ಸೈನ್ಯ ಸೇರಬೇಕಾಗಿದ್ದ ಮುಖೇಶ್‌ ಕುಮಾರ್‌ ಕ್ರಿಕೆಟರ್​ ಆದದ್ದೇ ರೋಚಕ..!

Published : Jun 26, 2023, 04:51 PM IST
ಸೈನ್ಯ ಸೇರಬೇಕಾಗಿದ್ದ ಮುಖೇಶ್‌ ಕುಮಾರ್‌ ಕ್ರಿಕೆಟರ್​ ಆದದ್ದೇ ರೋಚಕ..!

ಸಾರಾಂಶ

2ನೇ ಬಾರಿ ಟೀಂ ಇಂಡಿಯಾಗೆ ಎಂಟ್ರಿ ನೀಡಿದ ಟ್ಯಾಕ್ಸಿವಾಲಾ ಪಶ್ಚಿಮ ಬಂಗಾಳ ಮೂಲದ ವೇಗಿ ಮುಕೇಶ್‌ ಕುಮಾರ್‌ಗೆ ಸ್ಥಾನ ವಿಂಡೀಸ್ ಎದುರಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ

ಮುಂಬೈ(ಜೂ.26): ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿಗೆ ಆಯ್ಕೆ ಸಮಿತಿ ಟೀಂ ಇಂಡಿಯಾವನ್ನ ಆಯ್ಕೆ ಮಾಡಿದೆ. ಈ ಸರಣಿಯಿಂದ  ಸೀನಿಯರ್ ಪೇಸರ್ ಮೊಹಮ್ಮದ್ ಶಮಿಗೆ ರೆಸ್ಟ್ ನೀಡಲಾಗಿದೆ. ಮೊಹಮ್ಮದ್ ಶಮಿ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ಮತ್ತೊಬ್ಬ ವೇಗಿ ಮುಕೇಶ್‌ ಕುಮಾರ್​ಗೆ ಚಾನ್ಸ್ ನೀಡಿದೆ. ಈ ಹಿಂದೆಯೆ ಮುಖೇಶ್​ ಟೀಂ ಇಂಡಿಯಾಗೆ ಆಯ್ಕೆಯಾಗಿದ್ರು. ಆದ್ರೆ, ಪ್ಲೇಯಿಂಗ್ ಇಲೆವೆನ್​ನಲ್ಲಿ ಚಾನ್ಸ್ ಸಿಗಲಿಲ್ಲ. ದೇಶೀಯ ಕ್ರಿಕೆಟ್ ಮತ್ತು IPL​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟ್ಯಾಕ್ಸಿ ಚಾಲಕನ ಮಗನಿಗೆ ಆಯ್ಕೆ ಸಮಿತಿ ಮತ್ತೆ ಅವಕಾಶ ನೀಡಿದೆ. 

ಯೆಸ್, ಬಡ ಕುಟುಂಬಕ್ಕೆ ಸೇರಿದ ಮುಕೇಶ್‌ ಕುಮಾರ್​ ಒಬ್ಬ ಟ್ಯಾಕ್ಸಿವಾಲಾನ ಮಗ. ಮುಕೇಶ್‌ ಕುಮಾರ್ ತಂದೆ ಕಾಶೀನಾಥ್ ಸಿಂಗ್ ಕೋಲ್ಕತ್ತಾದಲ್ಲಿ ಟ್ಯಾಕ್ಸಿ ಚಾಲಕರಾಗಿದ್ರು. ದೇಶೀಯ ಕ್ರಿಕೆಟ್​ನಲ್ಲಿ ಪಶ್ಚಿಮ ಬಂಗಾಳ ಪರ ಆಡೋ ಮುಖೇಶ್​, ಮೂಲತ: ಬಿಹಾರದವರು. ಬಿಹಾರ್​ದ ಗೋಪಾಲ್ ಗಂಜ್​ ಮುಖೇಶ್ ಸ್ವಂತ ಊರು. 

ಸೈನ್ಯ ಸೇರಬೇಕಾಗಿದ್ದವ ಕ್ರಿಕೆಟರ್​ ಆದದ್ದೇ ರೋಚಕ..!

ಮುಕೇಶ್​ ಚಿಕ್ಕಂದಿನಲ್ಲೇ ಕ್ರಿಕೆಟರ್ ಆಗಬೇಕು ಅಂತ ಕನಸು ಕಂಡಿದ್ರು. ಆದ್ರೆ, ಬಿಹಾರದ ಯುವಕರು ಹೆಚ್ಚಾಗಿ ಭಾರತೀಯ ಸೈನ್ಯ ಸೇರಿಕೊಳ್ತಾರೆ. ಮಖೇಶ್​ನ ಕೂಡ ಆರ್ಮಿಗೆ ಸೇರಿಸಬೇಕನ್ನೋದು ಅವ್ರ ತಂದೆಯ ಆಸೆಯಾಗಿತ್ತು. ಇದರಿಂದ ಮುಕೇಶ್ CRPF ಉದ್ಯೋಗಕ್ಕಾಗಿ ಪರೀಕ್ಷೆಯನ್ನೂ ಬರಿತಾರೆ. ಆದ್ರೆ, ಕೆಲ ಮೆಡಿಕಲ್ ಟೆಸ್ಟ್​ನಲ್ಲಿ  ಪೇಲ್ ಆಗಿದ್ದರಿಂದ, ​ಕುಟುಂಬದವರ ಆಸೆ ಪೂರೈಸಲು ಮುಕೇಶ್​​ಗೆ ಸಾಧ್ಯವಾಗ್ಲಿಲ್ಲ. ಇದರಿಂದ ಮುಕೇಶ್ ಕ್ರಿಕೆಟ್​ ಮೇಲೆ ಮತ್ತಷ್ಟು ಆಸಕ್ತಿ ಬೆಳೆಸಿಕೊಂಡ್ರು. 

