ​ಗತಿ ಪಿಚ್‌​ನಲ್ಲಿ ರಕ್ಷ​ಣಾ​ತ್ಮಕ ಆಟಕ್ಕೆ ಒತ್ತು​ಕೊಟ್ಟಕೊಹ್ಲಿ(31) ಹಾಗೂ ಡು ಪ್ಲೆಸಿ(44) 9 ಓವ​ರಲ್ಲಿ 62 ರನ್‌ ಜೊತೆ​ಯಾ​ಟ​ವಾಡಿದರೂ ಆ ಬಳಿಕ ತಂಡ​ವನ್ನು ಮೇಲೆ​ತ್ತಲು ಯಾರೂ ಬರ​ಲಿಲ್ಲ. ಎಂದಿನಂತೆ ಮಧ್ಯಮ ಕ್ರಮಾಂಕದ ವೈಫ​ಲ್ಯ​ಕ್ಕೊ​ಳ​ಗಾದ ತಂಡ ನಿರೀ​ಕ್ಷಿ​ಸಿ​ದ್ದ​ಕ್ಕಿಂತಲೂ ಕಡಿಮೆ ಮೊತ್ತ ಗಳಿ​ಸಿತು. ಕಾರ್ತಿ​ಕ್‌​(16) ಬಿಟ್ಟರೆ ಉಳಿ​ದ್ಯಾವ ಬ್ಯಾಟರ್‌ ಕೂಡಾ ಎರ​ಡಂಕಿ ಮೊತ್ತ ಗಳಿ​ಸ​ಲಿಲ್ಲ.

ಸ್ಕೋರ್‌: ಆರ್‌​ಸಿಬಿ 20 ಓವ​ರಲ್ಲಿ 126/9( ಡು ಪ್ಲೆಸಿಸ್ 44, ಕೊಹ್ಲಿ 31, ನವೀನ್‌ 3-30), 
ಲಖನೌ 19.5 ಓವ​ರಲ್ಲಿ 108(ಗೌ​ತಮ್‌ 23, ಮಿಶ್ರಾ 19, ಹೇಜ​ಲ್‌​ವು​ಡ್‌​ 2-15) 

ಟರ್ನಿಂಗ್‌ ಪಾಯಿಂಟ್‌

ಆರ್‌​ಸಿಬಿ ನಿರೀ​ಕ್ಷಿ​ಸಿ​ದ್ದ​ಕ್ಕಿಂತ ಕಡಿಮೆ ಮೊತ್ತ ಗಳಿ​ಸಿ​ದರೂ, ಲಖ​ನೌನ ಬ್ಯಾಟ​ರ್‌​ಗ​ಳನ್ನು ಪವ​ರ್‌-ಪ್ಲೇನಲ್ಲೇ ಕಟ್ಟಿ​ಹಾ​ಕು​ವಲ್ಲಿ ಯಶ​ಸ್ವಿ​ಯಾ​ಯಿತು. 38ಕ್ಕೆ 6 ವಿಕೆಟ್‌ ಕಳೆ​ದು​ಕೊಂಡ ಬಳಿಕ ಸೂಕ್ತ ಜೊತೆ​ಯಾಟ ಸಿಗದೆ ಲಖನೌ ಸೋಲ​ನು​ಭ​ವಿ​ಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?