
ಮುಂಬೈ(ನ.19) ಟೀಂ ಇಂಡಿಯಾಗೆ ಸೋಲು ಹೊಸದೇನಲ್ಲ. ಆದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಸೋಲು ಬಿಸಿಸಿಐ ಆಕ್ರೋಶ ಹೆಚ್ಚಿಸಿದೆ. ಹೀಗಾಗಿ ಬಿಸಿಸಿಐ ಹಿಂದೆಂದೂ ಕಾಣದಂತೆ ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ. ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲು ಹಾಗೂ ಟೂರ್ನಿಯುದ್ದಕ್ಕೂ ಭಾರತದ ಪ್ರದರ್ಶನಕ್ಕೆ ಬಿಸಿಸಿಐ ಗರಂ ಆಗಿದೆ. ಈಗಾಗಲೇ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾ ಮಾಡಿದೆ. ಇದೀಗ ಹೊಸ ಆಯ್ಕೆ ಸಮಿತಿಗೆ ಸೂಕ್ತರಿಂದ ಅರ್ಜಿ ಅಹ್ವಾನಿಸಿದೆ. ಹೊಸದಾಗಿ ರಚನೆಯಾಗುವ ಆಯ್ಕೆ ಸಮಿತಿಗೆ ಬಿಸಿಸಿಐ 8 ಜವಾಬ್ದಾರಿ ನೀಡಲಾಗಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲವರು ಮಾತ್ರ ಅರ್ಜಿ ಹಾಕಿದರೆ ಸಾಕು ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ. ಬಿಸಿಸಿಐ ನೀಡಿರುವ 8 ಜವಾಬ್ದಾರಿಗಳು ಈ ಕೆಳಗಿವೆ.
1) ಟೀಂ ಇಂಡಿಯಾಾಗಿ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡುವುದು, ಎಲ್ಲಾ ಆಯ್ಕೆಗಳು ಪಾರದರ್ಶಿಕವಾಗಿರಬೇಕು
2) ಟೀಂ ಇಂಡಿಯಾ ದ ಪ್ಲೇಯಿಂಗ್ 11ನಷ್ಟೇ ಉತ್ತಮ ಹಾಗೂ ಬಲಿಷ್ಠ ಬೆಂಚ್ ಸ್ಟ್ರೆಂತ್ ತಯಾರಿ
3) ಬಿಸಿಸಿಐನ ಎಲ್ಲಾ ಮೀಟಿಂಗ್,ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು
4) ಅಂತಾರಾಷ್ಟ್ರೀಯ ಹಾಗೂ ದೇಶಿ ಟೂರ್ನಿಗೆ ತೆರಳಿ ಆಟಗಾರರ ಪ್ರದರ್ಶನ ಗಮನಿಸಬೇಕು
5) ಪ್ರತಿ ಮೂರು ತಿಂಗಳಿಗೆ ಆಟಗಾರ ಪ್ರದರ್ಶನ, ಆಯ್ಕೆ ಮಾಡಿದ ತಂಡದ ಪ್ರದರ್ಶನ ವರದಿಯನ್ನು ಬಿಸಿಸಿಐಗೆ ನೀಡಬೇಕು, ತಂಡದಲ್ಲಿ ಆಗಬೇಕಿರುವ ಬದಲಾವಣೆ ಮಾಹಿತಿ ನೀಡಬೇಕು
6) ಮಾಧ್ಯಮಕ್ಕೆ ತಂಡದ ಆಯ್ಕೆ ಕುರಿತು ಮಾಹಿತಿ ನೀಡಬೇಕು, ಬಿಸಿಸಿಐ ನಿಯಮದನ್ವಯ ಮಾಹಿತಿ ನೀಡಬೇಕು
7) ಟೆಸ್ಟ್, ಏಕದಿನ ಹಾಗೂ ಟಿ20 ಮೂರು ತಂಡಕ್ಕೆ ಮೂರು ನಾಯಕರ ಆಯ್ಕೆ ಮಾಡಬೇಕ
8) ಬಿಸಿಸಿಐನ ಎಲ್ಲಾ ನಿಯಮ, ನೀತಿಗಳಿಗೆ ಬದ್ಧರಾಗಿರಬೇಕು
ಆಯ್ಕೆ ಸಮಿತಿ ವಜಾ ಬಳಿಕ ಟೀಂ ಇಂಡಿಯಾಗೆ ಸರ್ಜರಿ, ನಾಯಕತ್ವ ಬದಲಾವಣೆಗೆ ಬಿಸಿಸಿಐ ಪ್ಲಾನ್
ಬಿಸಿಸಿಐ ನೀಡಿರುವ ಈ 8 ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲವರು ಅರ್ಜಿ ಹಾಕಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವವರು ಕನಿಷ್ಠ 7 ಟೆಸ್ಟ್ ಅಥವಾ 30 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಇಲ್ಲವೇ ಕನಿಷ್ಠ 10 ಏಕದಿನ ಹಾಗೂ 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು ಎಂದು ಬಿಸಿಸಿಐ ಷರತ್ತು ವಿಧಿಸಿದೆ. ಜೊತೆಗೆ ಕ್ರಿಕೆಟ್ನಿಂದ ನಿವೃತ್ತಿಯಾಗಿ ಕನಿಷ್ಠ 5 ವರ್ಷಗಳಾಗಿರಬೇಕು. ಟಿ20 ಅನುಭವವನ್ನು ಪರಿಗಣಿಸದೆ ಇರುವುದು ಅಚ್ಚರಿ ಮೂಡಿಸಿದೆ.
ಚೇತನ್ ಶರ್ಮಾ, ಹರ್ವಿಂದರ್ ಸಿಂಗ್, ಸುನಿಲ್ ಜೋಶಿ ಹಾಗೂ ದೇಬಾಶಿಶ್ ಮೊಹಂತಿ ಅವರ ಸೇವಾವಧಿ ಮುಕ್ತಾಯಗೊಳ್ಳುವ ಮೊದಲೇ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಸಾಮಾನ್ಯವಾಗಿ ಆಯ್ಕೆ ಸಮಿತಿ 4 ವರ್ಷಗಳ ಅವಧಿ ಹೊಂದಿರಲಿದೆ. ಇದೇ ವೇಳೆ ಆಯ್ಕೆ ಸಮಿತಿ ಸದಸ್ಯರ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನ.28 ಕೊನೆ ದಿನವಾಗಿದೆ.
ಟಿ20 ವಿಶ್ವಕಪ್ ಸೋಲಿಗೆ ತಲೆದಂಡ, ಮುಖ್ಯಸ್ಥ ಸೇರಿ ಟೀಂ ಇಂಡಿಯಾ ಆಯ್ಕೆ ಸಮತಿ ವಜಾ
ಭಾರತ ಟಿ20 ತಂಡಕ್ಕೆ ಧೋನಿ ನಿರ್ದೇಶಕ?
ಟಿ20 ವಿಶ್ವಕಪ್ನಲ್ಲಿ ವೈಫಲ್ಯ ಅನುಭವಿಸಿದ ಭಾರತ ತಂಡದಲ್ಲಿ ಸುಧಾರಣೆ ತರಲು ಯೋಜನೆ ರೂಪಿಸುತ್ತಿರುವ ಬಿಸಿಸಿಐ, ತಂಡಕ್ಕೆ ಮಾಜಿ ನಾಯಕ ಎಂ.ಎಸ್.ಧೋನಿ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.