2009ರಲ್ಲಿ ಬಿಹಾರ್ ಅಂಡರ್​ 19 ತಂಡಕ್ಕೆ ಮುಕೇಶ್ ಎಂಟ್ರಿ ನೀಡಿದ್ರು. ಆದ್ರೆ, ಮುಕೇಶ್ ತಂದೆಗೆ ಮಗ ಕ್ರಿಕೆಟರ್ ಆಗೋದು ಎಳ್ಳಷ್ಟು ಇಷ್ಟವಿರಲಿಲ್ಲ. ಇದರಿಂದ ಮಗನನ್ನ ಕೋಲ್ಕತ್ತಾಗೆ ಕರೆಸಿಕೊಂಡ್ರು. ಕೋಲ್ಕತ್ತಾಗೆ ಹೋದ್ರು ಮುಕೇಶ್​ ಕ್ರಿಕೆಟ್​ನ ಬಿಡಲಿಲ್ಲ. ಅಲ್ಲಿನ ಕ್ಲಬ್​ಗೆ ಸೇರಿಕೊಂಡ ಮುಕೇಶ್, ಡಿವಿಜನ್ ಲೀಗ್​ ಕ್ರಿಕೆಟ್​  ಮೂಲಕ ದಿನಕ್ಕೆ  400-500 ರೂಪಾಯಿ ಗಳಿಸಿ ತಂದೆಗೆ ನೆರವಾದ್ರು. 

Yashasvi Jaiswal: ಟೆಸ್ಟ್ ಕ್ರಿಕೆಟ್​ನಲ್ಲಿ ಅಬ್ಬರಿಸಲು ರೆಡಿಯಾದ ಪಾನಿಪೂರಿವಾಲಾ..!

2014ರಲ್ಲಿ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ವಿಷನ್ 2020 ಟ್ಯಾಲೆಂಟ್ ಹಂಟ್ ಕಾರ್ಯಕ್ರಮ ನಡೆಸಿತ್ತು. ಇದು ಮುಕೇಶ್​ ಕ್ರಿಕೆಟ್​ ಕರಿಯರ್​ಗೆ ಬಿಗ್ ಟರ್ನಿಂಗ್ ಪಾಯಿಂಟ್ ಆಯ್ತು. ಬೆಂಗಾಲ್ ಟೀಂ ಬೌಲಿಂಗ್ ಕೋಚ್ ಆಗಿದ್ದ ರಣ್​ದೀಪ್ ಸಿಂಗ್, ಮುಕೇಶ್‌ ಕುಮಾರ್ ಬೌಲಿಂಗ್​ಗೆ ಫಿದಾ ಆದ್ರು. ತಕ್ಷಣವೇ ಬೆಂಗಾಲ್ ರಣಜಿ ಟೀಮ್​ಗೆ ಸೆಲೆಕ್ಟ್ ಮಾಡಿದ್ರು. 

ರಣಜಿಯಲ್ಲಿ ಖತರ್ನಾಕ್ ಬೌಲಿಂಗ್​ನಿಂದ ಮಿಂಚಿ ಮುಕೇಶ್, ಭಾರತ ಎ ತಂಡಕ್ಕೆ ಆಯ್ಕೆಯಾದ್ರು. ನ್ಯೂಜಿಲೆಂಡ್ ಎ ವಿರುದ್ಧದ ಪಂದ್ಯದಲ್ಲಿ ಮಿಂಚಿ, ಟೀಂ ಇಂಡಿಯಾಗೆ ಎಂಟ್ರಿ ನೀಡಿದ್ರು. ದುರಂತ ಅಂದ್ರೆ ಮಗ ಯಶಸ್ಸನ್ನ ನೋಡಲು ಅವರ ತಂದೆಯೆ ಇಲ್ಲ. ಕಳೆದ ವರ್ಷ ಮುಕೇಶ್​ ತಂದೆಯನ್ನ ಕಳೆದುಕೊಂಡ್ರು. 

2022ರಲ್ಲಿ ನಡೆದ IPL ಮೆಗಾ ಆಕ್ಷನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ಮುಕೇಶ್​​ಗೆ 5 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಳ್ತು. ಈ ಬಾರಿಯ IPL ​ನಲ್ಲಿ ಡೆಲ್ಲಿ ಪರ ಮುಖೇಶ್​ ಟೈಟ್ ಸ್ಪೆಲ್​ಗಳ ಮೂಲಕ ಮಿಂಚಿದ್ರು. ಒಟ್ಟಿನಲ್ಲಿ  ಮುಕೇಶ್ ಲೈಫ್​ ಸ್ಟೋರಿ ನಿಜಕ್ಕೂ ಎಂತವರಿಗೂ ಸ್ಫೂರ್ತಿ. ವಿಂಡೀಸ್ ನಾಡಲ್ಲೂ ಮುಕೇಶ್​ ಅದ್ಭುತ ಪ್ರದರ್ಶನ ನೀಡಲಿ, ಟೀಂ ಇಂಡಿಯಾ ಗೆಲುವಿನಲ್ಲಿ ಮಿಂಚಲಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 World Cup: ಟಾಪ್ 07 ರನ್ ಸರದಾರರಲ್ಲಿ ಭಾರತದ ಏಕೈಕ ಆಟಗಾರ! ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?
U19 World Cup: ಪಾಕಿಸ್ತಾನದ 19 ವರ್ಷಗಳ ಹಳೆಯ ದಾಖಲೆ ಧೂಳೀಪಟ ಮಾಡಿದ ಭಾರತ!