ಗಂಭೀರ್ ಸ್ಥಾನ ಅಪಾಯದಲ್ಲಿದೆ.. ಸತತ 2 ಸರಣಿ ಸೋಲು ಬೆನ್ನಲ್ಲೇ BCCI ಚಾರ್ಜ್‌

Published : Jul 10, 2026, 05:21 PM IST
gautam gambhir and shreyas iyer

ಸಾರಾಂಶ

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸತತ ಟಿ20 ಸರಣಿ ಸೋಲಿನಿಂದಾಗಿ ಭಾರತೀಯ ಕ್ರಿಕೆಟ್ ತಂಡ ಸಂಕಷ್ಟದಲ್ಲಿದೆ. ಈ ಹೀನಾಯ ಪ್ರದರ್ಶನದ ಹಿನ್ನೆಲೆಯಲ್ಲಿ, ಬಿಸಿಸಿಐ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಭವಿಷ್ಯದ ಬಗ್ಗೆ ಗಂಭೀರ ವಿಮರ್ಶೆ ನಡೆಸಲು ಮುಂದಾಗಿದೆ.

ಮುಂಬೈ: ಭಾರತೀಯ ಕ್ರಿಕೆಟ್‌ನಲ್ಲಿ ಈಗ ಅಲ್ಲೋಲ ಕಲ್ಲೋಲ ಶುರುವಾಗಿದೆ. ಐರ್ಲೆಂಡ್‌ನಂತಹ ಪುಟ್ಟ ತಂಡದ ಎದುರು ಸರಣಿ ಸೋತು ಮುಖಭಂಗ ಅನುಭವಿಸಿದ್ದ ಭಾರತ, ಈಗ ಇಂಗ್ಲೆಂಡ್ ವಿರುದ್ಧವೂ ಹೀನಾಯವಾಗಿ ಸರಣಿ ಕೈಚೆಲ್ಲಿದೆ. ಈ ಸತತ ಸೋಲುಗಳ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎಚ್ಚೆತ್ತುಕೊಂಡಿದ್ದು, ಮುಖ್ಯ ತರಬೇತುದಾರೆ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ.

ಸತತ 2 ಸರಣಿಗಳಲ್ಲಿ ಹೀನಾಯ ಪ್ರದರ್ಶನ

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸತತ ಎರಡು ಟಿ20 ಸರಣಿಗಳನ್ನು ಸೋತಿದೆ. ಮೊದಲು ಐರ್ಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ ಭಾರತ, ಈಗ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ 3-0 ಅಂತರದ ಅಜೇಯ ಹಿನ್ನಡೆ ಅನುಭವಿಸಿದೆ. ಈ ಸೋಲುಗಳು ಸಾಮಾನ್ಯವೇನಲ್ಲ; ಮೂರನೇ ಟಿ20ಯಲ್ಲಿ 125 ರನ್‌ಗಳಿಂದ ಸೋತರೆ, 4ನೇ ಟಿ20ಯಲ್ಲಿ 9 ವಿಕೆಟ್‌ಗಳಿಂದ ಸೋತಿರುವುದು ಬಿಸಿಸಿಐ ಕೆಂಗಣ್ಣಿಗೆ ಕಾರಣವಾಗಿದೆ.

ಗಂಭೀರ್ ಸ್ಥಾನಕ್ಕೆ ಸಂಚಕಾರ?

ಗೌತಮ್ ಗಂಭೀರ್ ಅವರ ಕೋಚ್ ಅವಧಿ 2027ರವರೆಗೆ ಇದೆ. ತಂಡದ ಇತ್ತೀಚಿನ ಪ್ರದರ್ಶನ ನೋಡಿ ಬಿಸಿಸಿಐ ಈಗ ಅವರ ಸಾಮರ್ಥ್ಯದ ಬಗ್ಗೆ ವಿಶ್ಲೇಷಣೆ ನಡೆಸಲು ಮುಂದಾಗಿದೆ. ಎಎನ್‌ಐ ವರದಿ ಪ್ರಕಾರ, ಕೋಚಿಂಗ್ ಸ್ಟಾಫ್ ಮತ್ತು ಆಟಗಾರರ ಪ್ರದರ್ಶನದ ಬಗ್ಗೆ ಆಳವಾದ ವಿಮರ್ಶೆ ನಡೆಸಲು ಬಿಸಿಸಿಐ ಸಜ್ಜಾಗಿದೆ. ವಿಶ್ವಕಪ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಕೆಳಗಿಳಿಸಿ, ಕಳೆದ 3 ವರ್ಷಗಳಿಂದ ಟಿ20 ತಂಡದಲ್ಲೇ ಇಲ್ಲದ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ.

ನಾಲ್ಕನೇ ಟಿ20 ಸೋಲಿನ ನಂತರ ಮಾತನಾಡಿದ್ದ ನಾಯಕ ಶ್ರೇಯಸ್ ಅಯ್ಯರ್, ತಂಡ ಈಗ ಪರಿವರ್ತನೆಯ ಹಂತ ಎಂದು ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಂಡದಲ್ಲಿರುವ ಬಹುತೇಕ ಆಟಗಾರರು ಅನುಭವಿಗಳಾಗಿದ್ದು, ಅವರನ್ನು ಹೊಸಬರು ಎಂದು ಕರೆಯುವುದು ಸರಿಯಲ್ಲ ಎಂಬುದು ಕ್ರಿಕೆಟ್ ಪ್ರೇಮಿಗಳ ವಾದವಾಗಿದೆ.

BCCI ಮುಂದೆ ಸವಾಲುಗಳು

ಐರ್ಲೆಂಡ್ ಎದುರು ಭಾರತ ಇದೇ ಮೊದಲ ಬಾರಿಗೆ ಸರಣಿ ಸೋತಿರುವುದು ಬಿಸಿಸಿಐಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಂಡದ ಕೋಚಿಂಗ್ ಪ್ಲಾನ್ ಮತ್ತು ಗಂಭೀರ್ ಅವರ ಕಾರ್ಯವೈಖರಿಯ ಬಗ್ಗೆ ಹಿರಿಯ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಮುಂದಿನ ಸರಣಿಗಳಿಗೆ ನಾಯಕತ್ವದಲ್ಲಿ ಬದಲಾವಣೆ ತರಬೇಕೇ ಅಥವಾ ಗಂಭೀರ್ ಅವರಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕೇ ಎಂಬ ಗೊಂದಲದಲ್ಲಿದೆ ಬಿಸಿಸಿಐ. ಒಟ್ಟಾರೆಯಾಗಿ ಇಂಗ್ಲೆಂಡ್ ವಿರುದ್ಧದ ಈ ಹೀನಾಯ ಪ್ರದರ್ಶನ ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಬದಲಾವಣೆಗೆ ಮುನ್ನುಡಿ ಬರೆಯುವ ಸಾಧ್ಯತೆಯಿದೆ. ಗೌತಮ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ಅವರ ತಲೆದಂಡವಾಗುತ್ತಾ? ಅಥವಾ ತಂಡ ಪುಟಿದೇಳುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಮೂವರಿಗೆ ಇಂಗ್ಲೆಂಡ್‌ ಪ್ರವಾಸವೇ ಕೊನೆಯ ಸರಣಿ! ಮತ್ತೆ ಮತ್ತೆ ಫೇಲ್ ಆಗ್ತಿದ್ದಾರೆ ಟೀಂ ಇಂಡಿಯಾದ ಈ ಆಟಗಾರರು
ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತಾ ಅದೊಂದು ರೀಸನ್ -ಹಾಗಿದ್ದರೆ ಹೊಣೆ ಯಾರು?