
ಡಬ್ಲಿನ್(ಜೂ.27): ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ಕ್ರಿಕೆಟ್ ತಂಡವು 7 ವಿಕೆಟ್ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ಹಾರ್ದಿಕ್ ಪಾಂಡ್ಯ ಗೆಲುವಿನ ಸಿಹಿ ಅನುಭವಿಸಿದರು. ಮಳೆಯ ಅಡಚಣೆಯ ನಡುವೆಯೂ ಹಾರ್ದಿಕ್ ಪಾಂಡ್ಯ ಪಡೆ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಬಳಿಕ ಸುರಿದ ಭಾರೀ ಮಳೆಯಿಂದಾಗಿ ಪಂದ್ಯ ಸುಮಾರು 3 ಗಂಟೆ ತಡವಾಗಿ ಆರಂಭವಾಯಿತು. ಹೀಗಾಗಿ ಪಂದ್ಯವನ್ನು ತಲಾ 12 ಓವರ್ಗೆ ಸೀಮಿತಗೊಳಿಸಲಾಗಿತ್ತು. ಮೊದಲ ಬ್ಯಾಟ್ ಮಾಡಿದ ಐರ್ಲೆಂಡ್ 4 ವಿಕೆಟ್ಗೆ 108 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ 9.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಸಾಧಿಸಿತು. ಆರಂಭದಲ್ಲೇ ಸ್ಫೋಟಕ ಆಟವಾಡಿದ ಇಶಾನ್ ಕಿಶನ್ (Ishan Kishan) 11 ಎಸೆತಗಳಲ್ಲಿ 26 ರನ್ ಸಿಡಿಸಿದರು. ಸೂರ್ಯಕುಮಾರ್ ಯಾದವ್ ತಾವೆದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ದೀಪಕ್ ಹೂಡಾ (Deepak Hooda) -ಹಾರ್ದಿಕ್ ಪಾಂಡ್ಯ(24) ಜೋಡಿ 64 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಿತು. ಹೂಡಾ 47 ರನ್ ಗಳಿಸಿದರು.
ಟೆಕ್ಟರ್ ಸ್ಫೋಟಕ ಫಿಫ್ಟಿ
ಆರಂಭದಲ್ಲೇ ಕುಸಿತ ತಂಡ ಐರ್ಲೆಂಡ್ 4 ಓವರ್ಗಳ ಪವರ್ಪ್ಲೇ ಮುಕ್ತಾಯದ ವೇಳೆಗೆ 3 ವಿಕೆಟ್ಗೆ ಕೇವಲ 22 ರನ್ ಗಳಿಸಿತ್ತು. ಬಳಿಕ ಸ್ಫೋಟಕ ಆಟಕ್ಕೆ ಒತ್ತುಕೊಟ್ಟ ತಂಡ 2 ಓವರಲ್ಲಿ 30 ರನ್ ದೋಚಿತು. ಹ್ಯಾರಿ ಟೆಕ್ಟರ್ ಭಾರತೀಯ ಬೌಲರ್ಗಳನ್ನು ಚೆಂಡಾಡಿದರು. ಅವರು ಕೇವಲ 33 ಎಸೆತಗಳಲ್ಲಿ 64 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಅವರ ಇನ್ನಿಂಗ್್ಸನಲ್ಲಿ 6 ಬೌಂಡರಿ, 3 ಸಿಕ್ಸರ್ ಒಳಗೊಂಡಿತ್ತು. ಭುವನೇಶ್ವರ್ 3 ಓವರಲ್ಲಿ 1 ಮೇಡನ್ ಸಹಿತ 16 ರನ್ ನೀಡಿ 1 ವಿಕೆಟ್ ಕಿತ್ತರೆ, ಚಹಲ್ 11 ರನ್ಗೆ 1 ವಿಕೆಟ್ ಪಡೆದರು.
ಸ್ಕೋರ್:
ಐರ್ಲೆಂಡ್ 12 ಓವರಲ್ಲಿ 108/4(ಟೆಕ್ಟರ್ 64, ಚಹಲ್ 1-11, ಭುವನೇಶ್ವರ್ 1-16)
ಭಾರತ 9.2 ಓವರಲ್ಲಿ 111(ಹೂಡಾ 47*, ಇಶಾನ್ 26, ಯಂಗ್ 2-18)
ಅಭ್ಯಾಸ ಪಂದ್ಯ: ಭಾರತದ-ಲೀಸೆಸ್ಟರ್ಶೈರ್ ಪಂದ್ಯ ಡ್ರಾ
ಲೀಸೆಸ್ಟರ್: ಭಾರತ ಹಾಗೂ ಲೀಸೆಸ್ಟರ್ಶೈರ್ ನಡುವಿನ 4 ದಿನಗಳ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಗೆಲುವಿಗೆ 367 ರನ್ ಗುರಿ ಪಡೆದಿದ್ದ ಲೀಸೆಸ್ಟರ್ಶೈರ್ 4 ವಿಕೆಟ್ಗೆ 219 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲು ನಿರ್ಧರಿಸಲಾಯಿತು. ಲೀಸೆಸ್ಟರ್ಶೈರ್ ಪರ ಶುಭ್ಮನ್ ಗಿಲ್ 62, ಲೂಯಿಸ್ ಕಿಂಬೆರ್ ಔಟಾಗದೆ 58 ರನ್ ಸಿಡಿಸಿದರು. ಭಾರತದ ಪರ ಆರ್.ಅಶ್ವಿನ್ 2 ವಿಕೆಟ್ ಕಿತ್ತರು.
#IREvIND ಐರ್ಲೆಂಡ್-ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ!
ಇದಕ್ಕೂ ಮೊದಲು 2 ರನ್ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್್ಸ ಆರಂಭಿಸಿದ ಭಾರತ 6 ವಿಕೆಟ್ 343 ರನ್ ಗಳಿಸಿ ಇನ್ನಿಂಗ್್ಸ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್್ಸನಲ್ಲಿ ಭಾರತ 8 ವಿಕೆಟ್ಗೆ 246 ರನ್ ಗಳಿಸಿದ್ದರೆ, ಲೀಸೆಸ್ಟರ್ಶೈರ್ 244ಕ್ಕೆ ಆಲೌಟ್ ಆಗಿತ್ತು. ಕನ್ನಡಿಗ ಪ್ರಸಿದ್್ಧ ಕೃಷ್ಣ ಹಾಗೂ ಜಸ್ಪ್ರೀತ್ ಬುಮ್ರಾ ಪಂದ್ಯದಲ್ಲಿ ಎರಡೂ ತಂಡಗಳ ಬೌಲಿಂಗ್ ಮಾಡಿದರೆ, ಹನುಮ ವಿಹಾರಿ ಮತ್ತು ಶುಭ್ಮನ್ ಗಿಲ್ ಎರಡೂ ತಂಡಗಳಲ್ಲಿ ಬ್ಯಾಟ್ ಮಾಡುವ ಅವಕಾಶ ಪಡೆದುಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.