ಈ ವರ್ಷ ಐಪಿ​ಎಲ್‌ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಸುಳಿ​ವು

Suvarna News   | Asianet News
Published : May 24, 2020, 09:08 AM IST
ಈ ವರ್ಷ ಐಪಿ​ಎಲ್‌ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಸುಳಿ​ವು

ಸಾರಾಂಶ

ಈ ವರ್ಷ ಒಂದಾದರೂ ಟೂರ್ನಿ ನಡೆಯಲಿದೆ ಎನ್ನುವ ಮೂಲಕ ಐಪಿಎಲ್ ಆಯೋಜನೆಯ ಬಗ್ಗೆ ಆಶಾವಾದ ಹುಟ್ಟುಹಾಕುವಂತೆ ಸಂದೇಶವನ್ನು ಕ್ರೀಡಾಸಚಿವ ಕಿರಣ್ ರಿಜಿಜು ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವ​ದೆ​ಹ​ಲಿ(ಮೇ.24): ತಕ್ಷ​ಣಕ್ಕೆ ಭಾರ​ತ​ದ​ಲ್ಲಿ ಯಾವುದೇ ಅಂತಾ​ರಾ​ಷ್ಟ್ರೀಯ ಕ್ರೀಡಾ​ಕೂಟ ಇಲ್ಲವೇ ಟೂರ್ನಿ​ಗಳು ನಡೆ​ಯು​ವು​ದಿಲ್ಲ. ಆದರೆ ಈ ವರ್ಷ​ದಲ್ಲಿ ಒಂದಾ​ದ​ರೂ ಟೂರ್ನಿ ನಡೆ​ಯ​ಲಿದೆ ಎನ್ನುವ ಮೂಲಕ ಐಪಿ​ಎಲ್‌ ನಡೆ​ಯುವ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿ​ಜು ಸುಳಿವು ನೀಡಿ​ದ್ದಾರೆ. 

ಅಕ್ಟೋ​ಬರ್‌-ನವೆಂಬರ್‌ನಲ್ಲಿ ನಡೆ​ಯ​ಬೇ​ಕಿ​ರುವ ಐಸಿಸಿ ಟಿ20 ವಿಶ್ವ​ಕಪ್‌ ಮುಂದೂ​ಡ​ಲ್ಪ​ಟ್ಟರೆ ಆ ಅವ​ಧಿ​ಯಲ್ಲಿ ಐಪಿ​ಎಲ್‌ ಆಯೋ​ಜಿ​ಸಲು ಬಿಸಿ​ಸಿಐ ಯೋಜನೆ ರೂಪಿ​ಸು​ತ್ತಿ​ದೆ. ಈ ನಿಟ್ಟಿ​ನಲ್ಲಿ ಕ್ರೀಡಾ ಸಚಿ​ವರ ಹೇಳಿಕೆ ಮಹತ್ವ ಪಡೆ​ದು​ಕೊಂಡಿದೆ.

ಆಸ್ಟ್ರೇಲಿಯಾದಲ್ಲಿ ಈ ವರ್ಷ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಬಹುತೇಕ ಮುಂದೂಡಲ್ಪಡಲಿದೆ ಎನ್ನಲಾಗುತ್ತಿದೆ. ಹೀಗಾಗಿ ಭಾರತದಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿ ನಡೆದರೂ ಅಚ್ಚರಿಯಿಲ್ಲ. ಇವೆಲ್ಲವುಗಳಿಗಿಂತ ಹೆಚ್ಚಾಗಿ ಐಪಿಎಲ್ ಭಾರತದಲ್ಲಿ ನಡೆಯಬೇಕಿದ್ದರೆ ಕೊರೋನಾ ನಿಯಂತ್ರಣಕ್ಕೆ ಬರಬೇಕಿದೆ.

ಅಭ್ಯಾಸ ಆರಂಭಿ​ಸಿದ ದೇಶದ ಮೊದಲ ಕ್ರಿಕೆ​ಟಿಗ ಶಾರ್ದೂಲ್‌

ಪಾಲ್ಘರ್‌: ವೇಗಿ ಶಾರ್ದೂಲ್‌ ಠಾಕೂರ್‌ ಶನಿ​ವಾರ ಇಲ್ಲಿನ ಬೊಯ್ಸಾರ್‌ ಮೈದಾ​ನ​ದಲ್ಲಿ ಅಭ್ಯಾಸ ನಡೆ​ಸುವ ಮೂಲಕ, ದೇಶ​ದಲ್ಲಿ ಅಭ್ಯಾಸ ಪುನಾ​ರಂಭಿ​ಸಿದ ಮೊದಲ ಅಂತಾ​ರಾ​ಷ್ಟ್ರೀಯ ಕ್ರಿಕೆ​ಟಿಗ ಎನಿ​ಸಿ​ಕೊಂಡರು. 

ಕ್ರಿಕೆ​ಟಿ​ಗ​ರಿಗೆ ಮಾರ್ಗ​ಸೂಚಿ ಪ್ರಕ​ಟಿ​ಸಿದ ಐಸಿ​ಸಿ; ಬಾಲ್‌ ಮುಟ್ಟಿದ ಮೇಲೆ ಸ್ಯಾನಿ​ಟೈ​ಸರ್!

ಕೊರೋನಾ ಸೋಂಕು ವ್ಯಾಪ​ಕ​ವಾಗಿ ಹರ​ಡು​ತ್ತಿ​ರುವ ಹಿನ್ನೆಲೆಯಲ್ಲಿ 2 ತಿಂಗಳ ಹಿಂದೆ ಕ್ರಿಕೆಟ್‌ ಚಟು​ವ​ಟಿಕೆಯನ್ನು ಸ್ಥಗಿತಗೊಳಿ​ಸ​ಲಾ​ಗಿತ್ತು. ಹಸಿರು, ಕಿತ್ತಳೆ ವಲ​ಯ​ಗ​ಳಲ್ಲಿ ಕ್ರೀಡಾ​ಪ​ಟು​ಗ​ಳ ಅಭ್ಯಾ​ಸಕ್ಕೆ ಸರ್ಕಾರ ಅನು​ಮತಿ ನೀಡಿದ ಬೆನ್ನಲ್ಲೇ ಶಾರ್ದೂಲ್‌ ಮೈದಾ​ನ​ಕ್ಕಿ​ಳಿದು, ಸ್ಥಳೀಯ ಕ್ರಿಕೆ​ಟಿ​ಗರ ಜೊತೆ ನೆಟ್ಸ್‌ ಅಭ್ಯಾಸ ನಡೆ​ಸಿ​ದರು.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!