
ಬೆಂಗಳೂರು: ದುಲೀಪ್ ಟ್ರೋಫಿ ಪ್ರಥಮ ದರ್ಜೆ ಟೂರ್ನಿಯ ಫೈನಲ್ ಪಂದ್ಯ ಗುರುವಾರದಿಂದ ಇಲ್ಲಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಕೇಂದ್ರ ವಲಯ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಕೇಂದ್ರ ವಲಯವನ್ನು ರಜತ್ ಪಾಟೀದಾರ್ ಮುನ್ನಡೆಸುತ್ತಿದ್ದರೇ, ದಕ್ಷಿಣ ವಲಯ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಅಜರುದ್ದೀನ್ ಮುನ್ನಡೆಸುತ್ತಿದ್ದಾರೆ.
ಎರಡೂ ತಂಡಗಳ ಕೆಲ ಪ್ರಮುಖ ಆಟಗಾರರು ಭಾರತ 'ಎ' ತಂಡದಲ್ಲಿ ಸ್ಥಾನ ಪಡೆದ ಕಾರಣ, ಕೆಲ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಲಾಗಿದೆ. ದಕ್ಷಿಣ ವಲಯ ಪರ ಕರ್ನಾಟಕದ ಆರ್. ಸ್ಮರಣ್ ಹಾಗೂ ತಮಿಳುನಾಡಿನ ಆ್ಯಂಡ್ರೆ ಸಿದ್ದಾರ್ಥ್ ಮಿಂಚಲು ಸಿದ್ಧರಾಗಿದ್ದಾರೆ. ಎನ್. ಜಗದೀಶನ್ ಹಾಗೂ ದೇವದತ್ ಪಡಿಕ್ಕಲ್ರ ಸೇವೆ ದಕ್ಷಿಣ ವಲಯಕ್ಕೆ ಅಲಭ್ಯವಾಗಲಿದೆ.
ಅದೇ ರೀತಿ ಕೇಂದ್ರ ವಲಯ ತನ್ನ ತಾರಾ ಆಟಗಾರರಾದ ಯಶ್ ಠಾಕೂರ್, ಹರ್ಷ ದುಬೆ, ಖಲೀಲ್ ಅಹ್ಮದ್ ಹಾಗೂ ಮಾನವ್ ಸುಥಾರ್ ಇಲ್ಲದೇ ಆಡುತ್ತಿದೆ. ಹೀಗಾಗಿ ತಂಡ ವಿದರ್ಭದ ಯುವ ಬ್ಯಾಟರ್ ದಾನಿಶ್ ಮಾಲೆವಾರ್ ಮೇಲೆ ಎಲ್ಲರ ಕಣ್ಣಿದೆ. ಫೈನಲ್ ಪಂದ್ಯ 5 ದಿನಗಳ ಕಾಲ ನಡೆಯಲಿದೆ. ದಕ್ಷಿಣ ವಲಯ ಪರ ತನ್ಮಯ್ ಅಗರ್ವಾಲ್ ಹಾಗೂ ಮೋಹಿತ್ ಕಾಲೆ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಈ ಹಿಂದೆ ನಡೆದ ಎರಡು ಕ್ವಾರ್ಟರ್ ಫೈನಲ್ ಹಾಗೂ ಎರಡು ಸೆಮಿಫೈನಲ್ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದ್ದವು. ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿದ್ದವು. ಇದೀಗ ಫೈನಲ್ ಪಂದ್ಯದಲ್ಲಿ ಯಾವ ಫಲಿತಾಂಶ ಹೊರಬೀಳಲಿದೆ ಎನ್ನುವ ಕುತೂಹಲ ಜೋರಾಗಿದೆ.
ದಕ್ಷಿಣ ವಲಯ: ತನ್ಮಯ್ ಅಗರ್ವಾಲ್, ಮೋಹಿತ್ ಕಾಲೆ, ಸ್ಮರಣ್ ರವಿಚಂದ್ರನ್, ರಿಕಿ ಬುಯೆ, ಮೊಹಮ್ಮದ್ ಅಜರುದ್ದೀನ್(ವಿಕೆಟ್ ಕೀಪರ್/ನಾಯಕ), ಆಂಡ್ರೆ ಸಿದ್ದಾರ್ಥ್ ಸಿ, ಸಲ್ಮಾನ್ ನಿಜಾರ್, ಅಂಕಿತ್ ಶರ್ಮಾ, ಗುರ್ಜಪನೀತ್ ಸಿಂಗ್, ಎಂಡಿ ನಿದೇಶ್, ವಾಸುಕಿ ಕೌಶಿಕ್.
ಕೇಂದ್ರ ವಲಯ: ಯಶ್ ರಾಥೋಡ್, ದಾನಿಶ್ ಮಲೇವಾರ್, ಅಕ್ಷಯ್ ವಾಡ್ಕರ್, ರಜತ್ ಪಾಟೀದಾರ್(ನಾಯಕ), ಶುಭಂ ಶರ್ಮಾ, ಉಪೇಂದ್ರ ಯಾದವ್(ವಿಕೆಟ್ ಕೀಪರ್), ಸಾರಾನ್ಶ್ ಜೈನ್, ದೀಪಕ್ ಚಹರ್, ಆದಿತ್ಯ ಠಾಕ್ರೆ, ಕುಮಾರ್ ಕಾರ್ತಿಕೇಯ, ಕುಲ್ದೀಪ್ ಸೆನ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.