ಭಾರತ vs ಬಾಂಗ್ಲಾ ಟಿ20; ಮೊದಲ ಪಂದ್ಯಕ್ಕೆ ಧೂಳಿನ ಸಮಸ್ಯೆ!

Published : Oct 27, 2019, 11:46 AM IST
ಭಾರತ vs ಬಾಂಗ್ಲಾ ಟಿ20; ಮೊದಲ ಪಂದ್ಯಕ್ಕೆ ಧೂಳಿನ ಸಮಸ್ಯೆ!

ಸಾರಾಂಶ

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸರಣಿಗಿದ್ದ ಹಲವು ಅಡೆ ತಡೆಗಳು ನಿವಾರಣೆಯಾದ ಬೆನ್ನಲ್ಲೇ, ಇದೀಗ ಧೂಳು ಹಾಗೂ ಆಮ್ಲಜನಕದ ಸಮಸ್ಯೆ ಎದುರಾಗಿದೆ. ಮೊದಲ ಪಂದ್ಯ ಆಯೋಜನೆಯೇ ಬಿಸಿಸಿಐ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನವ​ದೆ​ಹ​ಲಿ(ಅ.27): ಭಾರತ ಹಾಗೂ ಬಾಂಗ್ಲಾ​ದೇಶ ನಡುವಣ ಟಿ20 ಸರಣಿ ನ.3ರಿಂದ ಆರಂಭ​ವಾ​ಗ​ಲಿದೆ. ಆದರೆ ರಾಷ್ಟ್ರ ರಾಜ​ಧಾ​ನಿಯ ವಾಯು ಮಾಲಿನ್ಯ ಆಯೋ​ಜ​ಕ​ರ ತಲೆ​ನೋವಿಗೆ ಕಾರ​ಣ​ವಾ​ಗಿದೆ. ಇಲ್ಲಿನ ಫಿರೋಜ್‌ ಷಾ ಕೋಟ್ಲಾದಲ್ಲಿ ಮೊದಲ ಟಿ20 ಪಂದ್ಯ ನಡೆ​ಯ​ಲಿದೆ. ಆದರೆ ಇಲ್ಲಿನ ಕಳಪೆ ಗುಣ​ಮ​ಟ್ಟದ ಆಮ್ಲ​ಜ​ನ​ಕ​ದಿಂದ ಆಟ​ಗಾ​ರರು, ಪ್ರೇಕ್ಷ​ಕ​ರಿಗೆ ಸಮ​ಸ್ಯೆ ಉಂಟಾ​ಗುವ ಸಾಧ್ಯ​ತೆ​ಯಿದೆ.

ಇದನ್ನೂ ಓದಿ: ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ

ದೆಹಲಿಯ ಅರುಣ್ ಜೇಟ್ಲಿ ಕೀಡಾಂಗಣದಲ್ಲಿ(ಫಿರೋಷ್ ಷಾ ಕೋಟ್ಲಾ ಮೈದಾನ) ಮೊದಲ ಪಂದ್ಯ ಆಯೋಜಿಸಲಾಗಿದೆ. ನವೆಂಬರ್ 3 ರಂದು ಮೊದಲ ಪಂದ್ಯ ನಡೆಯಲಿದೆ. ಆದರೆ ಈಗಾಗಲೇ ದೆಹಲಿಯಲ್ಲಿ ಧೂಳು ಹೆಚ್ಚಾಗಿದ್ದು, ಹಲವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಧೂಳಿನಿಂದ ಸಂಪೂರ್ಣ ದೆಹಲಿ ಮುಳುಹೋಗಿದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳಿಗೆ ಬಾಲ್ ಕಾಣದಿರುವ ಸಾಧ್ಯತೆ ಕೂಡ ಹೆಚ್ಚಾಗಿದೆ.

ಇದನ್ನೂ ಓದಿ: ಪ್ರತಿಭಟನೆ ನಿಲ್ಲಿಸಿದ ಬಾಂಗ್ಲಾದೇಶಕ್ಕೆ ಮತ್ತೊಂದು ಶಾಕ್!

ಡಿಸೆಂಬರ್‌ 2017ರ ಟೆಸ್ಟ್‌ನಲ್ಲಿ ಶ್ರೀಲಂಕಾ ಆಟ​ಗಾ​ರ​ರಿಗೆ ಉಸಿ​ರಾಟದ ಸಮಸ್ಯೆ ಎದು​ರಾ​ಗಿದ್ದು, ಅಂದಿನ ಆಮ್ಲ​ಜ​ನ​ಕದ ಗುಣ​ಮ​ಟ್ಟ‘ಬಹಳ ಕಳಪೆ’ ಆಗಿತ್ತು. ಶ್ರೀಲಂಕಾ ಆಟ​ಗಾ​ರರು ಮುಖ​ಗ​ವಚ ಧರಿ​ಸಿ​ ಮೈದಾ​ನಕ್ಕೆ ಇಳಿ​ದಿ​ದ್ದ​ರು. ಆದರೆ ಡೆಲ್ಲಿ ಟಿ20 ರಾತ್ರಿ ನಡೆ​ಯಲಿದ್ದು, ಆಮ್ಲ​ಜ​ನ​ಕದ ಸಮ​ಸ್ಯೆ​ಯಾ​ಗದು ಎಂಬ ನಿರೀ​ಕ್ಷೆಯೂ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್