ರೋಸಿ ಹೋದ ಟೀಂ ಇಂಡಿಯಾ ಕೋಚ್.. 'ಟೆಸ್ಟ್ ಕ್ರಿಕೆಟ್‌ಗೆ ಫ್ರೀ ಹಿಟ್ ತನ್ನಿ' ಎಂದು ಆಗ್ರಹಿಸಿದ್ದೇಕೆ?

Published : Aug 27, 2026, 08:37 AM IST
test cricket free hit

ಸಾರಾಂಶ

ಟೆಸ್ಟ್ ಕ್ರಿಕೆಟ್‌ನಲ್ಲಿ ನೋ-ಬಾಲ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಏಕದಿನ ಮತ್ತು ಟಿ20 ಮಾದರಿಯಂತೆ 'ಫ್ರೀ ಹಿಟ್' ನಿಯಮವನ್ನು ಪರಿಚಯಿಸಬೇಕು ಎಂದು ಭಾರತದ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಳೆ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಅವರ ಈ ಸಲಹೆ ಯಾಕೆ ಗೊತ್ತಾ?

ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ಕುತೂಹಲಕಾರಿ ತಿರುವು ಪಡೆದಿದೆ. ಈ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್‌ಗಳು ಮಾಡುತ್ತಿರುವ ಒಂದು ತಪ್ಪು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದುವೇ 'ನೋ-ಬಾಲ್' (No-Ball). ಈ ಸಮಸ್ಯೆಯನ್ನು ಹೋಗಲಾಡಿಸಲು ಟೀಂ ಇಂಡಿಯಾದ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಳೆ ಅವರು ಟೆಸ್ಟ್ ಕ್ರಿಕೆಟ್‌ಗೆ ಸೀಮಿತ ಓವರ್‌ಗಳ ಕ್ರಿಕೆಟ್‌ನ ನಿಯಮವೊಂದನ್ನು ತರಲು ಸಲಹೆ ನೀಡಿದ್ದಾರೆ.

ಏನಿದು ಘಟನೆ?

ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಭಾರತೀಯ ಸ್ಪಿನ್ನರ್‌ಗಳು ಈವರೆಗೆ ಬರೋಬ್ಬರಿ 10 ನೋ-ಬಾಲ್‌ಗಳನ್ನು ಎಸೆದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಸ್ಪಿನ್ನರ್‌ಗಳು ಎಸೆದ ಅತಿ ಹೆಚ್ಚು ನೋ-ಬಾಲ್‌ಗಳು ಇದಾಗಿವೆ. (ಈ ಪಟ್ಟಿಯಲ್ಲಿ ಅಫ್ಘಾನಿಸ್ತಾನ 14 ನೋ-ಬಾಲ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದೆ). ರವೀಂದ್ರ ಜಡೇಜಾ ಮತ್ತು ಸಾರಾಂಶ ಜೈನ್ ಅವರಂತಹ ಅನುಭವಿಗಳು ಕೂಡ ಈ ತಪ್ಪು ಮಾಡುತ್ತಿರುವುದು ತಂಡಕ್ಕೆ ಚಿಂತೆಯ ವಿಷಯವಾಗಿದೆ.

ಬಹುತುಳೆ 'ಫ್ರೀ ಹಿಟ್' ಫಾರ್ಮುಲಾ

ನಾಲ್ಕನೇ ದಿನದ ಆಟದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಯಿರಾಜ್ ಬಹುತುಳೆ, ನೋ-ಬಾಲ್ ಸಮಸ್ಯೆ ನಿವಾರಿಸಲು ಟೆಸ್ಟ್ ಕ್ರಿಕೆಟ್‌ನಲ್ಲೂ ಏಕದಿನ ಮತ್ತು ಟಿ20 ಮಾದರಿಯಂತೆ 'ಫ್ರೀ ಹಿಟ್' (Free Hit) ನಿಯಮವನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದ್ದಾರೆ.

ನಾನು ಕ್ರಿಕೆಟ್ ನಿಯಮಗಳ ರಕ್ಷಕನಲ್ಲ, ಆದರೆ ಟೆಸ್ಟ್‌ನಲ್ಲಿ ಫ್ರೀ ಹಿಟ್ ನಿಯಮ ಬಂದರೆ ನೋ-ಬಾಲ್‌ಗಳ ಸಂಖ್ಯೆ ಖಂಡಿತವಾಗಿಯೂ ಕಡಿಮೆಯಾಗುತ್ತದೆ. ಯಾವ ತಂಡವೂ ನೋ-ಬಾಲ್ ಎಸೆದು ಎದುರಾಳಿಗೆ ಹೆಚ್ಚುವರಿ ರನ್ ಮತ್ತು ಹೆಚ್ಚುವರಿ ಎಸೆತವನ್ನು ನೀಡಲು ಬಯಸುವುದಿಲ್ಲ. ಈ ಭಯ ಬೌಲರ್‌ಗಳಲ್ಲಿ ಶಿಸ್ತು ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಸ್ಪಿನ್ನರ್‌ಗಳಿಂದ ಈ ತಪ್ಪು ಏಕೆ?

ಬೌಲರ್‌ಗಳು ಹೆಚ್ಚು ವಿಕೆಟ್ ಪಡೆಯುವ ಉತ್ಸಾಹದಲ್ಲಿ ತಮ್ಮ ಪೂರ್ಣ ಶಕ್ತಿಯನ್ನು ಹಾಕಲು ಪ್ರಯತ್ನಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅಜಾಗರೂಕತೆಯಿಂದ ಕ್ರೀಸ್ ದಾಟುತ್ತಾರೆ (Overstepping). ಇದನ್ನು ತಡೆಯಲು ಜಡೇಜಾ ಮತ್ತು ಸಾರಾಂಶ ಜೈನ್ ಅವರೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಕೋಚ್ ತಿಳಿಸಿದ್ದಾರೆ. ಬಹುತುಳೆ ಅವರು ಈ ಮಾತನ್ನು ಸ್ವಲ್ಪ ಮಟ್ಟಿಗೆ ತಮಾಷೆಯಾಗಿ ಹೇಳಿದ್ದರೂ ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲರ್‌ಗಳ ಶಿಸ್ತಿನ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಟೆಸ್ಟ್‌ನಲ್ಲೂ ಫ್ರೀ ಹಿಟ್ ಬಂದರೆ, ಅದು ಬ್ಯಾಟರ್‌ಗಳಿಗೆ ಮತ್ತಷ್ಟು ಅನುಕೂಲವಾಗುವುದರಲ್ಲಿ ಸಂಶಯವಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊಲಂಬೊ ಟೆಸ್ಟ್‌ನಲ್ಲಿ ಭಾರತಕ್ಕೆ ಭರ್ಜರಿ ಗೆಲುವಿನ ನಿರೀಕ್ಷೆ: ಫಾಲೋಆನ್ ಬಳಿಕವೂ ಸಂಕಷ್ಟದಲ್ಲಿ ಲಂಕಾ
Cricket: ಅಂದು ಕೋಟಿ ಅಭಿಮಾನಿಗಳ ಚಪ್ಪಾಳೆ, ಇಂದು ಸಣ್ಣ ನೌಕರಿ; ಬದುಕಿನ ಬಂಡಿ ಎಳೆಯಲು ಸಾಮಾನ್ಯ ಕೆಲಸಕ್ಕೆ ಇಳಿದ 5 ಕ್ರಿಕೆಟ್ ದಿಗ್ಗಜರು!