ಧೋನಿ ವಿಕೆಟ್‌ ಉಡೀಸ್‌ ಮಾಡಿದ ಹರಿಶಂಕರ್ ರೆಡ್ಡಿ: ವಿಡಿಯೋ ವೈರಲ್

Suvarna News   | Asianet News
Published : Mar 18, 2021, 05:51 PM IST
ಧೋನಿ ವಿಕೆಟ್‌ ಉಡೀಸ್‌ ಮಾಡಿದ ಹರಿಶಂಕರ್ ರೆಡ್ಡಿ: ವಿಡಿಯೋ ವೈರಲ್

ಸಾರಾಂಶ

ಚೆನ್ನೈ ಸೂಪರ್‌ ಕಿಂಗ್ಸ್‌ ಯುವ ವೇಗಿ ಹರಿಶಂಕರ್‌ ರೆಡ್ಡಿ ಅಭ್ಯಾಸದ ವೇಳೆ ಧೋನಿ ವಿಕೆಟ್‌ ಉಡೀಸ್‌ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

ಚೆನ್ನೈ(ಮಾ.18): ಟೀಂ ಇಂಡಿಯಾ ಮಾಜಿ ನಾಯಕ ಎಂ. ಎಸ್‌. ಧೋನಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರ್ಜರಿಯಾಗಿಯೇ ತಯಾರಿ ನಡೆಸುತ್ತಿದ್ದಾರೆ. 4ನೇ ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಈಗಿನಿಂದಲೇ ಭರ್ಜರಿ ತಯಾರಿ  ಆರಂಭಿಸಿದ್ದಾರೆ.

ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್‌ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು, ಏಪ್ರಿಲ್‌ 30ರಿಂದ ಮೇ 30ರ ವರೆಗೆ ಭಾರತದಲ್ಲೇ ಪಂದ್ಯಾವಳಿಗಳು ಜರುಗಲಿವೆ. ಕೊರೋನಾ ಕಾರಣದಿಂದಾಗಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಯುಎಇನಲ್ಲಿ ನಡೆದಿತ್ತು.    

ಇದೀಗ ಚೆನ್ನೈ ಸೂಪರ್‌ ಕಿಂಗ್ಸ್‌ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದು, ಮೈದಾನದಲ್ಲಿ ಸಾಕಷ್ಟು ಬೆವರು ಹರಿಸುತ್ತಿದೆ. ಇದೀಗ ಸಿಎಸ್‌ಕೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, 22 ವರ್ಷದ ಯುವ ವೇಗಿ ಹರಿಶಂಕರ್‌ ರೆಡ್ಡಿ ನಾಯಕ ಧೋನಿಯನ್ನು ಕ್ಲೀನ್‌ ಬೌಲ್ಡ್‌ ಮಾಡಿದ್ದಾರೆ. ಬೌಲಿಂಗ್ ವೇಗದ ರಬಸಕ್ಕೆ ವಿಕೆಟ್ ಉಡೀಸ್‌ ಆಗಿ ಹೋಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಬುಮ್ರಾ ದಂಪತಿಗೆ ಮಾಲ್ಡೀವ್ಸ್‌ ಹನಿಮೂನ್ ಟ್ರಿಪ್‌ ಐಡಿಯಾ ಕೊಟ್ಟ ರಾಜಸ್ಥಾನ ರಾಯಲ್ಸ್‌..!

ಕಳೆದ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಫ್ರಾಂಚೈಸಿ 20 ಲಕ್ಷ ರುಪಾಯಿ ಮೂಲ ಬೆಲೆಗೆ ಹರಿಶಂಕರ್ ರೆಡ್ಡಿಯನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 2018ರಲ್ಲಿ ಆಂಧ್ರ ಪ್ರದೇಶ ಪರ ದೇಶಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಮಧ್ಯಮ ಕ್ರಮಾಂಕದ ವೇಗಿ ಹರಿಶಂಕರ್ ರೆಡ್ಡಿ ಇದುವರೆಗೂ ರಾಜ್ಯ ತಂಡದ ಪರ 13 ಟಿ20 ಪಂದ್ಯಗಳನ್ನಾಡಿ 19 ವಿಕೆಟ್‌ ಕಬಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾನು ಫಾರ್ಮ್ ಕಳೆದುಕೊಂಡಿಲ್ಲ, ಆದ್ರೆ..! 3ನೇ ಟಿ20 ಪಂದ್ಯದ ಗೆಲುವಿನ ಬೆನ್ನಲ್ಲೇ ಸೂರ್ಯ ಅಚ್ಚರಿ ಹೇಳಿಕೆ!
ಭಾರತ ಎದುರು ಹೀನಾಯ ಸೋಲಿಗೆ ಅಚ್ಚರಿ ಕಾರಣ ಬಿಚ್ಚಿಟ್ಟ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಮಾರ್ಕ್‌ರಮ್!